More

    ಈ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ​ ನೀಲ್​! ಕೆಜಿಎಫ್​ ನಿರ್ದೇಶಕರ ವಿರುದ್ಧ ಅಭಿಮಾನಿಗಳ ಅಸಮಾಧಾನ

    ಹೈದರಾಬಾದ್​: ಕೆಜಿಎಫ್​ ಚಾಪ್ಟರ್​ 1 ಮತ್ತು 2 ಅದ್ಭುತ ಯಶಸ್ಸಿನ ಬಳಿಕ ನಿರ್ದೇಶಕ ಪ್ರಶಾಂತ್​ ನೀಲ್​ಗೆ ಹೆಚ್ಚು ಬೇಡಿಕೆ ಬಂದಿದೆ. ನಮಗೆ ಸಿನಿಮಾ ಮಾಡಿಕೊಡಿ ಅಂತಾ ಸ್ಟಾರ್​ ನಟರೇ ಪ್ರಶಾಂತ್​ ನೀಲ್​ ಹಿಂದೆ ಬಿದ್ದಿದ್ದಾರೆ. ಈಗಾಗಲೇ ಟಾಲಿವುಡ್​ನ ಇಬ್ಬರು ಸ್ಟಾರ್​ ನಟರಿಗೆ ನೀಲ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

    ಪ್ರಭಾಸ್​ ಅಭಿನಯದ ಸಲಾರ್​ ಮತ್ತು ಜೂನಿಯರ್​ ಎನ್​ಟಿಆರ್​ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ನೀಲ್​ ನಿರ್ದೇಶನವಿರಲಿದೆ. ಈಗಾಗಲೇ ಸಲಾರ್​ ಚಿತ್ರದ ಚಿತ್ರೀಕರಣ ಅರ್ಧ ಮುಗಿದಿದೆ. ಒಂದೆಡೆ ಕೆಜಿಎಫ್​ ಸೂಪರ್​ ಸಕ್ಸಸ್​ ಕಂಡರೂ ಇದೀಗ ಪ್ರಭಾಸ್​ ಮತ್ತು ಎನ್​ಟಿಆರ್​ ಅಭಿಮಾನಿಗಳಿಗೆ ಮನವರಿಕೆಯಾಗಿದ್ದು, ನೀಲ್​ ನಿರ್ದೇಶನದ ಮೇಲೆ ತುಂಬಾ ಚಿಂತಾಕ್ರಾಂತರಾಗಿದ್ದಾರೆ.

    ಕೆಜಿಎಫ್​ನ ಎರಡು ಭಾಗವನ್ನು ಡಾರ್ಕ್​ ಶೇಡ್​ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲಿವೇಶನ್​ ದೃಶ್ಯ ಮತ್ತು ಖಡಕ್​ ಚಿತ್ರಕತೆ ಹಾಗೂ ಹೀರೋ ಕೇಂದ್ರಿತ ಅಬ್ಬರದ ಡೈಲಾಗ್​ಗಳು ಕೆಜಿಎಫ್​ ಚಿತ್ರ ಪ್ರಮುಖ ಭಾಗವಾಗಿತ್ತು. ಇದೀಗ ಸಲಾರ್​ ಚಿತ್ರದ ಶೂಟಿಂಗ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಫೋಟೋ ನೋಡಿದವರಿಗೆ ಕೆಜಿಎಫ್​ ಚಿತ್ರದ ಛಾಯೆ ಕಾಣುತ್ತಿದೆ.

    ಇನ್ನು ಜೂನಿಯರ್​ ಎನ್​ಟಿಆರ್​ ಹುಟ್ಟುಹಬ್ಬದ ದಿನವೂ ಪ್ರಶಾಂತ್​ ನೀಲ್​ ಚಿತ್ರ ಘೋಷಣೆ ಮಾಡಿದ್ದಾರೆ. ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆ ಮಾಡಿದ್ದು, ಅದರಲ್ಲೂ ಪ್ರಶಾಂತ್​ ನೀಲ್​​ ಎಂದಿನಂತೆ ತಮ್ಮ ಡಾರ್ಕ್​ ಶೇಡ್​ ಅನ್ನು ಮುಂದುವರಿಸಿದ್ದಾರೆ. ನೀಲ್​ ಅವರ ಮೊದಲ ಚಿತ್ರ ಉಗ್ರಂನಲ್ಲೂ ಕೂಡ ಡಾರ್ಕ್​ ಶೇಡ್​ ಇತ್ತು. ತಮ್ಮ ಎಲ್ಲ ಚಿತ್ರಗಳಲ್ಲೂ ಪ್ರಶಾಂತ್​ ನೀಲ್​ ಡಾರ್ಕ್​ ಶೇಡ್​ಗೆ ಒತ್ತು ಕೊಡುತ್ತಿರುವುದನ್ನು ನೋಡಿ ನೀಲ್​ ಅಭಿಮಾನಿಗಳಿಗೆ ಚಿಂತೆ ಕಾಡುತ್ತಿದೆ.

    ಪ್ರತಿಭಾವಂತ ನಿರ್ದೇಶಕ ನೀಲ್​ ಅಭಿಮಾನಿಗಳು ಈಗ ಈ ಮೇಲಿನ ಅಂಶಗಳ ಬಗ್ಗೆ ಕಾಳಜಿ ವಹಿಸುವಂತೆ ನೀಲ್​ ಅವರನ್ನು ವಿನಂತಿಸುತ್ತಿದ್ದಾರೆ. ಏಕೆಂದರೆ ಎಲ್ಲ ಸಮಯದಲ್ಲೂ ಅದೇ ಡಾರ್ಕ್ ಶೇಡ್​ ಮತ್ತು ಎಲಿವೇಶನ್ ಶಾಟ್‌ಗಳು ಕೈಹಿಡಿಯುವುದಿಲ್ಲ. ಒಂದು ಹಂತದವರೆಗೆ ನಡೆಯಬಹುದು. ಆದರೆ, ಆ ನಂತರ ಅದೇ ಜನರಿಗೆ ಬೇಸರ ತರಬಹುದು ಎಂದಿದ್ದಾರೆ. (ಏಜೆನ್ಸೀಸ್​)

    ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿ ನಾಯಿಯಂತೆ ಬದಲಾದ ವ್ಯಕ್ತಿ! ಕಾರಣ ಕೇಳಿದ್ರೆ ಹುಬ್ಬೇರಿಸುತ್ತೀರಾ!

    ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಶೆಟ್ಟಿ ಆತ್ಮಹತ್ಯೆ

    ಆಟೋದಲ್ಲಿ ಹೋಗುವಾಗ ಅಡ್ಡಗಟ್ಟಿದ ಪೊಲೀಸ್​ ಪೇದೆ ಆಡಿದ ಕೆಟ್ಟ ಮಾತು ಕೇಳಿ ನಟಿ ಅರ್ಚನಾ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts