More

    ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎನ್ನುತ್ತಲೇ ತೆರೆಮರೆಯಲ್ಲಿ ಸಂಸದೆ ಸುಮಲತಾ ಮೆಗಾ ಪ್ಲಾನ್?!

    ಮಂಡ್ಯ: ಯಾವುದೇ ಪಕ್ಷ ಸೇರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳುತ್ತಲೇ ಮಂಡ್ಯ ಸಂಸದೆ ಸುಮಲತಾ ಅಂಬರೀಷ್​ ಅವರು ಬಿಜೆಪಿ ಪಕ್ಷ ಸೇರಲು ತೆರೆಮರೆಯಲ್ಲಿ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆದಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಅಕ್ಟೋಬರ್​ನಲ್ಲಿ ರಾಷ್ಟ್ರ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತಹ ಮಾತುಗಳನ್ನು ಸುಮಲತಾ ಅವರ ಆಪ್ತ ಇಂಡುವಾಳು ಸಚ್ಚಿದಾನಂದ ಮಾಧ್ಯಮಗಳ ಮುಂದೆ ಆಡಿದ್ದಾರೆ.

    ಸಚ್ಚಿದಾನಂದಾ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ನಾನು ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿರುವುದು ನಿಜ. ಈ ಬಗ್ಗೆ ಸುಮಲತಾ ಅವರ ಜತೆ ಮಾತುಕತೆ ನಡೆಸಿದ್ದೇನೆ. ನೀನು ಎಲ್ಲಿರುತ್ತೇಯೋ ಅಲ್ಲಿ ನಾನು ಇರ್ತೀನಿ ಎಂದು ಅವರು ಹೇಳಿದ್ದಾರೆ. ಸುಮಲತಾ ಅವರಿದ್ದ ಕಡೆ ನಾನು ಇರ್ತೀನಿ ಎಂದೇಳುವ ಮೂಲಕ ಪಕ್ಷ ಸೇರುವ ಬಗ್ಗೆ ಪರೋಕ್ಷ ಸುಳಿವು ನೀಡಿದರು.

    ಸುಮಲತಾ ಹಾಗೂ ಸಚ್ಚಿದಾನಂದ ಒಟ್ಟಿಗೆ ಬಿಜೆಪಿ ಸೇರಲು ತಯಾರಿ ನಡೆದಿದೆ. ಬಿಜೆಪಿ ನಾಯಕರ ಜತೆ ಸಭೆ ಸಮಾರಂಭಗಳಲ್ಲಿ ಸುಮಲತಾ ಹಾಗೂ ಸಚ್ಚಿದಾನಂದ ಭಾಗಿಯಾಗುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿ ಸಚಿವರ ಸಮ್ಮುಖದಲ್ಲಿ ಸಚ್ಚಿದಾನಂದ ಸಮಾವೇಶ ನಡೆಸಿದ್ದ. ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಲು ಸುಮಲತಾಗೆ ಆರ್.ಅಶೋಕ್ ಬಹಿರಂಗ ಆಹ್ವಾನ ನೀಡಿದ್ದರು. ಹೀಗಾಗಿ ಸುಮಲತಾ ಅವರು ಕಮಲ ಮುಡಿಯಲು ಸದ್ದಿಲ್ಲದೆ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮಗಳ ಮುಂದೆ ನಿರ್ಧಾರ ಮಾಡಿಲ್ಲ ಎಂದೇಳುತ್ತಲೇ ಬಿಜೆಪಿ ಸೇರಲು ಸಿದ್ಧತೆ ಮಾಡಿಕೊಂಡಿರುವ ಮಾತುಗಳು ಕೇಳಿಬರುತ್ತಿವೆ. (ದಿಗ್ವಿಜಯ ನ್ಯೂಸ್​)

    ಧನಶ್ರೀ-ಚಾಹಲ್​ ದಾಂಪತ್ಯ ಜೀವನ ಮುರಿದುಬಿತ್ತಾ? ಸ್ಪಿನ್​ ಮಾಂತ್ರಿಕ ಯಜುವೇಂದ್ರ ಚಾಹಲ್​ ಹೇಳಿದ್ದೇನು?

    5 ಮನೆ, ಈಜುಕೊಳ, ಥಿಯೇಟರ್​, ಬಾರ್​, ಲಕ್ಷುರಿ ಕಾರುಗಳು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳೇ ಶಾಕ್​

    ಡಿಕೆಶಿ ಸಿಎಂ ಆಗೋದಾದ್ರೆ ಸಹಕಾರ! ಒಕ್ಕಲಿಗರ ಸಮಾವೇಶದಲ್ಲಿ ಎಚ್​ಡಿಕೆ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts