More

    ಖಾಸಗಿ ಬಸ್​ ತಡೆದು ಪರಿಶೀಲಿಸಿದ ಪೊಲೀಸರಿಗೆ ಪ್ರಯಾಣಿಕರ ಸೀಟಿನ ಅಡಿಯಲ್ಲಿ ಕಾದಿತ್ತು ಶಾಕ್​!

    ವಿಜಯವಾಡ: ಯಾರಿಗೂ ತಿಳಿಯದಂತೆ ಖಾಸಗಿ ಬಸ್​ನಲ್ಲಿ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಲ್ಲಜರ್ಲ ವಲಯದ ವೀರವಳ್ಳಿಯಲ್ಲಿ ನಡದಿದೆ.

    ಟೋಲ್​ ಪ್ಲಾಜಾದಲ್ಲಿ ಬಸ್​ ತಪಾಸಣೆ ಮಾಡುವಾಗ ಭಾರೀ ಮೊತ್ತದ ಹಣ ಪತ್ತಯಾಗಿದ್ದು, ಬಸ್​ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಕ್ಕೆ ಪಡೆಯಲಾದ ಮೊತ್ತು ಸುಮಾರು 5 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

    ಪೊಲೀಸರು ಟೋಲ್ ಪ್ಲಾಜಾದಲ್ಲಿ ಬಸ್ ಅನ್ನು ಪರಿಶೀಲಿಸಿದಾಗ ಬಸ್​ನಲ್ಲಿ ಲಗೇಜ್ ಕಂಪಾರ್ಟ್​ಮೆಂಟ್​ಗಳಲ್ಲಿ ಮತ್ತು ಸೀಟಿನ ಕೆಳಗೆ ನೋಟುಗಳ ಬಂಡಲ್​ಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ನಗದನ್ನು ವಶಪಡಿಸಿಕೊಂಡಿರುವ ಪೊಲೀಸರು ಹಣ ಎಲ್ಲಿಂದ ತರಲಾಗಿದೆ ಮತ್ತು ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿಜಯನಗರದಿಂದ ಗುಂಟೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಇಷ್ಟೊಂದು ಮೊತ್ತದ ನಗದನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಹಲವು ಅನುಮಾನಗಳಿವೆ.

    ಪ್ರಯಾಣಿಕರ ಆಸನಗಳ ಕೆಳಗೆ ಹಣವನ್ನು ಸಾಗಿಸುತ್ತಿದ್ದರಿಂದ ಇದು ಕಪ್ಪು ಹಣ ಎಂದು ಪೊಲೀಸರು ಶಂಕಿಸಿದ್ದಾರೆ. ಹಣ ವರ್ಗಾವಣೆ ವಿಚಾರ ಚಾಲಕ ಹಾಗೂ ಕ್ಲೀನರ್​ಗೆ ಗೊತ್ತಿದೆಯೇ ಎಂಬ ಪ್ರಶ್ನೆಗಳು ಮೂಡುತ್ತಿವೆ. ವಿಜಯನಗರದಿಂದ ಗುಂಟೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಯಾವಾಗ ಮತ್ತು ಎಲ್ಲಿ ನಗದು ಜಮಾ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಜಯನಗರದಲ್ಲಿಯೇ ಬಸ್ ಲೋಡ್ ಮಾಡಲಾಗಿದೆಯೇ ಅಥವಾ ನಡುರಸ್ತೆಯಲ್ಲಿ ಬಸ್​ನಲ್ಲಿ ಹಣ ಇಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಬಸ್‌ನಲ್ಲಿ ದೊಡ್ಡ ಮೊತ್ತದ ಹಣವನ್ನು ಸಾಗಿಸುತ್ತಿದ್ದ ಟ್ರಾವೆಲ್‌ನ ಮಾಲೀಕತ್ವದ ಬಗ್ಗೆಯೂ ಅನುಮಾನಗಳು ಹುಟ್ಟಿಕೊಂಡಿವೆ. ಖಾಸಗಿ ಟ್ರಾವೆಲ್ಸ್ ಒಡೆತನದ ನೋಟುಗಳ ಬಂಡಲ್‌ಗಳಿಗೆ ಯಾವುದಾದರೂ ಲಿಂಕ್ ಇದೆಯೇ? ಅಥವಾ 5 ಕೋಟಿ ರೂ.ಗಳ ಅಕ್ರಮ ಸಾಗಾಟದ ಹಿಂದೆ ಬೇರೆಯವರ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​​)

    ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರಬಾರದು: ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಸಲಹೆ

    ಶಾಲಾ ಮಕ್ಕಳ ಬಿಸಿಯೂಟಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರನ್ನಿಡಿ: ಬಿ.ವೈ.ವಿಜಯೇಂದ್ರ ಮನವಿ

    ಮಕ್ಕಳ ಬಿಸಿಯೂಟದ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಘೋಷಿಸಿದ ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts