More

    ರಾಜಾಜಿನಗರದಲ್ಲಿರುವ ನೆಚ್ಚಿನ ಮನೆ ಖಾಲಿ ಮಾಡಿದ್ದನ್ನು ನೆನೆದು ವೇದಿಕೆಯಲ್ಲೇ ಭಾವುಕರಾಗಿ ಮಾತನಾಡಿದ ರವಿಚಂದ್ರನ್​

    ಬೆಂಗಳೂರು: ನಗರದ ರಾಜಾಜಿನಗರದಲ್ಲಿರುವ ತಮ್ಮ ಪ್ರೀತಿಯ ಮನೆಯನ್ನು ಖಾಲಿ ಮಾಡಿದ್ದರ ಬಗ್ಗೆ ಮಾತನಾಡಿ, ಮೊದಲ ಬಾರಿಗೆ ವೇದಿಕೆ ಮೇಲೆಯೇ ನಟ ರವಿಚಂದ್ರನ್​ ತುಂಬಾ ಭಾವುಕರಾದರು.

    ಕಾಮಿಡಿ ಕಿಲಾಡಿಗಳು ಶೋ ವೇದಿಕೆಯಲ್ಲಿ ಮಾತನಾಡಿದ ರವಿಚಂದ್ರನ್​, ಒಂದು ತಿಂಗಳ ಹಿಂದೆ ನಾನು ಮನೆ ಖಾಲಿ ಮಾಡಿದೆ. ದುಡ್ಡು ಕಳೆದುಕೊಂಡು ಮನೆ ಮಾರಿದ ಎಂದು ಎಲ್ಲರು ಮಾತನಾಡಿಕೊಂಡರು. ಆದರೆ, ನಾನು ದುಡ್ಡನ್ನು ಇಂದು ಕಳೆದಿದ್ದಲ್ಲ. 30 ವರ್ಷದಿಂದಲೂ ಕಳೆದುಕೊಂಡೆ ಬಂದಿದ್ದೇನೆ. ಕಳೆದುಕೊಂಡೇ ನಗುತ್ತಾ ಬಂದಿದ್ದೇನೆ. ಆದರೆ, ಈವರೆಗೂ ನಿಮಗೆ ಯಾರಿಗೂ ಅರ್ಥವಾಗಿಲ್ಲ. ನಾನು ಕಳೆದುಕೊಂಡಿರುವುದೆಲ್ಲ ನಿಮಗಾಗಿ. ನಿಮ್ಮ ಮನಸ್ಸನ್ನು ಗೆಲ್ಲುವುದಕ್ಕಾಗಿ ಎಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೇನೆ. ಆದರೆ, ನನಗೆ ಬೇಸರ ಇಲ್ಲ. ಮತ್ತೆ ಗೆಲ್ಲುತ್ತೇನೆ ಎಂಬ ಆವೇಶ ಎಂದಿಗೂ ಕಡಿಮೆ ಆಗುವುದಿಲ್ಲ ಎಂದರು.

    ಯಾರು ಏನೇ ಮಾಡಲಿ, ರವಿಚಂದ್ರನ್​, ರವಿಚಂದ್ರನ್​ನನ್ನೇ ಗೆಲ್ಲುವುದಕ್ಕೆ ಆಗುತ್ತಿಲ್ಲ. ನಾನು ಇನ್ಯಾರಿಗೋ ಸ್ಪರ್ಧಾಳುವಲ್ಲ. ನಾನು ಯಾರನ್ನೂ ಗೆಲ್ಲಬೇಕಾಗಿಲ್ಲ. ನನ್ನನ್ನು ನಾನೇ ಮತ್ತೆ ಗೆಲ್ಲಬೇಕಿದೆ. ನಾನು ದುಡ್ಡನ್ನು ದುಡಿದೂ ಇಲ್ಲ. ನನಗೆ ದುಡ್ಡು ಬೇಕಾಗೂ ಇಲ್ಲ. ಆದರೆ, ನನಗೆ ದುಡ್ಡು ಬೇಕಿರುವುದು ಸಿನಿಮಾ ಮಾಡೋದಕ್ಕೆ. ಅದೊಂದೆ ಕಾರಣಕ್ಕೆ ಇವತ್ತಿಗೂ ನಾನಿಲ್ಲಿ ಬಂದು ಕುಳಿತಿದ್ದೇನೆ. ನಾನು ಸಂಪಾದನೆ ಮಾಡುವುದು ರಾಯಲ್​ ಆಗಿ ಬದುಕುವುದಕ್ಕಲ್ಲ, ರಾಯಲ್​ ಆಗಿ ಸಿನಿಮಾ ಮಾಡೋದಕ್ಕೆ ಎಂದು ಹೇಳಿದರು.

    ಒಂದು ತಿಂಗಳಿಂದ ನನ್ನನ್ನು ನಾನು ಬದಲಾಯಿಸಿಕೊಳ್ಳಬೇಕು ಅನಿಸಿದೆ. ಸಿನಿಮಾ ಸೋತಿದ್ದರಿಂದ ನನಗೆ ಬೇಜಾರಾಯಿತು ಅಂತ ನಿಮಗೆ ಅನಿಸಿದರೆ ಅದು ಸುಳ್ಳು. ನಾನು ನಿಮ್ಮನ್ನು ಮೆಚ್ಚಿಸಲು ಆಗಲಿಲ್ವಲ್ಲ ಎಂದು ನನಗೆ ಬೇಸರವಾಗುತ್ತದೆ. ನನ್ನ ಸಿನಿಮಾಗೆ ನಿಮಗೆಲ್ಲ ನುಗ್ಗಿ ಅಭ್ಯಾಸ. ಆ ದಿನ ಬಂದೇ ಬರುತ್ತದೆ. ಆ ಸಿನಿಮಾ ಮಾಡೇ ಮಾಡುತ್ತೀನಿ. ಆಗ ನೀವೆಲ್ಲ ನನ್ನ ಸಿನಿಮಾ ನುಗ್ಗುತ್ತೀರಾ. ಇದು ನಾನು ನಿಮಗೆ ಕೊಡುವ ಮಾತು ಎಂದರು.

    ನಾನು ಯಾರಿಗೆ ದಿವಸಕ್ಕೆ ಸಂಬಳ ಕೊಟ್ಟು ಇಟ್ಟುಕೊಂಡಿದ್ದನೋ ಅವನು ನನಗೆ ಒಂದೂವರೆ ಕೋಟಿ ಕೊಟ್ಟು ಅವರ ಸಿನಿಮಾದಲ್ಲಿ ನಟಿಸುವಂತೆ ಕೇಳುವ ದೊಡ್ಡ ಮಟ್ಟಕ್ಕೆ ನನ್ನ ಜೊತೆಯಲ್ಲಿ ಇದ್ದವರು ಬೆಳೆದಿದ್ದಾರೆ. ಮಾತಾಡಿದರೆ ಪ್ರೇಮಲೋಕ ಮತ್ತು ರಣಧೀರ ಬಗ್ಗೆ ಮಾತನಾಡುತ್ತಾರೆ ಅಂತಾ ನನಗೆ ಎಷ್ಟೋ ಜನ ಹೇಳಿದ್ದಾರೆ. ಹುಟ್ಟಿಸಿದ ಅಪ್ಪ-ಅಮ್ಮನ ಯಾರಾದರೂ ಬದಲಾಯಿಸಲು ಆಗುತ್ತದೇನ್ರಿ, ಯಾರು ಬದಲಾಯಿಸಲು ಆಗುತ್ತದೆ. ಅದೇ ಸಿನಿಮಾಗಳನ್ನು ನನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದು ನಿಲ್ಲಿಸಿದೆ ಎಂದು ತಿರುಗೇಟು ನೀಡಿದರು.

    ನನ್ನ ಜೀವನದಲ್ಲಿ ಭಯ ಅನ್ನೋದು ಎಂದಿಗೂ ಬರಲಿಲ್ಲ. ಆದರೆ, ಮೊದಲ ಬಾರಿಗೆ ಭಯ ಅನ್ನೋದು ಕಾಡುತ್ತಿದೆ. ನಮ್ಮ ಮಕ್ಕಳಿಗೆ ಏನು ಮಾಡಿಲ್ಲ ಅಂತಾ ಭಯ ಆಗ್ತಿದೆ. ನಾನು ಆಗ ಮನಸ್ಸು ಮಾಡಿದ್ರೇ ಆಸ್ತಿ ಮಾಡಬಹುದಿತ್ತು. ಆದರೆ, ನನಗೆ ಸಿನಿಮಾವೇ ಪ್ರಪಂಚವಾಗಿತ್ತು. ನೀವು ನನ್ನ ಮುಖ ಮತ್ತು ಮನಸ್ಸು ನೋಡಿ ಪ್ರೀತಿ ಮಾಡಿ, ಜೀವನ ಪೂರ್ತಿ ನಿಮ್ಮ ಕಾಲಡಿಯಲ್ಲಿ ಬಿದ್ದಿರುತ್ತೇನೆ ಎಂದು ತುಂಬಾ ಭಾವುಕರಾಗಿ ರವಿಚಂದ್ರನ್​ ಮಾತನಾಡಿದರು.

    ಮುಸ್ಲಿಮರೇ ಹೆಚ್ಚಾಗಿ ಕಾಂಡೋಮ್​ ಬಳಸುತ್ತಿರುವುದು: ಮೋಹನ್​ ಭಾಗವತ್​ ಹೇಳಿಕೆಗೆ ಓವೈಸಿ ತಿರುಗೇಟು

    VIDEO| ಗಂಧದ ಗುಡಿ ಟ್ರೈಲರ್​ಗೆ ಮೋದಿ ಮೆಚ್ಚುಗೆ: ಅಪ್ಪುವಿನ ಕೊನೆಯ ಪ್ರಯತ್ನಕ್ಕೆ ಶುಭಕೋರಿದ ಪ್ರಧಾನಿ

    ಗರ್ಲ್​ಫ್ರೆಂಡ್​ ಮತ್ತು ಆಕೆಯ ತಾಯಿಯೊಂದಿಗೆ ವಿವಾಹೇತರ ಸಂಬಂಧ: ಕೊಲೆಯಾದ ಯುವಕನ ದುರಂತ ಕತೆಯಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts