More

    ಹೆಣ್ಣು ಮಕ್ಕಳ ಮೇಲೆ ನಮಗೂ ಗೌರವ ಇದೆ ಅದನ್ನೇ ಬಂಡವಾಳ ಮಾಡ್ಕೋಬೇಡಿ: ಸಂಸದೆ ಸುಮಲತಾಗೆ ನಿಖಿಲ್​ ಎಚ್ಚರಿಕೆ

    ಮಂಡ್ಯ: ಪ್ರತಿ ಬಾರಿಯು ನಮ್ಮ ಶಾಸಕರ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನಮಗೂ ಗೌರವ ಇದೆ. ಅದನ್ನೇ ಬಂಡವಾಳ ಮಾಡಿಕೊಳ್ಳಬೇಡಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಸಂಸದೆ ಸುಮಲತಾ ಅಂಬರೀಷ್​ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಜೆಡಿಎಸ್ ಶಾಸಕರ ಮೇಲೆ ಸಂಸದೆ ಸುಮಲತಾ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ನಿಖಿಲ್​, ಸಂಸದರು ನಮ್ಮ ಶಾಸಕರ ವಿರುದ್ಧ ಕಿಡಿ ಹಚ್ಚುವ ಕೆಲಸ ಮಾಡ್ತಿದ್ದಾರೆ. ಪ್ರತಿ ಸಂದರ್ಭದಲ್ಲಿಯು ನಮ್ಮ ಶಾಸಕರ ಮೇಲೆ ಕೆಸರು ಎರಚುವ ಕೆಲಸ ಮಾಡಬೇಡಿ. ಅದರ ಬದಲು ಕೆಲಸದ ಮೂಲಕ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿ. ಹೆಣ್ಣು ಮಕ್ಕಳ ಮೇಲೆ ನಮಗೆ ಗೌರವ ಇದೆ. ಅದನ್ನು ನಿಮ್ಮ ಅನುಕೂಲಕ್ಕೆ ತಗೊಬೇಡಿ ಎಂದರು.

    ನಾನು ಸಂಸದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗಲ್ಲ. ಉತ್ತರ ಕೊಡುವ ದಿನಗಳು ಬಹಳ ದೂರವಿಲ್ಲ. ಅದನ್ನು ನಾವು ರಾಜಕೀಯವಾಗಿ ಎದುರಿಸುತ್ತೇವೆ. ನಾಲ್ಕೈದು ತಿಂಗಳ ಹಿಂದೆ ಮದ್ದೂರಿಗೆ ಹೋದ ಸಂದರ್ಭದಲ್ಲಿ ಡಿ.ಸಿ. ತಮ್ಮಣ್ಣ ಅವರ ಬಗ್ಗೆ ಅಗೌರವಿತವಾಗಿ ಸಂಸದರು ಮಾತನಾಡಿದರು. ಅ ವಿಷಯದ ಬಗ್ಗೆ ಮಾತನಾಡಿದಕ್ಕೆ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನಮಗೆ ಗೌರವ ಇದೆ. ನಾನು ಇಲ್ಲಿಯವರೆಗೆ ಅವರ ಬಗ್ಗೆ ಲಘುವಾಗಿ ಮಾತನಾಡಿಲ್ಲ ಎಂದು ಹೇಳಿದರು.

    ಆಣೆ-ಪ್ರಮಾಣದ ಸವಾಲು ವಿಚಾರವಾಗಿ ಪ್ರತಿಕ್ರಿಯಿಸಿದಿ ನಿಖಿಲ್​, ಇದರ ಬಗ್ಗೆ ಮಾತನಾಡಲ್ಲ, ನಾನು ಇದ್ದಕ್ಕೆ ಸಿದ್ಧವೂ ಇಲ್ಲ. ನಾವು ಪಕ್ಷ ಸಂಘಟನೆಯ‌ ಚಿಂತನೆ ಮಾತ್ರ ಮಾಡ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಬಿಗ್​ಬಾಸ್​ ಕನ್ನಡದ 9ನೇ ಆವೃತ್ತಿಯಲ್ಲಿರಲಿದೆ ಹಲವು ಸರ್ಪ್ರೈಸ್​: ಏನೇನು ಬದಲಾಗಬಹುದು? ಇಲ್ಲಿದೆ ಮಾಹಿತಿ

    ಹಾಸ್ಟೆಲ್​ನಲ್ಲಿ ಸಹಪಾಠಿಗಳ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಟ್ಟ ವಿದ್ಯಾರ್ಥಿನಿ! ಭಾರಿ ಪ್ರತಿಭಟನೆ, ಆರೋಪಿ ಅರೆಸ್ಟ್​

    VIDEO| ನಮೀಬಿಯಾದಿಂದ ಭಾರತಕ್ಕೆ ಚೀತಾಗಳನ್ನು ಕರೆತಂದ ವಿಮಾನದ ಒಳಗಿನ ದೃಶ್ಯ ಹೀಗಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts