More

    ಸಾರ್ವಜನಿಕರ ಎಲ್ಲ ಬೇಡಿಕೆಗಳಿಗೂ ಸ್ಪಂದನೆ – ಮೃಣಾಲ ಹೆಬ್ಬಾಳ್ಕರ್

    ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶಾಸಕರಾದಾಗಿನಿಂದಲೂ ಒಂದು ದಿನವೂ ವಿಶ್ರಮಿಸದೆ ಸಾರ್ವಜನಿಕರ ಎಲ್ಲ ಬೇಡಿಕೆಗಳಿಗೂ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಪ್ರತಿನಿತ್ಯ ಕ್ಷೇತ್ರದಲ್ಲಿ ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳ್ಕರ್ ಹೇಳಿದರು.

    ಮಣ್ಣೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸಾರ್ವಜನಿಕರ ಸಹಕಾರದಿಂದ ಕ್ಷೇತ್ರಕ್ಕೆ ಇನ್ನಷ್ಟು ಯೋಜನೆಗಳನ್ನು ತರಲಾಗುವುದು. ಆ ಮೂಲಕ ರಾಜ್ಯದಲ್ಲಿಯೇ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿಸಲು ಶಾಸಕಿ ಹೆಬ್ಬಾಳ್ಕರ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

    ರಸ್ತೆ ಕಾಮಗಾರಿಗೆ ಚಾಲನೆ: ಹಲಗಾ ಗ್ರಾಮದಿಂದ ಕುರುಬಗಟ್ಟಿ ಗ್ರಾಮದವರೆಗಿನ (ವಾಯಾ ಬಸ್ತವಾಡ) ರಸ್ತೆಯ ಡಾಂಬರೀಕರಣ ಕಾಮಗಾರಿಗಳಿಗೆ ಕಾಂಗ್ರೆಸ್ ಯುವ ಮುಖಂಡ, ಉದ್ಯಮಿ ಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿದರು.

    ಅಶೋಕ ಜಕ್ಕಣ್ಣವರ, ಅಪ್ಪಣ್ಣ ಭಾಗಣ್ಣವರ, ರಾಜು ಬಡವಣ್ಣವರ, ಅರ್ಜುನ ಪಾಟೀಲ, ಅಪ್ಪಯ್ಯ ಭಾಗಣ್ಣವರ, ಮಹಾವೀರ ಸಂಕೇಶ್ವರಿ, ಅಜಿತ ಭಾಗಣ್ಣವರ, ಮನೋಹರ ಭಾಂಡಗಿ, ಸಾಗರ ತಹಸೀಲಾರ್, ಮನೋಹರ ಮುಚ್ಚಂಡಿ, ಬಾಳು ಚೌಗಲೆ, ರಾಮ ಕಾಕತ್ಕರ್, ಗುಂಡು ಚೌಗಲೆ, ಬಶೀರ್‌ಸಾಬ್ ಕಿಲ್ಲೆವಾಲೆ, ಮಹಬೂಬ್ ಸಾಬ್ ಮುಲ್ಲಾ, ಸಂಜು ಬಡಚಿ, ಸುರೇಶ ಹಲಗಿ, ಭರಮಾ ಗೌಡಕೆಂಚಕ್ಕಗೋಳ, ದೇವಪ್ಪ ಬಡವಣ್ಣವರ, ಸುರೇಶ ಭಾಂಡಗಿ, ಯಲ್ಲಪ್ಪ ಭಾಂಡಗಿ ಹಾಗೂ ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts