More

    ಒಂದು ಕೇಸ್ ಓಕೆ, ಇನ್ನುಳಿದ ಪ್ರಕರಣಗಳ ನಿರ್ಲಕ್ಷ್ಯ ಯಾಕೆ?: ಮತ್ತೆ ಗುಡುಗಿದ ರೋಹಿಣಿ ಸಿಂಧೂರಿ!

    ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ.ಮಹೇಶ್ ನಡುವಿನ ಜಟಾಪಟಿ ಹಾಗೇ ಮುಂದುವರಿದಿದ್ದು, ಪ್ರಾದೇಶಿಕ ಆಯುಕ್ತರಿಗೆ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಪತ್ರ ಬರೆದು ಆರೋಪಗಳ ಸುರಿಮಳೆಗೈದಿದ್ದಾರೆ.

    ಒಂದು ಕೇಸ್ ಓಕೆ, ಇನ್ನುಳಿದ ಪ್ರಕರಣಗಳ ನಿರ್ಲಕ್ಷ್ಯ ಯಾಕೆ ಎಂದು ಪ್ರಾದೇಶಿಕ ಆಯುಕ್ತರಿಗೆ ಸಿಂಧೂರಿ ಪತ್ರ ಬರೆದಿದ್ದಾರೆ. ಜೂನ್ 11ರಂದು ಬರೆದಿರುವ ಪತ್ರದ ಪ್ರತಿ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ.

    ಸಾ.ರಾ.ಚೌಲ್ಟ್ರಿ ಗೋಮಾಳದಲ್ಲಿ ನಿರ್ಮಾಣ ಆಗಿದೆ. ಭೂಮಿ ಮಂಜೂರಾತಿಗೆ ಸಂಬಂಧಪಟ್ಟಂತೆ ನಿಖರ ದಾಖಲೆಗಳು ಇಲ್ಲ. ಅಲ್ಲದೆ, ಸಾ.ರಾ.ಚೌಲ್ಟ್ರಿಗಾಗಿ ಮುಡಾ ಜಾಗ ಒತ್ತುವರಿ ಮಾಡಲಾಗಿದೆ. ಲಿಂಗಾಂಬುದಿ ಕೆರೆ, ಲಿಂಗಾಂಬುದಿ ಗ್ರಾಮದ ಆಸ್ತಿ ವಿಚಾರವಾಗಿಯೂ ಅಕ್ರಮಗಳು ನಡೆದಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    ಕೇವಲ ಸಾ.ರಾ.ಚೌಲ್ಟ್ರಿಗೆ ರಾಜಕಾಲುವೆ ಒತ್ತುವರಿ ಆಗಿಲ್ಲ ಎಂಬುದಕ್ಕೆ ಸೀಮಿತಗೊಳಿಸಬಾರದು ಎಂದು ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್​ಗೆ ಸಿಂಧೂರಿ ಅವರು ಪತ್ರ ಬರೆದಿದ್ದಾರೆ. ಮೈಸೂರಿನಿಂದ ವರ್ಗಾವಣೆಯಾದರೂ ಸಿಂಧೂರಿ ಅವರು ಆರೋಪವನ್ನು ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​​)

    ಗಂಡನ ಕಿರುಕುಳಕ್ಕೆ ಯುವ ವೈದ್ಯೆ ಸಾವು: 2 ವರ್ಷದ ಹಿಂದೆ ನಟನಿಗೆ ಲವ್​ ಲೆಟರ್​ ಬರೆದಿದ್ದ ವಿಸ್ಮಯ!

    ಮದ್ವೆಯಾದ ಮೂರೇ ವಾರಕ್ಕೆ ಪತ್ನಿ ನಾಪತ್ತೆ: ಮನೆಯಲ್ಲಿದ್ದ ಮೊಬೈಲ್​ನಲ್ಲಿ ಅಡಗಿತ್ತು ಹೆಂಡತಿಯ ರಹಸ್ಯ!

    ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts