More

    ನೋ ವೇ.. ಚಾನ್ಸೇ.. ಇಲ್ಲ! ಕೆಜಿಎಫ್​-2 ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪುಷ್ಪ-2 ಚಿತ್ರದ ನಿರ್ಮಾಪಕ

    ಬೆಂಗಳೂರು​: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಸಾವಿರ ಕೋಟಿ ರೂಪಾಯಿ ದಾಟಿದ ಕನ್ನಡದ ಮೊದಲ ಹಾಗೂ ಭಾರತದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೆಜಿಎಫ್​-2 ಚಿತ್ರದ ಗೆಲುವಿನ ಒತ್ತಡ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್​ ಮೇಲೆ ಬಿದ್ದಿದೆ ಎಂಬ ಮಾತುಗಳು ಕೇಳಿಬಂದಿತ್ತು. ಪುಷ್ಪ ಚಿತ್ರದ ಸ್ಕ್ರಿಪ್ಟ್​ ಅನ್ನು ಸುಕುಮಾರ್​ ಬದಲಾಯಿಸಲಿದ್ದಾರೆ ಎಂಬ ಚರ್ಚೆಯು ನಡೆದಿತ್ತು. ಇದೀಗ ಅದಕ್ಕೆ ನಿರ್ಮಾಪಕ ವೈ. ರವಿಶಂಕರ್​ ಸ್ಪಷ್ಟನೆ ನೀಡಿದ್ದಾರೆ.

    ಸ್ಕ್ರಿಪ್ಟ್​ ಬದಲಿಸುವ ಅವಶ್ಯಕತೆಯೇ ಇಲ್ಲ. ಕೆಜಿಎಫ್-2 ನಮ್ಮ ಪುಷ್ಪ-2 ಮೇಲೆ ಪರಿಣಾಮ ಬೀರುವಂಥದ್ದು ಏನು ಮಾಡಿದೆ? ಎನ್ನುವ ಅಚ್ಚರಿ ಹೇಳಿಕೆ ನೀಡಿದ ರವಿಶಂಕರ್​,​ ಖಂಡಿತವಾಗಿಯು ಯಾವುದೇ ಬದಲಾವಣೆ ಇರುವುದಿಲ್ಲ. ಈಗಾಗಲೇ ನಮ್ಮ ಕೈಯಲ್ಲಿ ಹೈವೋಲ್ಟೇಜ್​ ಸ್ಕ್ರೀಪ್ಟ್​ ಇರುವಾಗ ನಾವ್ಯಾಕೆ ಸ್ಕ್ರಿಪ್ಟ್​ ಬಲಾಯಿಸಬೇಕು? ಸುಕುಮಾರ್​ ಅವರು ಮೊದಲೇ ಹೈವೋಲ್ಟೇಜ್​ ಸ್ಕ್ರಿಪ್ಟ್​ ಮಾಡಿಟ್ಟಿದ್ದಾರೆ. ಅದನ್ನು ಸುಂದರವಾಗಿ ಪ್ರಸ್ತುತ ಪಡಿಸುತ್ತೇವೆ. ಕಳೆದ ಒಂದೂವರೆ ತಿಂಗಳಿಂದ ಸ್ಥಳಾನ್ವೇಷಣೆ ಕೆಲಸ ನಡೆಯುತ್ತಿದೆ. ಮೊದಲನೇ ಭಾಗದಲ್ಲಿ ಶೂಟ್​ ಮಾಡಿದ ಅರಣ್ಯದಲ್ಲೇ ಶೂಟ್ ಮಾಡುತ್ತೇವೆ ಎಂದು ನಿರ್ಮಾಪಕ ವೈ. ರವಿಶಂಕರ್​ ತಿಳಿಸಿದ್ದಾರೆ.

    ಪುಷ್ಪ 2ರಲ್ಲಿ ಜೀವನಕ್ಕಿಂತ ದೊಡ್ಡದಾದ ಕೆಲವು ಆಕ್ಷನ್ ಸೀಕ್ವೆನ್ಸ್‌ಗಳನ್ನು ಮಾಡಲು ನಿರ್ಮಾಪಕರು ತಯಾರಾಗಿದ್ದಾರೆ. ಅಲ್ಲು ಅರ್ಜುನ್ ಮತ್ತು ಫಾಹದ್ ಫಾಸಿಲ್ ನಡುವೆ ಬಹುದೊಡ್ಡ ಆ್ಯಕ್ಷನ್​ ಸೀಕ್ವೆನ್ಸ್​ ಇರಲಿದೆ. ಭಾಗ 1 ರಲ್ಲಿ ಪ್ರೇಕ್ಷಕರು ನೋಡಿದ ದೃಶ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದೃಶ್ಯಗಳು ಎರಡನೇ ಭಾಗದಲ್ಲಿ ಇರುತ್ತವೆ ಎಂದು ಮೂಲಗಳು ತಿಳಿಸಿವೆ. ಎರಡನೇ ಭಾಗವು ಜುಲೈನಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಬಸ್​ ಚಾಲಕನನ್ನು ಪ್ರೀತಿಸಿ ಮದುವೆಯಾದ ಇಂಜಿನಿಯರಿಂಗ್​ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್​!

    ಚಿಕನ್​ ಶೋರ್ಮಾ ತಿಂದ ಮರುದಿನವೇ ವಿದ್ಯಾರ್ಥಿನಿ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    ಮದ್ಯದ ಅಮಲಿನಲ್ಲಿ ಮಹಿಳಾ ಅಧಿಕಾರಿ ಕೊಟ್ಟ ಕಾಟಕ್ಕೆ ಹೈರಾಣಾದ ಪೊಲೀಸರು: ವಿಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts