ಚೆನ್ನೈ: ರಸ್ತೆಯಲ್ಲಿ ಉಗುಳಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಪೊಲೀಸ್ ಕಾನ್ಸ್ಟೇಬಲ್ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಜಯಚಂದ್ರನ್ ಎಂದು ಗುರುತಿಸಲಾಗಿದೆ. ತುಟಿ ಕಿತ್ತು ಹೋಗಿದ್ದು, ಗಲ್ಲದಲ್ಲಿ ಗಾಯಗಳಾಗಿವೆ. ಸಂತ್ರಸ್ತ ಜಯಚಂದ್ರನ್ ಸರ್ಕಾರಿ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾನ್ಸ್ಟೇಬಲ್ ಲೂಯಿಸ್ ಹಲ್ಲೆ ಮಾಡಿದರೆಂದು ಆರೋಪ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ಪೊಲೀಸರು ಜಯಚಂದ್ರನನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸುತ್ತಿರುವುದು ಮತ್ತು ಘಟನೆಯ ಸ್ಥಳದಿಂದ ಅವರನ್ನು ಕರೆದೊಯ್ಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ರಸ್ತೆಯಲ್ಲಿ ಉಗುಳಿದ್ದಕ್ಕೆ ಸುಮಾರು ಒಂದು ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಜಯಚಂದ್ರನ್ ಆರೋಪ ಮಾಡಿದ್ದಾರೆ.
ಆದರೆ, ಜಯಚಂದ್ರನ್ ಮಾಡಿದ ಆರೋಪವನ್ನು ಕಾನ್ಸ್ಟೇಬಲ್ ನಿಕಾರಿಸಿದ್ದಾರೆ. ಅಲ್ಲದೆ, ಆತ ಉಗುಳಿದ್ದು ರಸ್ತೆಯ ಮೇಲಲ್ಲ, ನನ್ನ ಮೇಲೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಾನ್ಸ್ಟೇಬಲ್ ಲೂಯಿಸ್, ಸಂತ್ರಸ್ತನಿಗೆ ಬೆದರಿಕೆ ಹಾಕುತ್ತಿರುವುದು ಸೆರೆಯಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯ ನಿವಾಸಿಗಳು ಪೊಲೀಸರನ್ನು ಪ್ರಶ್ನಿಸಿದರು. ಇದಾದ ಬಳಿಕ ಪೊಲೀಸರು ಗುಂಪನ್ನು ಚದುರಿಸಿದರು. ಈ ಸಂಬಂಧ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. (ಏಜೆನ್ಸೀಸ್)
ಹಿಂದು ಯುವಕ-ಮುಸ್ಲಿಂ ಯುವತಿಯ ಲವ್ ಸ್ಟೋರಿ: ಮದುವೆಯಾದ ಬಳಿಕ ನಡೀತು ಭಾರೀ ಹೈಡ್ರಾಮಾ!
ರೈಲು ಡಿಕ್ಕಿ ಹೊಡೆದ ರಭಸಕ್ಕೆ ನದಿಗೆ ಬಿದ್ದ ಯುವತಿ: ಬಾಯ್ಫ್ರೆಂಡ್ ಜತೆಗಿನ ವೀಕೆಂಡ್ ಮೋಜು ದುರಂತ ಅಂತ್ಯ
ಇನ್ನೊಂದಿಷ್ಟು ಇಲ್ಲಿವೆ…ಮತ್ತಷ್ಟು ಹಾಟ್ ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಸವಾಲೆಸೆದ ಇರಾ ಖಾನ್!
ಮೇ 18 ರಿಂದ ರಾಜ್ಯದಲ್ಲಿ ಭಾರೀ ಮಳೆ: ಕರಾವಳಿ, ಮಲೆನಾಡಲ್ಲಿ ಆರೆಂಜ್ ಅಲರ್ಟ್