ಬೆಂಗಳೂರು: ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ 7 ಮಂದಿ ದಾರುಣವಾಗಿ ಮೃತಪಟ್ಟಿದ್ದು, ಮೃತರಲ್ಲಿ ಕರುಣಾಸಾಗರ್ ಎಂಬಾತ ತಮಿಳುನಾಡು ಡಿಎಂಕೆ ಶಾಸಕನ ಪುತ್ರ ಎಂದು ತಿಳಿದುಬಂದಿದೆ. ದುರಂತವೆಂದರೆ, ಮದುವೆ ಆಗಬೇಕಿದ್ದ ಯುವತಿಯ ಜತೆಯಲ್ಲೇ ಕರುಣಾಸಾಗರ್ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಇನ್ನು ಅಪಫಾತಕ್ಕೆ ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ಕಾರಣವೆಂದು ಮೇಲ್ನೋಟಕ್ಕೆ ಬಂದಿತ್ತು. ಆದರೆ, ಇದೀಗ ಮತ್ತೊಂದು ಮಾಹಿತಿ ಪ್ರಕಾರ ಚಾಲಕ ಕರುಣಾಸಾಗರ್ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದೇ ಭೀಕರ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಮೃತರನ್ನು ಡೊಂಕಣಿ ಕೋಟೆ ಮೂಲದ ಕುರುಣಾಸಾಗರ್ (25), ಬಿಂದು (28), ಇಸಿತಾ ಬಿಸ್ವಾಸ್ (21), ಧನುಷಾ (29), ಅಕ್ಷಯ್ ಗೋಯೆಲ್ (25), ಉತ್ಸವ್ (25) ಹಾಗೂ ರೋಹಿತ್ (23) ಎಂದು ಗುರುತಿಸಲಾಗಿದೆ. ಇಷಿತಾ, ಧನುಷಾ, ಅಕ್ಷಯ್, ಉತ್ಸವ್ ಮತ್ತು ರೋಹಿತಾ ನಗರದ ಝೋಲೋ ಸಿಯಾಸ್ ಪಿಜಿಯಲ್ಲಿ ವಾಸವಿದ್ದರು. ಬಿಂದು ಮುರುಗೇಶ್ ಪಾಳ್ಯದಲ್ಲಿ ನೆಲೆಸಿದ್ದಳು.
ನಿನ್ನೆ ರಾತ್ರಿ ಕಾರು ಅತಿವೇಗದಲ್ಲಿದ್ದರಿಂದ ಕಾರು ತಡೆದು ವೇಗದ ಚಾಲನೆ ಬಗ್ಗೆ ಕಾನ್ಸ್ಟೇಬಲ್ ಪ್ರಶಾಂತ್ ಎಂಬುವರು ಪ್ರಶ್ನೆ ಮಾಡಿದ್ದರು. ಈ ವೇಳೆ ಮನೆಗೆ ಹೋಗ್ತಿರೋದಾಗಿ ಕರುಣ್ ಹೇಳಿದ್ದ. ಇದೇ ರಸ್ತೆಯಲ್ಲಿ ಮನೆಯಿದೆ, ಎಲ್ಲರು ಮನೆಗೆ ಹೋಗ್ತಿದ್ದೀವಿ ಎಂದು ಸಮಜಾಯಿಷಿ ನೀಡಿದ್ದ. ಬಳಿಕ ಕಾನ್ಸ್ಟೇಬಲ್ ಟೇಕ್ ಕೇರ್ ನೈಟ್ ಕರ್ಪ್ಯೂ ಇದೆ. ನಿಧನಾವಾಗಿ ಹೋಗಿ ಗಾಡಿ ಓಡಿಸು ಎಂದು ಸೂಚಿಸಿದ್ದರು. ಸುಳ್ಳು ಹೇಳಿದ್ದ ಎಲ್ಲರು ಪಾರ್ಟಿಗೆ ಹೋಗಿದ್ದರು ಎಂಬ ಮಾಹಿತಿ ಇದೆ. ತಡರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ಬರುವಾಗ ವೇಗದ ಚಾಲನೆ ಮಾಡಿಕೊಂಡು ಬರುವಾಗ ಅಪಘಾತ ಸಂಭವಿಸಿದೆ.
ಅಂದಹಾಗೆ ಕರುಣಾಸಾಗರ್ ತಮಿಳುನಾಡು ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಪುತ್ರ. ಪ್ರಕಾಶ್ ಹೊಸೂರು ಕ್ಷೇತ್ರದಿಂದ ಡಿಎಂಕೆ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ನಿನ್ನೆ ಸಂಜೆ ಕಟ್ಟಡದ ಸಾಮಾಗ್ರಿಗಳನ್ನು ಖರೀದಿಸಲು ಕರುಣಾಸಾಗರ್ ಬೆಂಗಳೂರಿಗೆ ಆಡಿ ಕ್ಯೂ 3 ಕಾರಿನಲ್ಲಿ ಬಂದಿದ್ದ. ರಾತ್ರಿ ಫ್ರೆಂಡ್ಸ್ ಜೊತೆ ಕಾರಿನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿದ ಕಾರು ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಮಂದಿಯು ದುರಂತ ಅಂತ್ಯ ಕಂಡಿದ್ದಾರೆ. (ಏಜೆನ್ಸೀಸ್)
ಅವ್ರು ದೊಡ್ಡವ್ರು ಬೇಡವ್ವ.. ಅಂದ್ರೂ ಮದ್ವೆ ಆಗ್ತೀನಂತ ಹಠ ಹಿಡಿದು ಅವನೊಂದಿಗೇ ಬಾರದ ಲೋಕಕ್ಕೆ ಹೋಗಿಬಿಟ್ಲು…
ಟೇಕ್ ಕೇರ್ ಅಂದ್ರೂ ಡೋಂಟ್ ಕೇರ್: ಅಪಘಾತಕ್ಕೂ ಮುನ್ನ ಇವರ ಮಾತು ಕೇಳಿದ್ರೆ ಬದುಕುಳಿತಿದ್ದ MLA ಪುತ್ರ?!
ಕಳೆದ ವರ್ಷ ತಂದೆ, ಏಪ್ರಿಲ್ನಲ್ಲಿ ಪತ್ನಿ, ಈಗ ಒಬ್ಬನೇ ಪುತ್ರನ ಜತೆ ಭಾವಿ ಸೊಸೆಯ ಸಾವು: MLA ಗೆ ಸಾಲು ಸಾಲು ಆಘಾತ