ತಿರುವನಂತಪುರಂ: ಬಸ್ ಕಂಡಕ್ಟರ್ ಬಳಿಯಿರುವ ಟಿಕೆಟ್ ವಿತರಣಾ ಯಂತ್ರವೂ ಕೂಡ ಸುರಕ್ಷಿತವಲ್ಲ ಎಂಬುದಕ್ಕೆ ಕೇರಳದಲ್ಲಿ ನಡೆದಿರುವ ಈ ಆತಂಕಕಾರಿ ಘಟನೆ ತಾಜಾ ಉದಾಹರಣೆಯಾಗಿದೆ.
ಯಂತ್ರವೂ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಕಂಡಕ್ಟರ್ ಎಂಎಂ ಮುಹಮ್ಮದ್ ಎಂಬುವರ ಒಂದು ಕೈಗೆ ಸುಟ್ಟ ಗಾಯಗಳಾಗಿವೆ. ಪೆರುಂಬವೂರ್ ನಿವಾಸಿಯಾಗಿರುವ ಮುಹಮ್ಮದ್, ಕೆಎಸ್ಆರ್ಟಿಸಿ ಬಸ್ನಲ್ಲಿ ಕಂಡಕ್ಟರ್ ಆಗಿದ್ದಾರೆ.
ತಿರುವನಂತಪುರಂ-ಸುಲ್ತಾನ್ ಬತ್ತೇರಿ ಸೂಪರ್ ಡಿಲಕ್ಸ್ ಬಸ್ನ ಟಿಕೆಟ್ ಯಂತ್ರವೂ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಯಂತ್ರವೂ ಬತ್ತೇರಿ ಕೆಎಸ್ಆರ್ಟಿಸಿ ಡಿಪೋಗೆ ಸೇರಿದ್ದಾಗಿದೆ. ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸಿಬ್ಬಂದಿ ವಿಶ್ರಾಂತಿ ಕೊಠಡಿಯಲ್ಲಿ ಈ ಘಟನೆ ನಡೆದಿದೆ.
ಇದೇ ಸಂದರ್ಭದಲ್ಲಿ ಈ ಅಪಘಾತದ ಬಗ್ಗೆ ಕೆಎಸ್ಆರ್ಟಿಸಿ ತನಿಖೆ ಆರಂಭಿಸಿದೆ. ಮೈಕ್ರೋಎಫ್ಎಕ್ಸ್ ಕಂಪನಿ ಈ ಯಂತ್ರವನ್ನು ತಯಾರಿಸಿದ್ದು, ಶಾರ್ಟ್ ಸೆರ್ಕ್ಯೂಟ್ನಿಂದ ಸ್ಫೋಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಹಿಂದಿನ ಎಲ್ಡಿಎಫ್ ಸರ್ಕಾರದ ಆಳ್ವಿಕೆ ವೇಳೆ ಇದನ್ನು ಖರೀದಿಸಲಾಗಿದ್ದು, ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕೆಎಸ್ಆರ್ಟಿಸಿ ಗುತ್ತಿಗೆಯನ್ನು ಸಾರ್ವಜನಿಕ ವಲಯದ ಕಂಪನಿಯ ಬದಲಿಗೆ ಖಾಸಗಿ ಕಂಪನಿಗೆ ನೀಡಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. (ಏಜೆನ್ಸೀಸ್)
ಪ್ರೇಯಸಿಗೆ ಜಾಮೀನು ಕೊಡಿಸಲು ಹೋಗಿ ಮರಣದಂಡನೆಗೆ ಗುರಿ: ವಿಷದ ಇಂಜೆಕ್ಸನ್ ನೀಡಿ ಪ್ರಿಯಕರನ ಹತ್ಯೆ
ನೀನೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ… ಉಗ್ರರ ದಾಳಿಗೆ ಪಾಕ್ನ 10 ಸೈನಿಕರ ಸಾವು
ಮುಕ್ತ ಮಾರುಕಟ್ಟೆಗೆ ವ್ಯಾಕ್ಸಿನ್: ಕೋವಿಶೀಲ್ಡ್, ಕೊವ್ಯಾಕ್ಸಿನ್ಗೆ ಅನುಮತಿ; ಲಸಿಕೆ ಅಭಿಯಾನಕ್ಕೆ ಬಲ