ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರಷ್ಟೇ ಅಲ್ಲ, ಜನ ನಾಯಕರು. ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದವರು. ಅವರನ್ನು ಪಕ್ಷ ಮೂಲೆಗುಂಪು ಮಾಡಿಲ್ಲ, ಅಂತಹ ಪ್ರಶ್ನೆಯೇ ಇಲ್ಲವೆಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.
ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಶಿಕಾರಿಪುರ ಕ್ಷೇತ್ರವನ್ನು ಮಗನಿಗಾಗಿ ಬಿಟ್ಟು ಕೊಡುವುದಾಗಿ ಹೇಳಿದ್ದಾರೆ. ಜತೆಗೆ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ತಿಳಿಸಿದ್ದು, ಬಿಎಸ್ ವೈ ನಮ್ಮಂತಹವರು ಮತ್ತು ನಮ್ಮ ಪಕ್ಷದ ಬಲವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಅವರು ಓಡಾಡುವುದು ಶೇಕಡ 100ರಷ್ಟು ದಿಟ ಎಂದರು.
ಪುಣ್ಯಕೋಟಿಗೆ ಚಾಲನೆ
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜು.28ಕ್ಕೆ ಒಂದು ವರ್ಷ ಪೂರ್ಣಗೊಳಿಸಲಿದ್ದು, ಗೋಶಾಲೆಗಳ ಗೋವುಗಳನ್ನು ದತ್ತು ಸ್ವೀಕರಿಸುವ ‘ ಪುಣ್ಯಕೋಟಿ’ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಆಸಕ್ತರು ಯಾರು ಬೇಕಾದರೂ ದತ್ತು ಪಡೆಯಬಹುದು. ವಾರ್ಷಿಕ 11,000 ರೂ ಶುಲ್ಕ ನಿಗದಿಪಡಿಸಲಾಗುತ್ತದೆ ಎಂದು ಪ್ರಭು ಚವ್ಹಾಣ್ ತಿಳಿಸಿದರು.
ಯಾರು ಈ ಅರ್ಪಿತಾ ಮುಖರ್ಜಿ? ಸಾಮಾನ್ಯ ನಟಿಯ ಮನೆಯಲ್ಲಿ 20 ಕೋಟಿ ನಗದು ಹೇಗೆ ಬಂತು?
ದೆಹಲಿಯ ರೈಲು ನಿಲ್ದಾಣದ ಫ್ಲಾಟ್ಫಾರ್ಮ್ನಲ್ಲಿ ಮಹಿಳೆ ಮೇಲೆ ಗ್ಯಾಂಗ್ರೇಪ್: ನಾಲ್ವರು ರೈಲ್ವೆ ಸಿಬ್ಬಂದಿ ಅರೆಸ್ಟ್
PHOTO! ಹಾಟ್ ಅವತಾರದಲ್ಲಿ ದೀಕ್ಷಾ ಸೇಠ್: ಬಿಕಿನಿ ಫೋಟೋ ಹರಿಬಿಟ್ಟ ಜಗ್ಗುದಾದನ ಬೆಡಗಿ