ಹೈದರಾಬಾದ್: ತಾರಾದಂತಿ ಸಮಂತಾ-ನಾಗಚೈತನ್ಯ ಡಿವೋರ್ಸ್ ವಿಚಾರವೀಗ ಹೆಚ್ಚು ಸದ್ದು ಮಾಡುತ್ತಿದೆ. ಮೊನ್ನೆವರೆಗೂ ಸುಮ್ಮನಿದ್ದ ನಾಗಸಮಂತಾ ನಿನ್ನೆ ದಿಢೀರನೇ ಬೇರೆ ಬೇರೆ ಆಗುತ್ತಿರುವುದಾಗಿ ಅಧಿಕೃತ ಘೋಷಣೆ ಮಾಡಿದರು. ಇಬ್ಬರು ತಮ್ಮ ವೈವಾಹಿಕ ಜೀವನವನ್ನು ಅರ್ಧ ಅಂತ್ಯಗೊಳಿಸಿರುವುದು ಅವರ ಅಭಿಮಾನಿಗಳಿಗೆ ಬಹಳ ಬೇಸರ ತರಿಸಿದೆ.
ನಾಗಸಮಂತಾ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿರುವ ನಡುವೆಯೇ ಸಮಂತಾ ಮಾಜಿ ಪ್ರಿಯಕರ ನಟ ಸಿದ್ಧಾರ್ಥ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮೋಸಗಾರರು ಎಂದಿಗೂ ಏಳಿಗೆ ಆಗುವುದಿಲ್ಲ ಎಂಬುದು ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠಗಳಲ್ಲಿ ಒಂದು. ನಿಮ್ಮದು ಏನು? ಎಂದು ಪ್ರಶ್ನೆ ಹಾಕಿ ಸಿದ್ಧಾರ್ಥ ಟ್ವೀಟ್ ಮಾಡಿದ್ದಾರೆ. ಸಮಂತಾ-ನಾಗಚೈತನ್ಯ ಡಿವೋರ್ಸ್ ಘೋಷಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಸಿದ್ಧಾರ್ಥ್ ಈ ಟ್ವೀಟ್ ಮಾಡಿದ್ದು ಭಾರೀ ವೈರಲ್ ಆಗಿದೆ. ಆದರೆ, ಎಲ್ಲಿಯೂ ಯಾರ ಹೆಸರನ್ನು ಸಿದ್ಧಾರ್ಥ ಉಲ್ಲೇಖಿಸಿಲ್ಲ. ಆದರೆ, ಜಾಲತಾಣದಲ್ಲಂತೂ ಸಮಂತಾರನ್ನು ಉದ್ದೇಶಿಸಿಯೇ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆಂದು ಚರ್ಚೆಯಾಗುತ್ತಿದೆ. ಅದಕ್ಕೆ ಉತ್ತರ ಅವರೇ ಕೊಡಬೇಕಾಗಿದೆ.
One of the first lessons I learnt from a teacher in school…
"Cheaters never prosper."
What's yours?
— Siddharth (@Actor_Siddharth) October 2, 2021
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಸಿದ್ಧಾರ್ಥ್ ಓರ್ವ ಅದ್ಭುತ ನಟ. ತಮ್ಮ ಮುಂದಿನ ಮಹಾ ಸಮುದ್ರಂ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಸಿದ್ಧಾರ್ಥ್ ಕಮ್ಬ್ಯಾಕ್ ಮಾಡಿದ್ದಾರೆ. ಇನ್ನು ಸಿದ್ಧಾರ್ಥ್ ಅವರ ವೈಯಕ್ತಿಕ ಜೀವನವು ಕೂಡ ಹೆಚ್ಚು ಸುದ್ದಿ ಮಾಡಿದೆ. ಏಕೆಂದರೆ, ಭಾರತೀಯ ಸಿನಿ ರಂಗದ ಅನೇಕ ನಟಿಯರ ಜತೆಯಲ್ಲಿ ಸಿದ್ಧಾರ್ಥ್ ಹೆಸರು ಕೇಳಿಬಂದಿದೆ.
2003ರಲ್ಲಿ ಸಿದ್ಧಾರ್ಥ್ ಮೇಘನಾ ಎಂಬುವರನ್ನು ಮದುವೆ ಆಗಿದ್ದರು. ಆದರೆ, ಅವರು ಒಂದು ವರ್ಷಗಳ ಕಾಲ ಪ್ರತ್ಯೇಕವಾಗಿ ಜೀವಿಸುವ ಮೂಲಕ 2007ರಲ್ಲಿ ವಿಚ್ಛೇದನ ಪಡೆದುಕೊಂಡರು. ರಂಗ್ ದೇ ಬಸಂತಿ ಸಹ ನಟಿ ಸೋಹಾ ಅಲಿ ಖಾನ್ ಜತೆ ಲವ್ ಅಫೇರ್ ಇತ್ತು ಎನ್ನಲಾಗಿದೆ. ಆಕೆಯೊಂದಿಗೆ ಬ್ರೇಕ್ ಮಾಡಿಕೊಂಡ ಬಳಿಕ ನಟಿ ಶ್ರುತಿ ಹಾಸನ್ ಜತೆ ಸಿದ್ಧಾರ್ಥ್ ಹೆಸರು ತಳುಕು ಹಾಕಿಕೊಂಡಿತ್ತು.
ಸುಮಾರು ಅರ್ಧ ವರ್ಷ ಪ್ರೇಮ ಸಂಬಂಧದಲ್ಲಿದ್ದ ಸಿದ್ಧಾರ್ಥ ಮತ್ತು ಶ್ರುತಿ ನಂತರದಲ್ಲಿ ಸಂಪರ್ಕ ಕಡಿದುಕೊಂಡಿದ್ದರು. ಇದಾದ ಬಳಿಕ ಸಮಂತಾ ಜತೆ ಸಿದ್ಧಾರ್ಥ್ ಪ್ರೀತಿ ಕಂಡುಕೊಂಡಿದ್ದರು ಎನ್ನಲಾಗಿದೆ. ತೆಲುಗು ಸಿನಿಮಾ ಜಬರ್ದಸ್ತ್ ಸಿನಿಮಾ ಸೆಟ್ನಲ್ಲಿ ಭೇಟಿಯಾಗಿದ್ದ ಇಬ್ಬರ ನಡವೆ ಗಾಢವಾದ ಪ್ರೀತಿ ಬೆಳೆದಿತ್ತಂತೆ. ಅಲ್ಲದೆ, ಸಮಂತಾ, ಸಿದ್ಧಾರ್ಥ್ ಜತೆ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದರಂತೆ. ಆದರೆ, ನಂತರದ ದಿನಗಳಲ್ಲಿ ಇಬ್ಬರು ದೂರಾಗಿದ್ದರು.
ಇದಾದ ಬಳಿಕ ಸಮಂತಾ 2017ರಲ್ಲಿ ನಾಗಚೈತನ್ಯರೊಂದಿಗೆ ಮದುವೆ ಆಗಿದ್ದರು. ಇಬ್ಬರ ನಡುವೆ ಮನಸ್ತಾಪದಿಂದ ನಿನ್ನೆ (ಅ.2) ದಿಢೀರ್ ಡಿವೋರ್ಸ್ ಘೋಷಣೆ ಮಾಡಿದ್ದಾರೆ. ಇಬ್ಬರೂ ತಂತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. “ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್ ಆನ್ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.
ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ. ಅನೇಕರು ನೀವಿಬ್ಬರು ದೂರಾಗಬಾರದಿತ್ತು, ಮತ್ತೆ ಒಂದಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)
ಸಮಂತಾ-ನಾಗಚೈತನ್ಯ ಡಿವೋರ್ಸ್ ಹಿಂದಿನ ಪ್ರಮುಖ ಕಾರಣ ಬಯಲು: ಇಬ್ಬರ ನಡುವೆ ನಡೆದಿತ್ತು ವಾಗ್ವಾದ..!
ಮದ್ವೆ ಎಂಬುದು ಸಾವು, ಡಿವೋರ್ಸ್ ಪುನರ್ಜನ್ಮ: ನಾಗಸಮಂತಾ ವಿಚ್ಛೇದನ ಬೆನ್ನಲ್ಲೇ ಆರ್ಜಿವಿ ಟ್ವೀಟ್
ನಾಗಸಮಂತಾ ಬೇರೆಯಾಗಲು ವಿಚ್ಛೇದನ ತಜ್ಞ ಬಾಲಿವುಡ್ ಸೂಪರ್ಸ್ಟಾರ್ ಕಾರಣ ಅಂದ್ರು ಕಂಗನಾ..!
ಡಿವೋರ್ಸ್ ಬೆನ್ನಲ್ಲೇ ಟ್ವೀಟ್ ಮೂಲಕ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ನಟಿ ಸಮಂತಾ..!