ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಸಾವಿರ ಕೋಟಿ ರೂಪಾಯಿ ದಾಟಿದ ಕನ್ನಡದ ಮೊದಲ ಹಾಗೂ ಭಾರತದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೆಜಿಎಫ್-2 ಚಿತ್ರದ ಗೆಲುವಿನ ಒತ್ತಡ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಮೇಲೆ ಬಿದ್ದಿದೆ ಎಂಬ ಮಾತುಗಳು ಕೇಳಿಬಂದಿತ್ತು. ಪುಷ್ಪ ಚಿತ್ರದ ಸ್ಕ್ರಿಪ್ಟ್ ಅನ್ನು ಸುಕುಮಾರ್ ಬದಲಾಯಿಸಲಿದ್ದಾರೆ ಎಂಬ ಚರ್ಚೆಯು ನಡೆದಿತ್ತು. ಇದೀಗ ಅದಕ್ಕೆ ನಿರ್ಮಾಪಕ ವೈ. ರವಿಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಸ್ಕ್ರಿಪ್ಟ್ ಬದಲಿಸುವ ಅವಶ್ಯಕತೆಯೇ ಇಲ್ಲ. ಕೆಜಿಎಫ್-2 ನಮ್ಮ ಪುಷ್ಪ-2 ಮೇಲೆ ಪರಿಣಾಮ ಬೀರುವಂಥದ್ದು ಏನು ಮಾಡಿದೆ? ಎನ್ನುವ ಅಚ್ಚರಿ ಹೇಳಿಕೆ ನೀಡಿದ ರವಿಶಂಕರ್, ಖಂಡಿತವಾಗಿಯು ಯಾವುದೇ ಬದಲಾವಣೆ ಇರುವುದಿಲ್ಲ. ಈಗಾಗಲೇ ನಮ್ಮ ಕೈಯಲ್ಲಿ ಹೈವೋಲ್ಟೇಜ್ ಸ್ಕ್ರೀಪ್ಟ್ ಇರುವಾಗ ನಾವ್ಯಾಕೆ ಸ್ಕ್ರಿಪ್ಟ್ ಬಲಾಯಿಸಬೇಕು? ಸುಕುಮಾರ್ ಅವರು ಮೊದಲೇ ಹೈವೋಲ್ಟೇಜ್ ಸ್ಕ್ರಿಪ್ಟ್ ಮಾಡಿಟ್ಟಿದ್ದಾರೆ. ಅದನ್ನು ಸುಂದರವಾಗಿ ಪ್ರಸ್ತುತ ಪಡಿಸುತ್ತೇವೆ. ಕಳೆದ ಒಂದೂವರೆ ತಿಂಗಳಿಂದ ಸ್ಥಳಾನ್ವೇಷಣೆ ಕೆಲಸ ನಡೆಯುತ್ತಿದೆ. ಮೊದಲನೇ ಭಾಗದಲ್ಲಿ ಶೂಟ್ ಮಾಡಿದ ಅರಣ್ಯದಲ್ಲೇ ಶೂಟ್ ಮಾಡುತ್ತೇವೆ ಎಂದು ನಿರ್ಮಾಪಕ ವೈ. ರವಿಶಂಕರ್ ತಿಳಿಸಿದ್ದಾರೆ.
ಪುಷ್ಪ 2ರಲ್ಲಿ ಜೀವನಕ್ಕಿಂತ ದೊಡ್ಡದಾದ ಕೆಲವು ಆಕ್ಷನ್ ಸೀಕ್ವೆನ್ಸ್ಗಳನ್ನು ಮಾಡಲು ನಿರ್ಮಾಪಕರು ತಯಾರಾಗಿದ್ದಾರೆ. ಅಲ್ಲು ಅರ್ಜುನ್ ಮತ್ತು ಫಾಹದ್ ಫಾಸಿಲ್ ನಡುವೆ ಬಹುದೊಡ್ಡ ಆ್ಯಕ್ಷನ್ ಸೀಕ್ವೆನ್ಸ್ ಇರಲಿದೆ. ಭಾಗ 1 ರಲ್ಲಿ ಪ್ರೇಕ್ಷಕರು ನೋಡಿದ ದೃಶ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದೃಶ್ಯಗಳು ಎರಡನೇ ಭಾಗದಲ್ಲಿ ಇರುತ್ತವೆ ಎಂದು ಮೂಲಗಳು ತಿಳಿಸಿವೆ. ಎರಡನೇ ಭಾಗವು ಜುಲೈನಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. (ಏಜೆನ್ಸೀಸ್)
ಬಸ್ ಚಾಲಕನನ್ನು ಪ್ರೀತಿಸಿ ಮದುವೆಯಾದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್!
ಚಿಕನ್ ಶೋರ್ಮಾ ತಿಂದ ಮರುದಿನವೇ ವಿದ್ಯಾರ್ಥಿನಿ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ
ಮದ್ಯದ ಅಮಲಿನಲ್ಲಿ ಮಹಿಳಾ ಅಧಿಕಾರಿ ಕೊಟ್ಟ ಕಾಟಕ್ಕೆ ಹೈರಾಣಾದ ಪೊಲೀಸರು: ವಿಡಿಯೋ ವೈರಲ್!