ಚೆನ್ನೈ: ಮೇ 3ರಂದು ಆಯೋಜಿಸಿದ್ದ ಈದ್ ಪಾರ್ಟಿಯಲ್ಲಿ 32 ವರ್ಷದ ವ್ಯಕ್ತಿಯೊಬ್ಬ ಬಿರಿಯಾನಿ ಜತೆ 1.45 ಲಕ್ಷ ರೂ. ಮೌಲ್ಯದ ಆಭರಣವನ್ನು ನುಂಗಿ ನೀರು ಕುಡಿದಿದ್ದ ವಿರಳಾತಿ ವಿರಳ ಘಟನೆ ಚೆನ್ನೈ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.
ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ರಂಜಾನ್ ಹಿನ್ನೆಲೆಯಲ್ಲಿ ಊಟಕ್ಕೆಂದು ತನ್ನೊಂದಿಗೆ ಕೆಲಸ ಮಾಡುವ ಸ್ನೇಹಿತೆಯರನ್ನು ಮನೆಗೆ ಆಹ್ವಾನಿಸಿದ್ದಳು. ಈ ವೇಳೆ ಸ್ನೇಹಿತೆಯ ಜತೆ ಆಕೆಯ ಬಾಯ್ಫ್ರೆಂಡ್ ಸಹ ಬಂದಿದ್ದ. ರುಚಿ ರುಚಿಯಾದ ಬಿರಿಯಾನಿ ಸವಿದ ಸ್ನೇಹಿತೆಯ ಬಾಯ್ಫ್ರೆಂಡ್ 1.45 ಲಕ್ಷ ರೂ. ಮೌಲ್ಯದ ಚಿನ್ನಾಭರವನ್ನು ಸಹ ಗುಳಂ ಮಾಡಿದ್ದ. ಆತ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಔತಣ ಕೂಟ ಮುಗಿದು ಅತಿಥಿಗಳು ತೆರಳಿದ ಬಳಿಕ ಪಾರ್ಟಿ ಆಯೋಜಿಸಿದ್ದ ಮಹಿಳೆ ಬೀರುವಿನಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಅತಿಥಿಗಳನ್ನು ಪರಿಶೀಲಿಸಿದ ಬಳಿಕ ಊಟಕ್ಕೆ ಆಹ್ವಾನಿಸಿದ್ದ ಸ್ನೇಹಿತೆಯ ಬಾಯ್ಫ್ರೆಂಡ್ ಮೇಲೆ ಸಂಶಯ ಮೂಡಿದೆ. ಇದರ ಬೆನ್ನಲ್ಲೇ ವಿರುಗಂಬಕ್ಕಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೇ 4 ರಂದು ಸ್ನೇಹಿತೆಯ ಬಾಯ್ಫ್ರೆಂಡ್ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದ ನಂತರ ಆಭರಣಗಳು ಇನ್ನೂ ಇವೆ ಎಂಬುದು ದೃಢವಾಗಿದೆ. ಇದಾದ ಬಳಿಕ ವೈದ್ಯರು ಆರೋಪಿಗೆ ಎನಿಮಾ ಇಂಜಕ್ಷನ್ ನೀಡಿ, ಗುರುವಾರ ಆತನಿಂದ 95,000 ರೂ.ಮೌಲ್ಯದ ಸರ ಹಾಗೂ 25,000 ರೂ.ಮೌಲ್ಯದ ಚಿನ್ನವನ್ನು ಹೊರ ತೆಗೆದಿದ್ದಾರೆ. ಆದಾಗ್ಯೂ, ಪೆಂಡೆಂಟ್ ಇನ್ನೂ ಅವನ ಹೊಟ್ಟೆಯೊಳಗೆ ಉಳಿದಿತ್ತು ಮತ್ತು ಅದನ್ನು ಹಿಂಪಡೆಯಲು ವೈದ್ಯರು ಅವನಿಗೆ ಬೇದಿಯಾಗುವ ಲಿಕ್ವಿಡ್ ನೀಡಿ ಕೊನೆಗೂ ಎಲ್ಲವನ್ನು ಹೊರತೆಗೆದರು.
ನಡೆದಿದ್ದೇನು ಎಂಬ ಸಂಪೂರ್ಣ ಮಾಹಿತಿ ತಿಳಿದ ಬಳಿಕ ಪಾರ್ಟಿ ಆಯೋಜಿಸಿದ್ದ ಮಹಿಳೆ ಪ್ರಕರಣವನ್ನು ದಾಖಲಿಸಲು ಬಯಸದೇ ದೂರನ್ನು ಹಿಂತೆಗೆದುಕೊಂಡರು. ಸದ್ಯ ಆರೋಪಿ ಮೇಲೆ ಯಾವುದೇ ದೂರು ದಾಖಲಾಗದ ಕಾರಣ ಆತನನ್ನು ಪ್ರಕರಣದಿಂದ ಮುಕ್ತಗೊಳಿಸಲಾಗಿದೆ. (ಏಜೆನ್ಸೀಸ್)
‘ಗೃಹ ಸಚಿವರ ಊರಲ್ಲಿ 2 ದಿನ ದಿವ್ಯಾ ಕಾರು ಇತ್ತು! ಪಿಎಸ್ಐ ಹುದ್ದೆ ಅಕ್ರಮದ ಆರೋಪಿ ಜತೆ ನೇರ ಸಂಪರ್ಕ ಹೊಂದಿದ್ದರು…’
ಬಟ್ಟೆ ಬದಲಾಯಿಸಲು ಈಜುಕೊಳದ ಡ್ರಸ್ಸಿಂಗ್ ರೂಮ್ ಒಳಗೆ ಹೋದ ಯುವತಿಗೆ ಕಾದಿತ್ತು ಬಿಗ್ ಶಾಕ್!
ಮುಸ್ಲಿಂ ಕುಟುಂಬದಿಂದ ಹಿಂದು ಯುವಕನ ಹತ್ಯೆ: ಕಣ್ಣೆದುರೇ ಗಂಡನನ್ನು ಕಳ್ಕೊಂಡ ಸುಲ್ತಾನಾಳ ನೋವಿನ ಮಾತಿದು