ಹೈದರಾಬಾದ್: ಖದೀಮನೊಬ್ಬ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಮಂಗಳವಾರ ರಾತ್ರಿ ಜುಬಿಲಿ ಹಿಲ್ಸ್ನಲ್ಲಿರುವ ಮಹೇಶ್ ಬಾಬು ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಖದೀಮನನ್ನು ಕೃಷ್ಣ ಎಂದು ಗುರುತಿಸಲಾಗಿದೆ. ಈತ ಮೂರು ದಿನಗಳ ಹಿಂದಷ್ಟೇ ಒಡಿಶಾದಿಂದ ಹೈದರಾಬಾದ್ಗೆ ಬಂದಿದ್ದ. ಮಹೇಶ್ ಬಾಬು ಅವರ ನಿವಾಸದ ಸುತ್ತ ಸುಮಾರು 30 ಅಡಿ ಎತ್ತರವಿರುವ ಕಾಪೌಂಡ್ ಏರಿದ ಖದೀಮ, ಕಳಗೆ ಜಿಗಿದು, ಕಾಲು ನೋವು ಮಾಡಿಕೊಂಡು ಒದ್ದಾಡುತ್ತಿದ್ದ.
ಏನೋ ಶಬ್ಧ ಕೇಳಿಬಂದಿದ್ದರಿಂದ ಆ ಕಡೆ ಹೋಗಿ ನೋಡಿದಾಗ ಸೆಕ್ಯುರಿಟಿ ಸಿಬ್ಬಂದಿ ಕಣ್ಣಿಗೆ ಖದೀಮ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಸೆಕ್ಯುರಿಟಿ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಖದೀಮನನ್ನು ವಶಕ್ಕೆ ಪಡೆದು, ಆತನನ್ನು ಒಸ್ಮಾನಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಮಹೇಶ್ ಬಾಬು ಅವರು ಮನೆಯಲ್ಲಿದ್ದರು ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ.
ಮಹೇಶ್ ಬಾಬುಗೆ ಮಾತೃ ವಿಯೋಗ
ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ (70) ಅವರು ಬುಧವಾರ ಹೈದರಾಬಾದ್ನ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾದರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಇಂದಿರಾ ದೇವಿ ಅವರು ಪತಿ ಕೃಷ್ಣ ಮತ್ತು ಪುತ್ರಿಯರಾದ ಪದ್ಮಾವತಿ, ಮಂಜುಳಾ, ಪ್ರಿಯದರ್ಶಿನಿ ಮತ್ತು ಪುತ್ರ ಮಹೇಶ್ ಬಾಬು ಅವರನ್ನು ಅಗಲಿದ್ದಾರೆ. ಅವರ ಹಿರಿಯ ಮಗ ರಮೇಶ್ ಬಾಬು ಈ ವರ್ಷದ ಜನವರಿಯಲ್ಲಿ ನಿಧನರಾದರು. (ಏಜೆನ್ಸೀಸ್)
ಬಾರ್ಗರ್ಲ್ಗೆ 80 ಲಕ್ಷ ರೂ. ಕೊಟ್ಟು ರೇಪ್ ಕೇಸ್ನಿಂದ ಕೈತೊಳೆದುಕೊಂಡ ಸಚಿವನ ಪುತ್ರ! ಕೋರ್ಟ್ ಅಸ್ತು
ಡಿಕೆಶಿಗೆ ಮತ್ತೆ ಸಿಬಿಐ ಶಾಕ್: ಗೇಟ್ಗೆ ಬೀಗ ಜಡಿದು ಕುಳಿತ ತಾಯಿ- ಶಿವಕುಮಾರ್ ಏನು ಹೇಳಿದ್ರು ಕೇಳಿ…
ಮದ್ವೆಯಾಗಲಿ, ಆಗದೇ ಇರಲಿ… ಗರ್ಭಪಾತಕ್ಕೆ ಸಂಬಂಧಿಸಿದಂತೆ ಸುಪ್ರೀಂನಿಂದ ಹೊರಟಿತು ಮಹತ್ವದ ತೀರ್ಪು