More

    ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಬಗ್ಗೆ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ ಹೊಸ ವದಂತಿ! ​

    ಹೈದರಾಬಾದ್​: ನಾವಿಬ್ಬರು ಫ್ರೆಂಡ್ಸ್​ ಅಷ್ಟೇ. ನೀವಂದುಕೊಂಡಂತೆ ನಮ್ಮಿಬ್ಬರ ನಡುವೆ ಏನು ಇಲ್ಲ ಎಂದು ತಮ್ಮಿಬ್ಬರ ಸಂಬಂಧದ ಬಗ್ಗೆ ಹರಡಿರುವ ವದಂತಿಗಳ ಕುರಿತು ನಟ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣಾ ಸ್ಪಷ್ಟನೆ ನೀಡಿದ್ದರೂ ಸಹ ಅನೇಕರು ಅದನ್ನು ನಂಬಲು ತಯಾರಿಲ್ಲ. ಇದೀಗ ವಿಜಯ್​ ಮತ್ತು ರಶ್ಮಿಕಾ ಬಗ್ಗೆ ಹೊಸದೊಂದು ವದಂತಿ ಹರಿದಾಡುತ್ತಿದೆ.

    ಹೊಸ ವದಂತಿ ಏನೆಂದರೆ, ವಿಜಯ್​ ಮತ್ತು ರಶ್ಮಿಕಾ ಶೂಟಿಂಗ್​ನಿಂದ ಬಿಡುವು ಪಡೆದಿದ್ದು, ಒಟ್ಟಿಗೆ ಮಾಲ್ಡೀವ್ಸ್​ ಹಾರಿದ್ದಾರೆ ಎಂಬುದು. ಈ ವದಂತಿ ಹರಡಲು ಒಂದು ಕಾರಣವೂ ಇದೆ. ಅದೇನೆಂದರೆ, ನಿನ್ನೆ ವಿಜಯ್​ ಮತ್ತು ರಶ್ಮಿಕಾ ಇಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಆ ಕ್ಷಣದಿಂದ ಇಬ್ಬರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

    ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಶ್ಮಿಕಾ, ಪಾಪರಾಜಿಗಳ ಕಡೆ ಕೈ ಬೀಸಿ ನಿಲ್ದಾಣದ ಒಳಗಡೆ ತೆರಳಿದರು. ಇದಾದ ಕೆಲವೇ ಸಮಯದಲ್ಲಿ ವಿಜಯ್​ ದೇವರಕೊಂಡ ಸಹ ವಿಮಾನ ನಿಲ್ದಾಣ ತಲುಪಿದರು. ಕೆಲವೇ ಸಮಯದ ಅಂತರದಲ್ಲಿ ಇಬ್ಬರು ಒಂದೇ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ವಂದತಿ ಎಂಬ ಬೆಂಕಿಗೆ ತುಪ್ಪ ಸುರಿದಂತಾಯಿತು. ಇಬ್ಬರು ಈಗಲೂ ಸಂಬಂಧದಲ್ಲಿದ್ದಾರೆ ಎಂದು ಬಾಲಿವುಡ್​ ಮತ್ತು ಟಾಲಿವುಡ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

    ಲೈಗರ್ ಚಿತ್ರದ ಹೀನಾಯ ಸೋಲಿನ ಬಳಿಕ ವಿಜಯ್ ಕೊಂಚ ಬಿಡುವು ಬಯಸಿದ್ದಾರೆ. ಇತ್ತ ರಶ್ಮಿಕಾ ಕೂಡ ಬಿರುಸಿನ ಚಿತ್ರೀಕರಣ ನಡೆಸಿದ್ದರು. ಅಲ್ಲದೆ, ಪುಷ್ಪ 2 ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಈ ಬಿಡುವಿನ ಮಧ್ಯ ಇಬ್ಬರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವುದರಿಂದ ವದಂತಿಗಳು ತೇಲಿಬಂದಿವೆ.

    ಗೀತಾ ಗೋವಿಂದಂ ಸಿನಿಮಾದಿಂದ ಆರಂಭವಾದ ವಿಜಯ್​ ಮತ್ತು ರಶ್ಮಿಕಾ ಸೇಹ, ಪ್ರೀತಿಗೆ ತಿರುಗಿದೆ ಎಂದು ಹಿಂದಿನಿಂದಲೂ ಹೇಳಲಾಗುತ್ತಿದೆ. ಅನೇಕ ಬಾರಿ ಇಬ್ಬರು ಹೋಟೆಲ್​ನಲ್ಲಿ ಒಟ್ಟಾಗಿ ಕಾಣಸಿಕೊಂಡಿದ್ದಾರೆ. ರಶ್ಮಿಕಾ, ವಿಜಯ್​ ಕುಟುಂಬದ ಜೊತೆಗೆ ಗೋವಾದಲ್ಲಿ ಹೊಸ ವರ್ಷ ಆಚರಣೆ ಸಹ ಮಾಡಿದ್ದರು. ಒಮ್ಮೆ ವಿಜಯ್​ಗಾಗಿ ಅಮೆರಿಕಕ್ಕೂ ಹೋಗಿ ಬಂದಿದ್ದರು. ಹೀಗಾಗಿ ಇಬ್ಬರ ನಡುವೆ ಪ್ರೀತಿ ಇದೆ. ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯಾಗಿತ್ತು. ಆದರೆ, ಇತ್ತೀಚೆಗೆ ರಶ್ಮಿಕಾ ಮತ್ತು ವಿಜಯ್​ ಅಂತರ ಕಾಯ್ದುಕೊಂಡಿರುವ ಸುದ್ದಿಯು ಕೇಳಿಬರುತ್ತಿದೆ. ವಿಜಯ್​ ಹುಟ್ಟುಹಬ್ಬದ ದಿನ ರಶ್ಮಿಕಾ ಒಂದು ಶುಭಾಶಯ ಸಹ ಕೋರಿಲ್ಲ. ಅಲ್ಲದೆ, ಇತ್ತೀಚೆಗೆ ಇಬ್ಬರು ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಮತ್ತೆ ವಿಮಾನದಲ್ಲಿ ಕಾಣಿಸಿಕೊಂಡಿರುವುದು ಹೊಸದೊಂದು ವದಂತಿಗೆ ಮುನ್ನುಡಿ ಬರೆದಿದೆ. ಈ ವದಂತಿಗೆ ಅವರೇ ಸ್ಪಷ್ಟನೆ ನೀಡಬೇಕಿದೆ. (ಏಜೆನ್ಸೀಸ್​)

    ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಜತೆ ಹೆಜ್ಜೆ ಹಾಕಿದ ಜೆಡಿಎಸ್​ ಉಚ್ಛಾಟಿತ ಶಾಸಕ: ಕಾಂಗ್ರೆಸ್​ ಸೇರ್ಪಡೆ ಖಚಿತ

    ದಿವ್ಯಾ-ಅರವಿಂದ್ ಅರ್ಧಂಬರ್ಧ ಪ್ರೇಮಕಥೆ; ರೀಲ್​ನಲ್ಲೂ ಒಂದಾದ ರಿಯಲ್ ಜೋಡಿ

    ಪಾಕ್​ ಮಾರ್ಗವಾಗಿ ಭಾರತಕ್ಕೆ ಬರ್ತಿದ್ದ 1200 ಕೋಟಿ ರೂ. ಮೌಲ್ಯದ ಹೆರಾಯಿನ್​ ಸೀಜ್! 6 ಇರಾನ್​​ ಪ್ರಜೆಗಳ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts