ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸದ್ಯ ಚುನಾವಣೆ ಭರಾಟೆ ಜೋರಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ಮತ್ತು ಪೋಸ್ಟ್ ವಾರ್ಗಳು ಸಹ ನಡೆಯುತ್ತಿವೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ರಾಶಿ ರಾಶಿ ಹಣದ ಕಂತೆಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಹಣವನ್ನು ಬಂಗಾಳ ಬಿಜೆಪಿ ನಾಯಕರೊಬ್ಬರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಕೆಲವು ಪೊಲೀಸರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿರಿ: ಕಡೆಗಣಿಸಿದ್ರೆ ಎಫ್ಐಆರ್: ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆಗೆ ಹೈಕೋರ್ಟ್ ಸೂಚನೆ
ಅನೇಕ ಫೇಸ್ಬುಕ್ ಮತ್ತು ಟ್ವಿಟರ್ ಬಳಕೆದಾರರು ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಬಂಗಾಳ ಬಿಜೆಪಿ ನಾಯಕನ ಮನೆಯಲ್ಲಿ ಭಾರಿ ಹಣ ವಶಪಡಿಸಿಕೊಳ್ಳಲಾಗಿದೆ. ಅವರು ಬಡವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಆದರೆ, ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಫೋಟೋ ಹಿಂದಿನ ಅಸಲಿ ಸತ್ಯ ಬಯಲಾಗಿದೆ. ಈ ಫೋಟೋವನ್ನು 2019ರಂದು ತೆಗೆಯಲಾಗಿದೆ. ಆವಾಗ ತೆಲಂಗಾಣ ಪೊಲೀಸರು ಖಮ್ಮಮ್ನಲ್ಲಿ ನಕಲಿ ನೋಟು ಜಾಲವನ್ನು ಭೇದಿಸಿ, ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ 6 ಕೋಟಿ ರೂ. ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಎಎನ್ಐ ಸಹ ಟ್ವೀಟ್ ಮಾಡಿದೆ. ಆದರೆ, ಬಂಗಾಳದ ಬಿಜೆಪಿ ನಾಯಕರ ಮನೆಯಲ್ಲಿ ಹಣ ವಶಕ್ಕೆ ಪಡೆದಿದ್ದಾರೆಂದು ತಿಳಿಸುವ ಯಾವುದೇ ಇತ್ತೀಚಿನ ವರದಿ ಇಲ್ಲ.
Telangana: Khammam police today arrested five persons for cheating public in guise of exchanging Rs. 2,000 denomination currency notes and offering 20% commission.
320 bundles of Rs. 2000 denomination fake notes (around Rs 6.4 crores) seized. pic.twitter.com/ptulXGi1Qb— ANI (@ANI) November 2, 2019
ಗೂಗಲ್ ರಿವರ್ಸ್ ಸರ್ಚ್ ಇಂಜಿನ್ ಬಳಸಿಕೊಂಡು ವೈರಲ್ ಫೋಟೋ ಕುರಿತು ನೋಡಿದಾಗ ತೆಲಂಗಾಣ ಟುಡೆ ಎಂಬ ವೆಬ್ಸೈಟ್ 2019ರ ನವೆಂಬರ್ನಲ್ಲಿ ಫೋಟೋ ಕುರಿತಾದ ಸುದ್ದಿಯನ್ನು ಮಾಡಿದೆ. ಇದರ ಪ್ರಕಾರ ಫೋಟೋದಲ್ಲಿರುವ ಹಣ ಖಮ್ಮಮ್ನಲ್ಲಿ ನಕಲಿ ನೋಟು ಜಾಲ ಭೇದಿಸಿದಾಗ ಪೊಲೀಸರು ತೆಗೆದ ಚಿತ್ರವಾಗಿದೆ.
ಇದನ್ನೂ ಓದಿರಿ: ಖಾಸಗಿ ಕಂಪನಿ ಉದ್ಯೋಗಿ ಯಶಸ್ವಿ ಕೃಷಿಕ, ಪ್ರತಿದಿನ 500 ರೂ. ತರಕಾರಿ ಮಾರಾಟ
ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋಗೂ ಪಶ್ಚಿಮ ಬಂಗಾಳದ ಬಿಜೆಪಿ ನಾಯಕನಿಗೂ ಸಂಬಂಧವಿಲ್ಲ ಎಂಬುದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ. (ಏಜೆನ್ಸೀಸ್)
ಕಾಲಿಗೆ ಕಪ್ಪು ದಾರ ಯಾಕೆ ಕಟ್ತಾರೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಸಂಗತಿ..!
ಕತ್ತೆ ಹೊತ್ತು ನಡೆಯುತ್ತಿರುವ ಯೋಧ: ವೈರಲ್ ಫೋಟೋ ಹಿಂದಿನ ನಿಜವಾದ ಕತೆ ಮನಕಲಕುವಂತಿದೆ!
ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿಯಾಗಿದ್ದು ಕಾರಣವೇ ತಿಳೀತಿಲ್ಲ- ಪ್ಲೀಸ್ ಪರಿಹಾರ ಹೇಳಿ