More

    ಫೆ.14 ಎಲ್ಲ ಖುಷಿಯಿಂದ ಇರುತ್ತಾರೆ, ಆದರೆ ನನಗೆ ದುಃಖ ತುಂಬಿರುತ್ತದೆ: ಮೃತ ಯೋಧನ ಗುರು ಪತ್ನಿ ಕಲಾವತಿ

    ಮಂಡ್ಯ: ಫೆ.14 ದಿನಾಂಕವನ್ನು ನಾನು ಎಂದಿಗೂ ಮರೆಯುವುದಿಲ್ಲ. ಫೆ. 14 ಪ್ರೇಮಿಗಳ ದಿನ. ಅಂದು ಎಲ್ಲರೂ ಖುಷಿಯಿಂದ ಇರುತ್ತಾರೆ. ಆದರೆ, ಆ ದಿನ ನಂಗೆ ದುಃಖ ತುಂಬಿ ಬರುತ್ತದೆ ಎಂದು ಮೃತ ಯೋಧ ಗುರು ಪತ್ನಿ ಕಲಾವತಿ ಹೇಳಿದ್ದಾರೆ.

    ನನ್ನ ಜೀವನ ಇರುವ ತನಕ ಗಂಡ ಗುರು ಅವರನ್ನು ನಾನು ಮರೆಯಲ್ಲ. ಗುರು ಅವರ ಪುಣ್ಯ ತಿಥಿಯನ್ನು ಇಂದು ಮಾಡುತ್ತಿದ್ದೇವೆ. ನಮ್ಮ ಕುಟುಂಬ ಸದಸ್ಯರು ಇಲ್ಲಿ ಭಾಗವಹಿಸುತ್ತಾರೆ. ಅನ್ನಸಂತರ್ಪಣೆ ಮಾಡುತ್ತಿದ್ದೇವೆ ಎಂದು ಕೆ.ಎಂ.ದೊಡ್ಡಿಯಲ್ಲಿ ಗುರು ಪತ್ನಿ ಕಲಾವತಿ ಹೇಳಿದರು. ಗಂಡನ ಮನೆಯವರ ಬಗ್ಗೆ ಕೇಳಿದ್ದಕ್ಕೆ ಏನೂ ಮಾತನಾಡದ ಕಲಾವತಿ, ಪೂಜೆ ಮಾಡಿದ ಬಳಿಕ ಆ ಬಗ್ಗೆ ಹೇಳ್ತೀನಿ ಎಂದರು.

    ಫೆ.14ರಂದು ಮೃತ ಯೋಧ ಗುರು ಸಮಾಧಿಗೆ ಪೂಜೆ ಸಲ್ಲಿಸಿದ್ದ ಗುರು ತಾಯಿ ಚಿಕ್ಕತಾಯಮ್ಮ, ನಮ್ಮ ಸೊಸೆ ಈಗ ನಮ್ಮ ಜೊತೆಯಲ್ಲಿ ಇಲ್ಲ. ನನ್ನ ಮಗನ ಸಾವಿನ ಬಳಿಕ ಕಲಾವತಿಯನ್ನ ಅವರ ತಂದೆ, ತಾಯಿ ನಮ್ಮ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ ಎಂದಿದ್ದರು.

    ನಾವೆಲ್ಲ ಒಟ್ಟಿಗೆ ಇರೋಣ ಎಂದು ಕೇಳಿಕೊಂಡೆ. ಆದ್ರೂ ನನ್ನ ಮಾತನ್ನು ಆಕೆ ಕೇಳಲಿಲ್ಲ. ನನ್ನ ಮಗ ಇದ್ದಾಗ ಸೊಸೆಯನ್ನು ಮಗಳಂತೆ ನೋಡಿಕೊಂಡಿದ್ದೆ. ನನ್ನ ಮಗ ಗುರು ನಮ್ಮಲ್ಲಿ ಏನೇ ಜಗಳವಾದ್ರು ಸರಿಪಡಿಸುತ್ತಿದ್ದ.

    ಇಂದು ಅವನು ಹುತಾತ್ಮನಾದ ದಿನ. ನಮ್ಮ ಕುಟುಂಬದವರೆಲ್ಲರೂ ಅವನ ಪೂಜೆಗೆ ತೆರಳುತ್ತೇವೆ. ಅವನ ಸ್ನೇಹಿತರು ನಮ್ಮ ಜತೆ ಇರುತ್ತಾರೆ. ಆದರೆ ಸೊಸೆ ಕಲಾವತಿ ಪೂಜೆ ಸಲ್ಲಿಸಲು ಬರುತ್ತಾಳೋ‌‌ ಇಲ್ಲವೋ ಗೊತ್ತಿಲ್ಲ. ಆಕೆ ನಮ್ಮ ಸಂಪರ್ಕದಲ್ಲಿಲ್ಲ ಎಂದು ಗುರು ತಾಯಿ ಚಿಕ್ಕತಾಯಮ್ಮ ನೊಂದು ನುಡಿದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts