ಆಲಪ್ಪುಳ: ದುಬಾರಿ ಬ್ರೇಕ್ಫಾಸ್ಟ್ ನೀಡಿದ ಹೋಟೆಲ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೇರಳದ ಆಲುಪ್ಪುಳ ಕ್ಷೇತ್ರದ ಶಾಸಕ ಚಿತ್ತರಂಜನ್ ಇಟ್ಟಿರುವ ಬೇಡಿಕೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದಿರುವ ಜಿಲ್ಲಾಧಿಕಾರಿ ರೇಣು ರಾಜ್, ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೂ ತಿಳಿಸಿರುವುದಾಗಿ ಜಿಲ್ಲಾ ನಾಗರಿಕ ಸರಬರಾಜು ಅಧಿಕಾರಿ ನೀಡಿದ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಾಸಕ ಚಿತ್ತರಂಜನ್ ಪ್ರಕಾರ ಹೋಟೆಲ್ ಒಂದು ಐದು ದೋಸೆ ಮತ್ತು ಎರಡು ಮೊಟ್ಟೆ ಕರಿಗೆ 184 ರೂಪಾಯಿ ಚಾರ್ಜ್ ಮಾಡಿದರು. ದುಬಾರಿ ಹಣವನ್ನು ಚಾರ್ಜ್ ಮಾಡಿದ್ದಾರೆ, ಹೋಟೆಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬೇಡಿಕೆ ಇಟ್ಟು ದೂರು ದಾಖಲಿಸಿದ್ದರು. ಅಲ್ಲದೆ, ಶಾಸಕರು ಮಾಡಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಚಿವರ ಮಟ್ಟದಲ್ಲೂ ಬಹಳ ಚರ್ಚೆಯಾಗಿತ್ತು.
ಸ್ವಲ್ಪ ಫ್ಯಾನ್ ಗಾಳಿಯನ್ನು ಜೋರು ಮಾಡಿದರೆ ತಟ್ಟೆಯಿಂದ ಹಾರಿ ಹೋಗುವಷ್ಟು ತೆಳುವಾಗಿದ್ದ ದೋಸೆಗೆ ಒಂದಕ್ಕೆ 15 ರೂಪಾಯಿ ಚಾರ್ಜ್ ಮಾಡಿದರು. ಅಲ್ಲದೆ, ಮೊಟ್ಟೆಯ ಮೇಲೆ ಹಾಕುವ ಅಲ್ಪ ಪ್ರಮಾಣದ ಗ್ರೇವಿಗೂ 4.5 ರೂಪಾಯಿ ಚಾರ್ಜ್ ಮಾಡಲಾಗಿತ್ತು. ಎರಡು ಮೊಟ್ಟೆ 50 ರೂಪಾಯಿ ಚಾರ್ಜ್ ಮಾಡಿದ್ದರು. ಅದು ಸ್ಟಾರ್ ಹೋಟೆಲ್ ಆಗಿರಲಿಲ್ಲ. ಎಸಿ ಕೂಡ ಇರಲಿಲ್ಲ. ಆದರೆ, ಜಾಹಿರಾತಿನಲ್ಲಿ ಎಸಿ ಇದೆ ಎಂದು ಬರೆದುಕೊಂಡಿದ್ದಾರೆ. ಊಟದ ಮೆನು ಕೂಡ ಅಲ್ಲಿಲ್ಲ ಎಂದು ಚಿತ್ತರಂಜನ್ ಪೊಸ್ಟ್ ಮಾಡಿದ್ದಾರೆ.
ಕೆಲವು ಹೋಟೆಲ್ಗಳಲ್ಲಿ ಎರಡು ಕರಿಗಳೊಂದಿಗೆ ಸಸ್ಯಾಹಾರಿ ಊಟಕ್ಕೆ 100 ರೂ. ಚಾರ್ಜ್ ಮಾಡಲಾಗುತ್ತದೆ. ಕೆಲವು ಸ್ಥಳೀಯ ಹೋಟೆಲ್ಗಳು ಒಂದು ಚಹಾವನ್ನು 5 ರೂ. ಮತ್ತು ಊಟ 30 ರೂ.ಗೆ ನೀಡುವ ಸಮಯದಲ್ಲಿ ಇಷ್ಟೊಂದು ಹಣ ಚಾರ್ಜ್ ಮಾಡುವುದು ನಿಜಕ್ಕೂ ಶೋಷಣೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. (ಏಜೆನ್ಸೀಸ್)
ಕುವೈತ್ ಬೆನ್ನಲ್ಲೇ ಬೀಸ್ಟ್ ಚಿತ್ರಕ್ಕೆ ತಮಿಳುನಾಡಲ್ಲೂ ಎದುರಾಯ್ತು ಸಂಕಷ್ಟ: ಬ್ಯಾನ್ ಆಗುತ್ತಾ ವಿಜಯ್ ಸಿನಿಮಾ?
ಏನಿದು ಸ್ಯಾಮ್? ಮಾಜಿ ಪತಿಯ ಫೋಟೋ ಶೇರ್ ಮಾಡುವ ಮೂಲಕ ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟ ಸಮಂತಾ..!
ಹೆಣ್ಣು ಮಗು ಜನಿಸಿದ ಖುಷಿ: ಹೆಲಿಕಾಪ್ಟರ್ ಮೂಲಕ ಮಗಳನ್ನು ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡ ತಂದೆ!