More

    ಅಯ್ಯೋ ದುರ್ವಿಧಿಯೇ! ಮಿಕ್ಸ್ಚರ್ ತಿನ್ನುವಾಗ ಗಂಟಲಿಗೆ ಕಡಲೆಬೀಜ ಸಿಲುಕಿ 4ರ ಬಾಲಕಿ ದುರಂತ ಸಾವು

    ಕೊಚ್ಚಿ: ಕಡಲೆಬೀಜ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕೊಯಿಕ್ಕೋಡ್​ನ ನಾರತ್​ ವೆಸ್ಟ್​ನಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ತಾನ್ವಿ ಎಂದು ಗುರುತಿಸಲಾಗಿದೆ. ಮೃತ ತಾನ್ವಿ, ಪ್ರವೀಣ್​ ಮತ್ತು ಶರಣ್ಯಾ ದಂಪತಿಯ ಒಬ್ಬಳೇ ಮಗಳು. ಕಣ್ಣೂರಿನಲ್ಲಿರುವ ಇಂಡಿಯನ್​ ಪಬ್ಲಿಕ್​ ಸ್ಕೂಲ್​ನ ಕಿಂಡರ್​ಗಾರ್ಡನ್​ ವಿದ್ಯಾರ್ಥಿನಿಯಾಗಿದ್ದಳು. ಒಬ್ಬಳೇ ಮಗಳನ್ನು ಕಡೆದುಕೊಂಡ ಪ್ರವೀಣ್​-ಶರಣ್ಯಾ ದಂಪತಿ ಇದೀಗ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

    ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಈ ಘಟನೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಮಿಕ್ಸ್ಚರ್ ಸ್ನ್ಯಾಕ್​ ತಿನ್ನುವಾಗ ಅದರಲ್ಲಿದ್ದ ಕಡಲೆಬೀಜ ತಾನ್ವಿಯ ಗಂಟಲಲ್ಲಿ ಸಿಲುಕಿ ಉಸಿರಾಡಲು ಆಗದೇ ತಾನ್ವಿ ಕೊನೆಯುಸಿರೆಳೆದಿದ್ದಾಳೆ.

    ಕೊಯಿಲ್ಯಾಂಡಿ ತಾಲೂಕು ಆಸ್ಪತ್ರೆಯಿಂದ ಕೊಯಿಕ್ಕೋಡ್​ ವೈದ್ಯಕೀಯ ಕಾಲೇಜಿಗೆ ಸಾಗಿಸುವಾಗ ಮಾರ್ಗ ಮಧ್ಯೆ ತಾನ್ವಿ ಮೃತಪಟ್ಟಿದ್ದಾಳೆ. (ಏಜೆನ್ಸೀಸ್​)

    ಪ್ರೀತಿಯ ನೆನಪೇ ಸ್ಟಾರ್​ ಜೋಡಿಗೆ ಮುಳುವಾಯ್ತು: ವಿಘ್ನೇಶ್​ ಶಿವನ್​-ನಯನತಾರಾ ವಿರುದ್ಧ ದೂರು ದಾಖಲು!

    ಆರ್​ಟಿ ನಗರದ ಬ್ರೋಕರ್​ ಮೋಹನ್ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತು ಪತ್ತೆ

    ಹಿಜಾಬ್‌ ಕೇಸ್‌- ಬಂದ್‌ಗೆ ಕರೆ ನೀಡಿದವರ ವಿರುದ್ಧ ನ್ಯಾಯಾಂಗ ನಿಂದನೆ ತೂಗುಕತ್ತಿ! ಹೈಕೋರ್ಟ್‌ಗೆ ವಕೀಲರಿಂದ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts