ಮುಂಬೈ: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಹಿಂದಿಯಲ್ಲಿ ನಿರಂತರವಾಗಿ ಸಾಗುತ್ತಲೇ ಇದೆ. ಈಗಾಗಲೇ 14 ಆವೃತ್ತಿ ಮುಕ್ತಾಯವಾಗಿದ್ದು, 15ನೇ ಆವೃತ್ತಿ ನಡೆಯುತ್ತಿದೆ. ಬಿಗ್ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಗ್ಬಾಸ್ ಹೌಸ್ ಕಹಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.
ಟಾಸ್ಕ್ನಲ್ಲಿ ಸೋತಿದ್ದಕ್ಕೆ ಬಿಗ್ಬಾಸ್ ಸ್ಪರ್ಧಿಯೊಬ್ಬರು ಮನೆಯೊಳಗೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ವಿಐಪಿ ಟಿಕೆಟ್ಗಾಗಿ ಮನೆಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅಫ್ಸಾನಾ ಖಾನ್ ಮಾತ್ರ ಆಯ್ಕೆ ಆಗಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಅಫ್ಸಾನಾ ಚಾಕು ತೆಗೆದುಕೊಂಡು ಕೈ ಕುಯ್ದುಕೊಳ್ಳಲು ಯತ್ನಿಸಿದರು.
ಕರಣ್ ಕುಂದ್ರಾ, ನಿಶಾಂತ್ ಭಟ್, ತೇಜಸ್ವಿ ಪ್ರಕಾಶ್ ಮತ್ತು ಅಫ್ಸಾನಾ ಖಾನ್ ನಾಲ್ವರಲ್ಲಿ ಮೂವರನ್ನು ಮಾತ್ರ ವಿಐಪಿ ಟಿಕೆಟ್ಗೆ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಉಮರ್ ರಿಯಾಜ್ ಆಯ್ಕೆ ಮಾಡಿದರು. ವಿಐಪಿ ಟಿಕೆಟ್ ಕಳೆದುಕೊಂಡ ಬೇಸರದಲ್ಲಿ ತಾಳ್ಮೆ ಕಳೆದುಕೊಂಡ ಅಫ್ಸಾನಾ ಪಕ್ಕದಲ್ಲೇ ಇದ್ದ ಚಾಕು ತೆಗೆದುಕೊಂಡು ಕೈ ಕುಯ್ದುಕೊಳ್ಳಲು ಯತ್ನಿಸಿದರು. ಈ ವೇಳೆ ಪಕ್ಕದಲ್ಲೇ ಇದ್ದ ಕ್ಯಾಪ್ಟನ್ ರಿಯಾಜ್ ಅದನ್ನು ತಡೆದರು.
ಇಷ್ಟು ದೃಶ್ಯವಿರುವ ಬಿಗ್ಬಾಸ್ ಪ್ರೋಮೋ ಇದೀಗ ವೈರಲ್ ಆಗಿದೆ. ಇದೊಂದು ಪ್ರಚಾರದ ತಂತ್ರವೆಂದು ನೆಟ್ಟಿಗರು ಕಿಡಿಕಾರಿದ್ದಾರೆ. ಅಫ್ಸಾನ ನಡೆಯನ್ನು ಅನೇಕರು ಖಂಡಿಸಿದ್ದಾರೆ. (ಏಜೆನ್ಸೀಸ್)
ಯೂಟ್ಯೂಬ್ನಿಂದ ಮಹತ್ವದ ನಿರ್ಧಾರ: ಇನ್ಮುಂದೆ ಯೂಟ್ಯೂಬ್ ವಿಡಿಯೋಗಳ ಕೆಳಗೆ ಇದು ಕಾಣಲ್ಲ!
23 ವರ್ಷಕ್ಕೆ ಈಕೆ ಮಾಡುತ್ತಿರುವ ಅನಾಚಾರ ಕೇಳಿದ್ರೆ ದಂಗಾಗ್ತೀರಾ! ಇದು ಖತರ್ನಾಕ್ ಲೇಡಿಯ ಕರಾಳ ಮುಖ
ಕೇರಳ ಮಾಡೆಲ್ಗಳಿಬ್ಬರ ದುರ್ಮರಣ: ಮಧ್ಯರಾತ್ರಿಯ ಡಿಜೆ ಪಾರ್ಟಿ ರಹಸ್ಯ ಭೇದಿಸಲು ಪೊಲೀಸರ ಹರಸಾಹಸ!