More

    ನಟ ದರ್ಶನ್ ಸುದ್ದಿಗೋಷ್ಠಿ: ಉಮಾಪತಿ ಅಂಗಳದಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣದ ಚೆಂಡು

    ಮೈಸೂರು: ತಮ್ಮ ಹೆಸರಲ್ಲಿ ಮಹಿಳೆಯಿಂದ ಹಣ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ದರ್ಶನ್​ ಅವರು, ಇಡೀ ಪ್ರಕರಣದ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ. ಅದನ್ನು ಆರೋಪಿಯೇ ಹೇಳಬೇಕೆಂದರು.

    ಇದೀಗ ಇಡೀ ಪ್ರಕರಣ ದರ್ಶನ್​ ಅವರ ಸ್ನೇಹಿತರು ಮತ್ತು ನಿರ್ಮಾಪಕ ಉಮಾಪತಿ ನಡುವೆಯೇ ಗಿರಕಿ ಹೊಡೆಯುತ್ತಿದ್ದು, ಬಂಧಿತ ಆರೋಪಿ ಅರುಣಾ ಕುಮಾರಿ ಅವರ ಮೇಲೆ ಇಡೀ ಪ್ರಕರಣ ನಿಂತಿದೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಶನ್​ ಅವರು ಲಾಕ್​ಡೌನ್​ ಹಿನ್ನೆಲೆಯಲ್ಲಿ ಏಪ್ರಿಲ್​ 9ರಂದು ಫಾರ್ಮ್​ ಹೌಸ್​ಗೆ ಬಂದೆ. ಮೈಸೂರಿನಲ್ಲಿ ನಮ್ಮದೊಂದು ಯೂನಿಯನ್​ ಇದೆ. ಹೀಗಾಗಿ ಫಾರ್ಮ್​ ಹೌಸ್​ ಮತ್ತು ಮೈಸೂರಿಗೆ ಹೋಗಿ ಬರುತ್ತಿದೆ. ಹೀಗಿರುವಾಗ ಜೂನ್​ 6ರಂದು ನನಗೆ ನಿರ್ಮಾಪಕ ಉಮಾಪತಿ ಅವರಿಂದ ಒಂದು ಕಾಲ್​ ಬಂತು ನೀವು ಯಾರಿಗಾದರೂ ಶ್ಯೂರಿಟಿ ಹಾಕಿದ್ದೀರಾ ಅಂತ ಕೇಳಿದರು. ಕೆಲಸ ಇಲ್ಲದೇ ಎರಡು ವರ್ಷಗಳಾಗಿದೆ ನಾನು ಯಾರಿಗೇ ಶ್ಯೂರಿಟಿ ಹಾಕಲಿ ಅಂದೆ. ಮಹಿಳೆಯು ಸಹ ಕಾನ್ಫರೆನ್ಸ್​ ಕಾಲ್​ನಲ್ಲಿ ಅದೇ ಪ್ರಶ್ನೆಯನ್ನು ಕೇಳಿದರು ಎಂದರು.

    ಸ್ನೇಹಿತರಾದ ಹರ್ಷ ಮೆಲಾಂಟ್​, ರಾಕೇಶ್​ ಪಾಪಣ್ಣ ಹಾಗೂ ರಾಕೇಶ್​ ಶರ್ಮ ಅವರ ಹೆಸರುಗಳನ್ನು ಕೂಡ ಸರಿಯಾಗಿ ಹೇಳಿದರು. ಸಾಲದಕ್ಕೆ ಅವರ ಪತ್ನಿಯರ ಹೆಸರನ್ನು ಹೇಳಿದರು. ದಾಖಲೆ ಇಲ್ಲದೆ ಏನು ಮಾತನಾಡಬಾರದು ಎಂದು ನಾನು ಸುಮ್ಮನಿದ್ದೆ. ಜೂನ್​ 14ರಂದು ನಾನು ಬೆಂಗಳೂರಿಗೆ ತೆರಳಿದೆ. ಬೆಂಗಳೂರಿಗೆ ಬಂದಿದ್ದೀರಾ ಎಂದು ಕೇಳಲು ಉಮಾಪತಿ ಅವರು ಫೋನ್​ ಮಾಡಿದ್ದರು. ಜೂನ್​ 16ರಂದು ಮಹಿಳೆ ನಮ್ಮ ಮನೆಗೆ ಬಂದರು. ಅರುಣಾ ಅವರು ಎಲ್ಲರ ಹೆಸರನ್ನು ಸರಿಯಾಗಿಯೇ ಹೇಳಿದರು. ಅಲ್ಲದೆ, ನನ್ನ ಆಧಾರ್​ ಕಾರ್ಡ್​ ನಂಬರ್​ ಸಹ ಹೇಳಿದರು. ಪೋರ್ಜರಿ ಸಹಿ ಕೂಡ ತೋರಿಸಿದರು. ನನಗೆ ಶಾಕ್​ ಆಯಿತು. ಎಲ್ಲಿ ತಪ್ಪಾಗುತ್ತದೆ ಎಂದು ಗೊತ್ತಾಗಲಿಲ್ಲ ಎಂದು ದರ್ಶನ್​ ಹೇಳಿದರು.

    ಇದಾದ ಬಳಿಕ ಮೈಸೂರಿಗೆ ಬಂದ ಆರೋಪಿ ಅರುಣಾ ಕುಮಾರಿ ಅವರನ್ನು ಸ್ನೇಹಿತರೊಂದಿಗೆ ನಮ್ಮ ತೋಟದ ಮನೆಯಲ್ಲಿ ಭೇಟಿ ಮಾಡಿಸಿದೆ. ಅವರ್ಯಾರು ಲೋನ್​ಗೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದರು. ಆದರೆ. ಅರುಣಾ ಕುಮಾರಿ ಮಾತ್ರ ಸಲ್ಲಿಸಿದ್ದಾರೆ ಎಂದು ತಮ್ಮ ಮಾತಿಗೆ ಬದ್ಧವಾಗಿದ್ದರು. ಬ್ಯಾಂಕ್​ ಮ್ಯಾನೇಜರ್​ ಅಂತಾ ಹೇಳ್ತೀರಾ ಐಡಿ ಕಾರ್ಡ್​ ಕೊಡಿ ಎಂದಿದ್ದಕ್ಕೆ ಮನೆಯಲ್ಲಿದ್ದೇ ತರಲು ಮರೆತುಬಿಟ್ಟೆ ಅಂದರು.

    ಕೊನೆಯಲ್ಲಿ ಬ್ಯಾಂಕ್​ ಮ್ಯಾನೇಜರ್​ ಅಲ್ಲ ಎಂದು ಗೊತ್ತಾದ ಬಳಿಕ ನಿರ್ಮಾಪಕ ಉಮಾಪತಿ ಅವರೇ ನನ್ ಕಳುಹಿಸಿದರು ಎಂದು ಅರುಣಾ ಕುಮಾರಿ ಹೇಳಿದ್ದಾರೆ. ಆದರೆ, ಫೋನ್​ ಮಾಡಿದ ದಿನದಿಂದಲೇ ನನಗೆ ಅವರ ಪರಿಚಯ ಆಗಿದೆ ಎಂದು ಉಮಾಪತಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ನಮಗೂ ಗೊಂದಲವಿದೆ. ಸಮಗ್ರ ಪೊಲೀಸ್​ ತನಿಖೆಯಿಂದ ಮಾತ್ರ ಎಲ್ಲವು ತಿಳಿದುಬರಲಿದೆ. ಇದರ ಹಿಂದೆ ಯಾರದ್ದೋ ಕೈವಾಡ ಇರುವ ಶಂಕೆ ಇದೆ. ಯಾರೇ ಇರಲಿ ಗೊತ್ತಾದರೆ ಮಾತ್ರ ಸುಮ್ಮನೇ ಬಿಡುವ ವ್ಯಕ್ತಿ ನಾನಲ್ಲ ಎಂದು ದರ್ಶನ್​ ಹೇಳಿದರು.

    ಇದರ ನಡುವೆ ದರ್ಶನ್​ ಅವರು ಅರುಣಾ ಕುಮಾರಿ ಮತ್ತು ಉಮಾಪತಿ ನಡುವೆ ನಡೆದಿರುವ ವಾಟ್ಸ್​ಆ್ಯಪ್​ ಚಾಟಿಂಗ್​ ಸ್ಕ್ರೀನ್​ಶಾಟ್​ ಕಾಪಿಯನ್ನು ಸಹ ದರ್ಶನ್​ ತೋರಿಸಿದ್ದು, ಇದೀಗ ಪ್ರಕರಣ ಉಮಾಪತಿಯನ್ನು ತಿರುಗಿಕೊಂಡಿದೆ. ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆ ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts