More

    PHOTOS| ವಿಜಯಾನಂದ ಸಿನಿಮಾ ಮುಹೂರ್ತ ಕಾರ್ಯಕ್ರಮದ ಕಲರ್​ಫುಲ್​ ಫೋಟೋ ಝಲಕ್​

    ಹುಬ್ಬಳ್ಳಿ: ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾದ ಮುಹೂರ್ತ ಇಂದು (ಅ. 24) ಅದ್ಧೂರಿಯಾಗಿ ನೆರವೇರಿದೆ. ಹುಬ್ಬಳ್ಳಿ ಸಮೀಪದ ವರೂರಿನ ವಿಆರ್​ಎಲ್​ ಕ್ಯಾಂಪಸ್​ನಲ್ಲಿ ಮುಹೂರ್ತ ಕಾರ್ಯಕ್ರಮ ನಡೆಯಿತು. ಶ್ರೀಮತಿ ಲಲಿತಾ ಸಂಕೇಶ್ವರ, ಶ್ರೀಮತಿ ವಾಣಿ ಸಂಕೇಶ್ವರ, ನಟಿ ವಿನಯಾ ಪ್ರಸಾದ, ನಿರ್ದೇಶಕಿ ರಿಶಿಕಾ ಶರ್ಮಾ ಹಾಗೂ ವಿಜಯಾನಂದ ಚಿತ್ರದ ನಾಯಕಿ ಸಿರಿ ಪ್ರಹ್ಲಾದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಅದ್ಧೂರಿ ಕಾರ್ಯಕ್ರಮಕ್ಕೆ ಗಣ್ಯರ ಆಗಮನ ಮತ್ತಷ್ಟು ಮೆರಗು ನೀಡಿತು. ಹಿರಿಯ ನಟ ಅನಂತ್ ನಾಗ್, ‘ಕ್ರೇಜಿಸ್ಟಾರ್’ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ನಟಿ ವಿನಯಾ ಪ್ರಸಾದ್ ಸೇರಿ ಹಲವರು ಮುಹೂರ್ತದಲ್ಲಿ ಭಾಗವಹಿಸುವ ಮೂಲಕ ವಿಜಯಾನಂದ ಚಿತ್ರಕ್ಕೆ ಶುಭ ಕೋರಿದರು. ಗಣೇಶ್​ ಅವರು ಚಿತ್ರಕ್ಕೆ ಕ್ಲ್ಯಾಪ್​ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇಂದು ನಡೆದ ಅದ್ಧೂರಿ ಕಾರ್ಯಕ್ರಮದ ಫೋಟೋ ಝಲಕ್​ ಇಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts