More

    ನಾನು ಭಯಸ್ತ ಅಲ್ಲ, ಮಾಗಡಿ ರೋಡಲ್ಲಿ ದೊಡ್ಡದೊಡ್ಡ ಪೋಲಿ ಆಟವಾಡಿ ಬಂದವನು: ಹಂಸಲೇಖ

    ಬೆಂಗಳೂರು: ನನ್ನ ವಿರುದ್ಧ ಒಂದು ವಿವಾದ ಆದಾಗ ನನ್ನ ಬೆಂಬಲಕ್ಕೆ ನಿಂತಿದ್ದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರು ಎಂದು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಹಳೆಯ ಘಟನೆಯನ್ನು ಕೆದಕಿದರು.

    ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರ ಆತ್ಮಕಥನ ಯರಬೇವು ಬಿಡುಗಡೆ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಮಾತನಾಡಿದರು. ನನ್ನ ವಿರುದ್ಧ ಒಂದು ವಿವಾದ ಆದಾಗ ಸುಮ್ಮನಿರು ನಾನು ಮಾತನಾಡುತ್ತೇನೆಂದು ನನ್ನ ಬೆಂಬಲಕ್ಕೆ ನಿಂತಿದ್ದು ಎಸ್​ಜಿಎಸ್​ ಅವರು. ಬ್ಲಡ್ ಫ್ರೈ ಬಗ್ಗೆ ಮಾತನಾಡಿದಕ್ಕೆ ಬ್ಲಡ್ ತಿನ್ನೋದನ್ನ ಮರೆತವರು ಸೇರಿ ನನ್ನ ಮೇಲೆ ಮುಗಿಬಿದ್ದರು. ಅಂದು ನಾನು ಮಾಡಿದ್ದು ಬರೆದುಕೊಂಡು ಬಂದ ಭಾಷಣ ಆಗಿರಲಿಲ್ಲ. ದೇಶಿಯ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಕೆಲವರು ನನ್ನ ವಿರುದ್ಧ ತಿರುಗಿಬಿದ್ರು. ನುಡಿದರೆ ಮುತ್ತಿನಹಾರದಂತೆ ಇರಬೇಕು. ಆದರೆ, ಅಂತಹ ಮಾತು ಕೆಲ ಸಂದರ್ಭದಲ್ಲಿ ಕುದಿಯುವ ಸಲಾಕೆ ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

    ನಾಗರಾಜ ಮೂರ್ತಿ ಅವರು ಯಾರಿಗೂ ಹೆದರಬೇಡಿ ಅಂತ ಬೆಂಬಲ ನೀಡಿದ್ದಾರೆ. ಆದರೆ, ನಾನು ಭಯಸ್ತ ಅಲ್ಲ. ಮಾಗಡಿ ರೋಡ್​ನಲ್ಲಿ ದೊಡ್ಡ ದೊಡ್ಡ ಪೊಲಿ ಆಟಗಳನ್ನು ಆಡಿ ಬಂದವನು ನಾನು. ಅದಕ್ಕೊಂದು ಚರಿತ್ರೆಯೇ ಇದೆ. ಈಗ ನನಗೆ ಎಪ್ಪತ್ತು, ತಿನ್ನೋದು ಒಪ್ಪತ್ತು ಎಂದರು.

    ಯರೆಬೇವು ಪುಸ್ತಕ ದೇಸಿ ಸಮುದಾಯದ ಕರುಳಿನ ಕತೆಯಾಗಿದೆ. ನಮ್ಮದೂ ಕೂಡ ಅದೇ ರೀತಿಯ ಕರುಳಿನ ಕತೆ. ಇತ್ತಿಚೆಗೆ ಒಂದು ಸಮಸ್ಯೆಯಾಗಿ ನನಗೆ ಗೊತ್ತಿಲ್ಲದ ಸಮುದಾಯಗಳೆಲ್ಲ ನನ್ನ ಜತೆಗೆ ಬಂದು ನಿಂತರು. ಹೀಗೆಲ್ಲ ಆಗತ್ತೆ ಅಂತ ನನಗೆ ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ ಸಿದ್ದರಾಮಯ್ಯ ಎಂದು ನೆನೆದರು.

    ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರ ಆತ್ಮಕಥನ ಯರಬೇವು ಬಿಡುಗಡೆ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮರಳುಸಿದ್ದಪ್ಪ, ಚನ್ನಬಸಪ್ಪ, ಹಂಸಲೇಖ, ಆಶಾದೇವಿ, ಮಹದೇವಯ್ಯ ಉಪಸ್ಥಿತರಿದ್ದರು. ಸ್ವಾಗತ ಭಾಷಣದಲ್ಲಿಯೇ ಹಂಸಲೇಖ ವಿರುದ್ಧ ತಿರುಗಿಬಿದ್ದ ವೈದಿಕ ಶಾಹಿ ನಿಲುವನ್ನು ಪ್ರಗತಿಪರ ಚಿಂತಕ ಕೆ.ವಿ ನಾಗರಾಜ್ ಮೂರ್ತಿ ಖಂಡಿಸಿದರು. (ದಿಗ್ವಿಜಯ ನ್ಯೂಸ್​)

    ವಿವಾದದ ಸುಳಿಯಲ್ಲಿ ನಾದಬ್ರಹ್ಮ: ಕ್ಷಮಿಸಿ.. ನನ್ನ ಹೆಂಡ್ತಿ ಬಳಿಯೂ ಕ್ಷಮೆ ಕೇಳಿದ್ದೀನಿ.. ಎಂದು ಕೈಮುಗಿದ ಹಂಸಲೇಖ

    ಪೇಜಾವರ ಶ್ರೀಗಳ ಪಾದದ ಧೂಳಿಗೂ ನೀವು ಸಮವಲ್ಲ: ಹಂಸಲೇಖ ವಿರುದ್ಧ ಶಿವರಾಣಿ ಆಕ್ರೋಶ

    ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ… ನಾದಬ್ರಹ್ಮ ಹಂಸಲೇಖ ವಿರುದ್ಧ ದೂರು ದಾಖಲು

    ಬಾಯ್​ಫ್ರೆಂಡ್​ ನಗ್ನ ಫೋಟೋ ಶೇರ್​ ಮಾಡಿ, ಮೇಡ್ ಫಾರ್ ಈಚ್ ಅದರ್ ಅಂದ್ರು ಶ್ರುತಿ ಹಾಸನ್​!

    ಪ್ರಚಾರಕ್ಕಾಗಿ ಕರ್ನಾಟಕ ಬಂದ್ ಮಾಡಿದ್ರೆ ನಮ್ಮ ಬೆಂಬಲ ಇರುವುದಿಲ್ಲ: ನಟ ನಿಖಿಲ್​ ಕುಮಾರಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts