More

    ಟಿಕ್​ಟಾಕ್​ನಿಂದ ಶುರುವಾದ ಲವ್ ಸೂಸೈಡ್​ನಲ್ಲಿ ಅಂತ್ಯ: ಮೊಬೈಲ್​ನಲ್ಲಿದೆ ಪ್ರೇಮಿಗಳಿಬ್ಬರ ಸಾವಿನ ರಹಸ್ಯ

    ಬೆಂಗಳೂರು: ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅಂತಾ ಕ್ರೇಜಿಸ್ಟಾರ್​ ರವಿಚಂದ್ರನ್​ ಹೇಳಿದ್ರು. ಅವರು ಹೇಳಿರುವುದು ಸಹ ಲೋಕಾರೂಡಿಯೇ ಆದ್ರೆ, ಇಲ್ಲೊಂದು ಜೋಡಿ ಪ್ರೀತಿ ಮಾಡಿದ ಮೇಲೆ ಅದ್ಯಾವ ವಿಚಾರಕ್ಕೆ ಹೆದರಿಕೊಂಡರೋ ಇದೀಗ ಇಬ್ಬರು ಇಹಲೋಕ ತ್ಯಜಿಸಿದ್ದಾರೆ. ಟಿಕ್​ಟಾಕ್​ನಿಂದ ಶುರುವಾಗಿದ್ದ ಇಬ್ಬರ ಪ್ರೀತಿ ದುರಂತ ಅಂತ್ಯವಾಗಿದೆ.

    ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಪ್ರೇಮ ನಿವೇದನೆ ಮಾಡುವುದು ಸಾಮಾನ್ಯ ಆಗಿಬಿಟ್ಟಿದೆ. ಅದೇ ರೀತಿ ಇಲ್ಲೊಂದು ಜೋಡಿ ಸದಾ ಜಾಲತಾಣದಲ್ಲಿ ರೀಲ್ಸ್ ಮತ್ತು ಚಾಟಿಂಗ್ ಮಾಡ್ತಾ ಒಬ್ಬರಿಗೊಬ್ಬರು ತಮ್ಮ‌ ಭಾವನೆಯನ್ನು ಹಂಚಿಕೊಳ್ಳುತ್ತಿದ್ದರು. ಟಿಕ್​ಟಾಕ್​ ಮೂಲಕವೇ ಇಬ್ಬರ ಪ್ರೀತಿ ಶುರುವಾಗಿತ್ತು. ಆದ್ರೆ ಅವರಿಬ್ಬರ ನಡುವೆ ಅದೇನಾಯ್ತೋ ಏನೋ ಗೊತ್ತಿಲ್ಲ, ನಿನ್ನೆ (ನ.22) ಸಂಜೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಕೇವಲ 5 ನಿಮಿಷಕ್ಕೆ ಪ್ರಿಯಕರ ಸಹ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ.

    ಪ್ರಿಯಕರನೊಂದಿಗೆ ಪ್ರೀತಿಯಲ್ಲಿ ಮುಳುಗಿದ್ದ 17 ವರ್ಷದ ಹುಡುಗಿ ರಕ್ಷಿತಾ, ನಿನ್ನೆ (ನ.22) ಸಂಜೆ ಸುಮಾರು 4 ಗಂಟೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಸಂದ್ರದ ತಮ್ಮ‌ ಮನೆಯಲ್ಲಿ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇತ್ತ ಪ್ರೇಯಸಿಯ ಸಾವಿನ ಸುದ್ದಿ ತಿಳಿದ ಪ್ರಿಯಕರ 21 ವರ್ಷದ ಮನೋಜ್ ಸಹ ಕೆಲವೇ ನಿಮಿಷಗಳಲ್ಲಿ ರಾಜಾನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹನಿಯೂರು ಗ್ರಾಮದಲ್ಲಿ ತನ್ನ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಜೋಡಿ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಯುವಕ ಆಗಾಗ ಹುಡುಗಿಯ ಮನೆಗೆ ಹೋಗಿ ಬರುತ್ತಿದ್ದ. ಹುಡುಗಿಯ ಅಕ್ಕಪಕ್ಕದ ಮನೆಯವರಿಗೆ ಯುವಕ ಚಿರಪರಿಚಿತನಾಗಿದ್ದ. ಆದ್ರೆ, ಮೃತ ಮನೋಜ್‌ನ ಈ ವಿಚಾರಗಳು ತಮ್ಮೂರಿನ‌ ಗೆಳೆಯರಿಗಾಗಲಿ, ಸೋದರ ಸಂಬಂಧಿಗಳಿಗಾಗಲಿ ತಿಳಿದೇ ಇರಲಿಲ್ಲ. ಆದ್ರೆ, ಮೂಲಗಳ ಪ್ರಕಾರ ಇವರಿಬ್ಬರ ಪ್ರೀತಿಯ ವಿಚಾರ ಎರಡು ಕುಟುಂಬಗಳಿಗೆ ಗೊತ್ತಾಗಿ ಮದುವೆ ವಿಚಾರ ಸಹ ಚರ್ಚೆ ಆಗಿತ್ತಂತೆ. ವಿದ್ಯಾಭ್ಯಾಸ ಮುಗಿದ ಬಳಿಕ ಮದುವೆ ಯೋಚನೆ ಮಾಡೋಣ ಎಂದು ಎರಡು ಕುಟುಂಬಸ್ಥರು ಹೇಳಿದ್ದರಂತೆ. ಆದರೆ, ಇದೇ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗುತ್ತಿದೆ.

    ನಿನ್ನೆ ಸಂಜೆ ರಕ್ಷಿತಾ ಪೋಷಕರು ಸಂಬಂಧಿಯೊಬ್ಬರ ಮದುವೆಗೆ ತೆರಳಿದ್ದಾಗ, ಯುವಕನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ರಕ್ಷಿತಾ, ಕೆಲ ಹೊತ್ತಿನ ನಂತರ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ರಕ್ಷಿತಾಳ ಮೊಬೈಲ್‌ಗೆ ಮನೋಜ್ ಕರೆ ಮಾಡಿದ್ದು, ತಗೆಯದಿದ್ದಾಗ, ರಕ್ಷಿತಾ ಕುಟುಂಬ ಬಾಡಿಗೆಗೆ ಇದ್ದ ಮನೆಯ ಮಾಲೀಕರಿಗೆ ಕರೆ ಮಾಡಿದ್ದಾನೆ. ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಓಡಾಡುತ್ತಿದ್ದ ಮನೋಜ್ ಸಹ ನೇಣಿಗೆ ಕೊರಳೊಡ್ಡಿದ್ದಾನೆ.

    ಇಬ್ಬರ ಆತ್ಮಹತ್ಯೆ ಎರಡು ಕುಟುಂಬಗಳಿಗೆ ಆಗಾಧ ನೋವು ತಂದೊಡ್ಡಿದ್ದು, ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ‌ ಹಾಗೂ ರಾಜಾನಕುಂಟೆಯ ಪೊಲೀಸರು ಇಬ್ಬರ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ದುನಿಯಾ ವಿಜಯ್​ ಬಾರದಿದ್ದಲ್ಲಿ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಹಠ ಹಿಡಿದ ಮದುಮಗಳು!

    ನಿಕ್​ ಜೋನಾಸ್​ ಜತೆ ಡಿವೋರ್ಸ್! ಅನುಮಾನಗಳನ್ನು ಬಗೆಹರಿಸಿದ ನಟಿ ಪ್ರಿಯಾಂಕಾ ಚೋಪ್ರಾ

    ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿಸಲು ನಡೆದಿತ್ತು ಭಾರೀ ಕಸರತ್ತು: ರಾಜ್​ಗಾಗಿ ಬೆಂಗ್ಳೂರನ್ನೇ ಜಾಲಾಡಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts