ಹೈದರಾಬಾದ್: ವ್ಯಕ್ತಿಯೋರ್ವ ನೀರು ತುಂಬಿದ್ದ ಬಕೆಟ್ ಒಳಗೆ ಪತ್ನಿಯ ತಲೆ ಮುಳುಗಿಸಿ ಆಕೆಯನ್ನು ಹತ್ಯೆಗೈದ ಬಳಿಕ ರೈಲಿಗೆ ಸಿಲುಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಹಾನಂದ ಬಿಸ್ವಾಸ್ (24) ಎಂದು ಗುರುತಿಸಲಾಗಿದೆ. ಈತ ಅಸ್ಸಾಂ ನಿವಾಸಿ. ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿರುವ ಶಾಪಿಂಗ್ ಮಾಲ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಈತನ ಮೃತದೇಹ ಮಂಗಳವಾರ ಲಕಡಿ ಕಾ ಪುಲ್ ರೈಲು ನಿಲ್ದಾಣದ ಹಳಿಗಳ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಸ್ವಾಸ್ ಮೃತದೇಹ ಪತ್ತೆಯಾದಾಗ ಆತನ ಪಾಕೆಟ್ನಲ್ಲಿ ಒಂದು ಫೋನ್ ಮತ್ತು ಡೈರಿ ಇತ್ತು. ಅಸ್ಸಾಮೀಸ್ ಭಾಷೆಯಲ್ಲಿ ಬರೆದಿದ್ದರಿಂದ ಅದರ ಅನುವಾದಕ್ಕಾಗಿ ಪೊಲೀಸರು ಬಿಸ್ವಾಸ್ ಸ್ನೇಹಿತರನ್ನು ಸಂಪರ್ಕಿಸಿದರು. ಬಿಸ್ವಾಸ್ ಬರವಣಿಗೆ ಪ್ರಕಾರ ಪತ್ನಿಯನ್ನು ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ.
ಡೈರಿ ಓದಿದ ಬಳಿಕ ಪೊಲೀಸರು ಮಹಾನಂದ ಮನೆಗೆ ದೌಡಾಯಿಸಿದರು. ಆದರೆ, ಮನೆಯ ಬಾಗಿಲನ್ನು ಲಾಕ್ ಮಾಡಲಾಗಿತ್ತು. ಬೀಗವನ್ನು ಮುರಿದು ಮನೆಯನ್ನು ಪ್ರವೇಶಿಸಿದಾಗ ಪೊಲೀಸರ ಕಣ್ಣಿಗೆ ನಿಗೂಢ ಸ್ಥಿತಿಯಲ್ಲಿ ಬಿಸ್ವಾಸ್ ಪತ್ನಿ ಪಂಪಾ ಸರ್ಕಾರ್ (22) ಮೃತದೇಹ ಪತ್ತೆಯಾಯಿತು. ಪೊಲೀಸರ ಪ್ರಕಾರ ಪಂಪಾಳ ತಲೆಯನ್ನು ನೀರು ತುಂಬಿದ ಬಕೆಟ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ.
ದಂಪತಿ ಒಂದೂವರೆ ವರ್ಷದ ಹಿಂದೆ ಮದುವೆ ಆಗಿದ್ದರು. ಇಬ್ಬರು ಕೂಡ ಅಸ್ಸಾಂ ಮೂಲದವರು. ಕೆಲಸಕ್ಕೆಂದು ಹೈದರಬಾದ್ಗೆ ಬಂದಿದ್ದ ದಂಪತಿ, ಪ್ರೇಮ್ನಗರದಲ್ಲಿ ವಾಸವಿದ್ದರು. ಪತ್ನಿಯ ಶೀಲ ಶಂಕಿಸಿ, ಕೆಲವು ದಿನಗಳ ಹಿಂದೆ ಆಕೆಯನ್ನು ಬಿಸ್ವಾಸ್ ಪ್ರಶ್ನೆ ಮಾಡಿದ್ದ ಎಂದು ತಿಳಿದುಬಂದಿದೆ. ಇದೇ ವಿಚಾರಕ್ಕೆ ಸೋಮವಾರ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಪಂಪಾ ಕೊಲೆಯಲ್ಲಿ ಅಂತ್ಯವಾಗಿದೆ.
ಪತ್ನಿ ಮೃತಪಟ್ಟಿರುವುದು ದೃಢವಾದ ಬಳಿಕ ಮೃತದೇಹವನ್ನು ಅಲ್ಲಿಯೇ ಬಿಟ್ಟು, ಮನೆಯನ್ನು ಲಾಕ್ ಮಾಡಿ, ಮರು ದಿನ ಅಂದರೆ ಮಂಗಳವಾರ ರೈಲು ನಿಲ್ದಾಣಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ತಂದಿದ್ದು, ತನಿಖೆ ಆರಂಭಿಸಿದ್ದಾರೆ. ಘಟನೆಯ ಕುರಿತು ದಂಪತಿಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. (ಏಜೆನ್ಸೀಸ್)
ಕಾಮಿಡಿಗಿಂತ ಹೀರೋಗಳ ಜತೆ ರೊಮ್ಯಾನ್ಸ್ ಮಾಡುವುದೇ ಸುಲಭ! ಬೋಲ್ಡ್ ಹೇಳಿಕೆ ನೀಡಿದ ರಾಶಿ ಖನ್ನಾ
ಸ್ವರಾ ಭಾಸ್ಕರ್ಗೆ ಕೊಲೆ ಬೆದರಿಕೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ, ಮತ್ತೆ ಮುನ್ನೆಲೆಗೆ ಬಂದ 2017ರ ಟ್ವೀಟ್
ಥಾಯ್ಲೆಂಡ್ ಬೀಚ್ನಲ್ಲಿ ಆಶಿಕಾ ಸಹೋದರಿಯ ಹಾಟ್ ಅವತಾರ: ಬೋಲ್ಡ್ ಫೋಟೋಗಳು ವೈರಲ್!