More

    ದಿಗ್ವಿಜಯ ನ್ಯೂಸ್​ ನಿರೂಪಕ ಪ್ರಶಾಂತ್​ ರಿಪ್ಪನ್ ಪೇಟೆಗೆ ಆರೂಢ ಶ್ರೀ ಪ್ರಶಸ್ತಿ ಪ್ರದಾನ

    ಬೆಳಗಾವಿ: ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಶ್ರೀ ಆರೂಢ ಮಠದ ಶ್ರೋ ಬ್ರ ಬೃಹ್ಮಲೀನ ಸದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳವರ 12ನೇ ವರ್ಷದ ಪುಣ್ಯಸ್ಮರಣೆ ಹಾಗೂ 42ನೇ ಅಖಿಲ ಕರ್ನಾಟಕ ವೇದಾಂತ ಪರಿಷತ್ ಸಮಾರಂಭದಲ್ಲಿ ದಿಗ್ವಿಜಯ ವಾಹಿನಿಯ ನಿರೂಪಕ ನಿರ್ಮಾಪಕರಾದ ಪ್ರಶಾಂತ ರಿಪ್ಪನ್ ಪೇಟೆ ಅವರಿಗೆ ” ಆರೂಢ ಶ್ರೀ ಪ್ರಶಸ್ತಿ” ಪ್ರದಾನ ಮಾಡಲಾಯಿತು.

    ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಪ್ರಶಾಂತ ರಿಪ್ಪನ್ ಪೇಟೆ ಅವರಿಗೆ ಆರೂಢ ಶ್ರೀ ಪ್ರಶಸ್ತಿ ಲಭಿಸಿರುವುದು ನಮಗೆ ಅತೀವ ಸಂತಸ ತಂದಿದೆ. ಅವರಿಂದ ಇನ್ನಷ್ಟು ಕಾರ್ಯವಾಗಲಿ ಎಂದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀ ಪ್ರಶಾಂತ ರಿಪ್ಪನ್ ಪೇಟೆ ಅವರು ಚಿಕ್ಕಮುನವಳ್ಳಿ ಆರೂಢ ಮಠದಿಂದ ಆರೂಢ ಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವುದು ತುಂಬಾ ಸಂತೋಷ ಸಂಗತಿ. ನಾವು ಮಾಡುವ ಕಾರ್ಯಗಳಿಗೆ ಮತ್ತಷ್ಟು ಶಕ್ತಿ ತುಂಬಿದೆ ಎಂದರು.

    ಈ ಸಂದರ್ಭದಲ್ಲಿ ಧಾರವಾಡದ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಪೂಜ್ಯ ಶ್ರೀ ಶ್ರೀ ಶಶಿಕಾಂತ ಫಡಸಲಗಿ ಗುರುಗಳು, ಪೂಜ್ಯ ಶ್ರೀ ರಮೇಶ ಗುರುಗಳು ಧಾರವಾಡ, ಬೆಳಗಾವಿ ಆರ್​ಟಿಒ ಅಧಿಕಾರಿ ಶ್ರೀ ಶಿವಾನಂದ ಮಗದುಮ್ ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.

    ಭಾವೈಕ್ಯ ಸಂದೇಶ ಸಾರುತ್ತಿದ್ದ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಇನ್ನಿಲ್ಲ

    ಪೊಲೀಸ್ ಗೌರವಗಳೊಂದಿಗೆ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅಂತ್ಯಕ್ರಿಯೆಗೆ ಸರ್ಕಾರದ ಆದೇಶ

    ಭೂ ಮಾಪಿಯಾ ವಿರುದ್ಧ 26 ವರ್ಷದ ಹೋರಾಟಕ್ಕೆ ಸಿಗದ ಫಲ: ಸಿಎಂ ಯೋಗಿ ವಿರುದ್ಧವೇ ಚುನಾವಣಾ ಕಣಕ್ಕಿಳಿದ ಮಾಜಿ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts