ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸರಳ ಸಜ್ಜನ ವ್ಯಕ್ತಿ ಎಂದು ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರು ಹೇಳಿದರು.
ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಶಶಿಶೇಖರ್ ದೀಕ್ಷಿತ್, ಪ್ರಧಾನಿ ಮೋದಿ ಅವರು ದೇವರ ದರ್ಶನ ಮಾಡೋದಕ್ಕೆ ಬಂದಿದ್ದು ಬಹಳ ವಿಶೇಷವಾಗಿತ್ತು. ನಾನು ಅನೇಕ ಗಣ್ಯ ವ್ಯಕ್ತಿಗಳನ್ನು ನೋಡಿದ್ದೇನೆ. ಅನೇಕ ರಾಷ್ಟ್ರಪತಿ, ರಾಜ್ಯಪಾಲರು ಬಂದು ಹೋಗಿದ್ದಾರೆ. ಅವರೆಲ್ಲರಿಗಿಂತಲೂ ಮೋದಿ ಸರಳ ವ್ಯಕ್ತಿತ್ವದ ವ್ಯಕ್ತಿ ಎಂದು ಬಣ್ಣಿಸಿದರು.
ನನ್ನ ಜತೆ ಸಾಧಾರಣ ವ್ಯಕ್ತಿಯಂತೆ ಮಾತನಾಡಿದರು. ಮೈಸೂರಿಗೆ ಮೂರು ಬಾರಿ ಬಂದಿದ್ದೇನೆ. ಆದರೆ, ಚಾಮುಂಡಿ ಬೆಟ್ಟಕ್ಕೆ ಬರಲು ಆಗಿರಲಿಲ್ಲ. ಈ ಬಾರಿ ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾರೆ. ನೀವು ಯಾವಾಗಲೂ ತಾಯಿಯ ಸನ್ನಿಧಿಯಲ್ಲೇ ಇರ್ತೀರಿ ನೀವು ತುಂಬಾ ಪುಣ್ಯವಂತರು ಅಂತ ಹೇಳಿದ್ರು. ಅರ್ಚನೆ ಆಗುವರೆಗೂ ಕಣ್ಣು ಮುಚ್ಚಿ ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿದರು. ರಾಷ್ಟ್ರಕ್ಕೆ ಒಳಿತಾಗಲಿ ಎಂದು ಮೋದಿ ಅವರೇ ಸಂಕಲ್ಪ ಮಾಡಿದರು ಎಂದು ತಿಳಿಸಿದರು.
ಪೂಜೆ ಬಳಿಕ ದೇಗುಲದಿಂದ ತೆರಳುತ್ತಿದ್ದ ಮೋದಿ ಮತ್ತೆ ಪಾದುಕೆ ಮುಟ್ಟಿದ ವಿಚಾರವಾಗಿ ಪ್ರತಿಕ್ರಿಯಿಸಿದ ಶಶಿಶೇಖರ್ ದೀಕ್ಷಿತ್, ಮೊದಲೇ ತಾಯಿಯ ಪಾದ ಮುಟ್ಟಬೇಕೆಂದುಕೊಂಡಿದ್ದರು. ಆದರೆ, ಯಾರೂ ಹೇಳಿದ್ರು ಅಂತ ಕೊನೆಯಲ್ಲಿ ಪಾದುಕೆ ಮುಟ್ಟಿ ಆಶೀರ್ವಾದ ಪಡೆಯಲು ನಿರ್ಧರಿಸಿದ್ರು. ಪೂಜೆ ಬಳಿಕ ತಾಯಿಯ ಪಾದುಕೆ ಮುಟ್ಟುವುದನ್ನು ಮರೆತಿದ್ದರು. ಆ ವೇಳೆ ತಾಯಿ ಪಾದಗಳನ್ನು ಮುಟ್ಟಿ ಪ್ರಾರ್ಥನೆ ಮಾಡಿಕೊಳ್ಳುವಂತೆ ಹೇಳಿದೆ. ಆಗ ದೇಶಕ್ಕೆ ಒಳತಾಗಲಿ ಎಂದು ತಾಯಿಯನ್ನು ಪ್ರಾರ್ಥನೆ ಮಾಡಿದರು ಎಂದು ನರೇಂದ್ರ ಮೋದಿ ಅವರು ಪೂಜೆ ವೇಳೆ ಮಾತುಕತೆ ನಡೆಸಿದ್ದನ್ನು ದಿಗ್ವಿಜಯ ನ್ಯೂಸ್ ಜತೆ ಶಶಿಶೇಖರ್ ದೀಕ್ಷಿತ್ ಹಂಚಿಕೊಂಡರು.
ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ
ಸಾಂಸ್ಕೃತಿಕ ನಗರಿ ಮೈಸೂರಲ್ಲಿ ‘ನಮೋ’ ಯೋಗ: 45 ನಿಮಿಷದಲ್ಲಿ ಯಾವೆಲ್ಲ ಯೋಗಾಸನ ಮಾಡಿದ್ರು ಗೊತ್ತಾ?