ಪುದುಕ್ಕೊಟ್ಟೈ: ಮೇಕೆ ಕಳ್ಳರನ್ನು ಹಿಡಿಯಲು ಹೋದ ಸಹಾಯಕ ಇನ್ಸ್ಪೆಕ್ಟರ್ನನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ ತಮಿಳುನಾಡಿನ ಪುದುಕ್ಕೊಟ್ಟೈಯಲ್ಲಿ ನಡೆದಿದೆ.
ತಿರುಚಿರಾಪಳ್ಳಿ ಜಿಲ್ಲೆಯ ನವಲ್ಪಟ್ಟು ಪೊಲೀಸ್ ಠಾಣೆಯಲ್ಲಿ ವಿಶೇಷ ಸಹಾಯಕ ಇನ್ಸ್ಪೆಕ್ಸರ್ ಆಗಿದ್ದ ಭೂಮಿನಾಥನ್ (50) ಕೊಲೆಯಾಗಿದ್ದಾರೆ. ಭಾನುವಾರ ರಾತ್ರಿ ಗಸ್ತಿನಲ್ಲಿದ್ದ ಭೂಮಿನಾಥನ್, ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ತಲೆಗೆ ದಾಳಿ ಮಾಡಿದ್ದಾರೆ. ತಲೆ ಹೊಡೆದು ಹೋಗಿದ್ದು ತೀವ್ರ ರಕ್ತಸ್ರಾವವಾಗಿದ್ದು, ರಕ್ತದ ಮಡುವಿನಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಮೇಕೆಗಳನ್ನು ಕಳ್ಳತನ ಮಾಡಿ, ಅದನ್ನು ದ್ವಿಚಕ್ರ ವಾಹನದಲ್ಲಿ ಹಾಕಿಕೊಂಡು ನವಲ್ಪಟ್ಟು ಬಾರ್ಡರ್ನಲ್ಲಿ ಸಾಗುತ್ತಿದ್ದಾಗ, ಗಸ್ತಿನಲ್ಲಿದ್ದ ಭೂಮಿನಾಥನ್ ಖದೀಮರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಇನ್ಸ್ಪೆಕ್ಟರ್ ಮೇಲೆಯೇ ದಾಳಿ ಮಾಡಿರುವ ದುಷ್ಕರ್ಮಿಗಳು ತಮ್ಮ ಬಳಿಯಿದ್ದ ಕುಡುಗೋಲಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿ ಆಗಿದ್ದಾರೆಂದು ತಿಳಿದುಬಂದಿದೆ. ತಿರುಚಿರಾಪಳ್ಳಿ – ಪುದುಕೋಟ್ಟೈ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೀರನೂರು ಠಾಣಾ ವ್ಯಾಪ್ತಿಯಲ್ಲಿ ಭೂಮಿನಾಥನ್ ಹತ್ಯೆಯಾಗಿದೆ.
ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮೇಕೆ ಕಳ್ಳತನ ಪ್ರಕರಣ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಭೂಮಿನಾಥನ್ ಗಸ್ತಿನಲ್ಲಿದ್ದರು. ಕರ್ನಾಟಕದ ರಾಮನಗರ ಮತ್ತು ತಮಿಳುನಾಡಿನಲ್ಲು ಮೇಕೆ ಕಳ್ಳತನ ಪ್ರಕರಣಗಳಿವೆ. ಖದೀಮರು ಜೈಲಿನಿಂದ ಹೊರ ಬಂದು ಮತ್ತೆ ಕಳ್ಳತನ ಮಾಡ್ತಿದ್ರು. ಸದ್ಯ ಆರೋಪಿಗಳನ್ನು ಬಂಧಿಸಲು ಇಬ್ಬರು ತನಿಖಾಧಿಕಾರಿಗಳು ಮತ್ತು ಇಬ್ಬರ ಉಪ ತನಿಖಾಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲು ತಿರುಚಿರಾಪಳ್ಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಪಾರ್ಥಿಬನ್, ಡಿಸಿಪಿಗಳಾ ಶಿವಸುಬ್ರಮಣಿಯನ್ ಮತ್ತು ಅರುಣಮೋಳಿ ಅರಸುಗೆ ಆದೇಶಿಸಿದ್ದಾರೆ. (ಏಜೆನ್ಸೀಸ್)
2 ಮಕ್ಕಳ ತಾಯಿಯ ಪ್ರೀತಿಯ ಬಲೆಯಲ್ಲಿ ಬಿದ್ದ ಯುವಕ: ಆಕೆಯ ಮಾತು ನಂಬಿ ಹೋದವನ ಬಾಳಲ್ಲಿ ಕತ್ತಲು!
ಇದು ವಿಶ್ವದ ಅತ್ಯಂತ ಶ್ರೀಮಂತ ಶ್ವಾನ: ಇದರ ಹೆಸರಲ್ಲಿರೋ ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ಬೆರಗಾಗ್ತೀರಾ!
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಮುಂಬೈ ನಿವಾಸದಲ್ಲಿ ಅಗ್ನಿ ಅವಘಡ
ಪತ್ನಿ ಸತ್ತ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ! ಕುಣಿಗಲ್ ನವದಂಪತಿಯ ಘೋರ ಅಂತ್ಯ