ಯವತ್ಮಾಲ್ (ಮಹಾರಾಷ್ಟ್ರ): ಎಂಟು ಪ್ರಯಾಣಿಕರಿದ್ದ ಮಹಾರಾಷ್ಟ್ರದ ಸರ್ಕಾರಿ ಬಸ್ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ಚಲಿಸುವಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಘಟನೆ ಮಂಗಳವಾರ ಬೆಳಗ್ಗೆ ಯವತ್ಮಾಲ್ ಜಿಲ್ಲೆಯ ಉಮರ್ಖೇದ್ ಪಟ್ಟಣದಲ್ಲಿ ನಡೆದಿದೆ.
ಸ್ಥಳೀಯರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಚಾಲಕ ಬಸ್ ಚಲಾಯಿಸಿಕೊಂಡು ಹೋಗಿದ್ದೇ ಅನಾಹುತಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಸರ್ಕಾರಿ ಬದ್ ನಾಂದೇಡ್ನಿಂದ ನಾಗ್ಪುರಕ್ಕೆ ತೆರಳುತ್ತಿತ್ತು. ನಡುವೆ ಉಮರ್ಖೇದ್ನಲ್ಲಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ ಭಾರಿ ಮಳೆಯ ಪ್ರವಾಹದಿಂದ ಉಕ್ಕಿ ಹರಿಯುತ್ತಿತ್ತು. ನೀರಿನಲ್ಲಿ ಕೆಲವೇ ದೂರ ಸಾಗಿದ ಬಸ್, ಸೇತುವೆ ಹೋಗುತ್ತಿದ್ದಂತೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದೆ.
ಕೊಚ್ಚಿ ಹೋಗುತ್ತಿದ್ದ ಬಸ್ ಮರವೊಂದರ ಕೊಂಬೆಗೆ ಸಿಲುಸಿಕೊಂಡಿದೆ. ಹೇಗೋ ನಾಲ್ವರು ಪ್ರಯಾಣಿಕರು ಬಸ್ನ ರೂಫ್ ಏರಿ ಬಚಾವ್ ಆಗಿದ್ದಾರೆ. ಇನ್ನು ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇನ್ನೊಬ್ಬ ಪ್ರಯಾಣಿಕ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ.
ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು, ರಾಜ್ಯ ಸಾರಿಗೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ತಂಡಗಳು ಸುತ್ತಮುತ್ತಲಿನ ಹಳ್ಳಿಗಳ ಯುವಕರೊಂದಿಗೆ ರಕ್ಷಣಾ ಕಾರ್ಯ ನಡೆಸುತ್ತಿದೆ. (ಏಜೆನ್ಸೀಸ್)
(ವಿಡಿಯೋ ಕೃಪೆ: ಲೋಕಮಾತ ನ್ಯೂಸ್)
यवतमाळ – उमरखेडजवळ वाहून गेली बस, युवकांनी घेतल्या पाण्यात उड्या pic.twitter.com/5EmVMeksh2
— Lokmat (@MiLOKMAT) September 28, 2021
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್ಗೌಡ ರಾಜೀನಾಮೆ: ಸಂಸದ ಜಿಎಸ್ಬಿ, ಸಚಿವ ಮಾಧುಸ್ವಾಮಿ ಹೆಸರು ತಳುಕು
ಅತ್ಯಾಚಾರ ಸಂತ್ರಸ್ತೆಯ ಜೀವ ಉಳಿಸಿದ ನಟಿ ಜ್ಯೋತಿಕಾ ಸಿನಿಮಾ: ಸಂಬಂಧಿಯ ಕರಾಳ ಮುಖ ಬಿಚ್ಚಿಟ್ಟ ಬಾಲಕಿ
ಏಷ್ಯಾದ ಅತಿದೊಡ್ಡ ಸುರಂಗ ಮಾರ್ಗ ಶೀಘ್ರ ಮುಕ್ತಾಯ: ಚೀನಾ-ಪಾಕ್ ಗಡಿಯಲ್ಲಿರೋ ಇದಕ್ಕಿದೆ ಹಲವಾರು ವಿಶೇಷತೆ