More

    ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಿ

    ಜೇವರ್ಗಿ: ಕುರುಬ ಪರ್ಯಾಯ ಪದವೇ ಗೊಂಡ ಎಂದು ಪರಿಗಣಿಸಬೇಕು, ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಮಾಜದಿಂದ ಕುರಿಗಳೊಂದಿಗೆ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಹಿರಿಯ ಮುಖಂಡ ಬೈಲಪ್ಪ ನೆಲೋಗಿ, ತಾಲೂಕು ಅಧ್ಯಕ್ಷ ಸಾಯಿಬಣ್ಣ ದೊಡ್ಡಮನಿ ಮಾತನಾಡಿ, ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ೧೯೯೬ರಿಂದ ಹೋರಾಟ ನಡೆಯುತ್ತಿದೆ. ಆದರೆ ಇಲ್ಲಿವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಕೇಂದ್ರ ಸರ್ಕಾರ ಸಮಾಜಕ್ಕೆ ದ್ರೋಹ ಮಾಡಿದ್ದು, ಕೆಲಸ ಮಾಡದವರನ್ನು ಅಧಿಕಾರದಿಂದ ಕೆಳಗಿಳಿಸುವುದು ನಮಗೆ ಗೊತ್ತಿದೆ ಎಂದು ಕಿಡಿಕಾರಿದರು.

    ನಾಲ್ಕೂ ಬಾರಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕುಲಶಾಸ್ತ್ರ ಅಧ್ಯಯನದ ವರದಿ ಕಳುಹಿಸಿದ್ದರೂ ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಸಂಸದರು, ಮಾಜಿ ಶಾಸಕರು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಗೋಜಿಗೆ ಹೋಗಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಸಮಾಜಕ್ಕೆ ಎಸ್‌ಟಿ ನೀಡದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕಾಗಿನೆಲೆ ಕನಕಗುರು ಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ತಿಂಥಣಿಯ ಶ್ರೀ ಲಿಂಗಣ್ಣ ಶರಣ, ಕಲ್ಲೂರಿನ ಶ್ರೀ ದೊಡ್ಡಪ್ಪ ಒಡೆಯರ್, ಸಂಘದ ಯುವ ಘಟಕದ ಅಧ್ಯಕ್ಷ ಭಗವಂತರಾಯಗೌಡ ಪಾಟೀಲ್, ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಪ್ರಮುಖರಾದ ಧರ್ಮಣ್ಣ ದೊಡಮನಿ, ನಿಂಗಣ್ಣ ಭಂಡಾರಿ, ತಿಪ್ಪಣ್ಣ ಗುಂಡಗುರ್ತಿ, ಮಲ್ಲಿಕಾರ್ಜುನ ಕುಳಗೇರಿ, ಮಹಾಂತೇಶ ಕವಲಗಿ, ಮಲ್ಲಿಕಾರ್ಜುನ ತಾಳಿಕೊಟಿ, ಶಿವಪುತ್ರಪ್ಪ ಆಡೀನ್, ನಿಂಗಣ್ಣ ರದ್ದೇವಾಡಗಿ, ರಾಜಶೇಖರ ಮುತ್ತಕೋಡ, ಚಂದ್ರಶೇಖರ ನೇರಡಗಿ, ಶರಣಗೌಡ ಸರಡಗಿ, ದತ್ತಪ್ಪ ರಂಜಣಗಿ, ಸಂತೋಷ ಮಲ್ಲಾಬಾದ್, ಸಿದ್ದು ಗಜ, ಸಂತೋಷ ಗುಡೂರ, ಬಂಗಾರಪ್ಪ ಆಡಿನ್, ಮಾಳು ಹಿಪ್ಪರಗಿ, ರಾಜೇಶ್ವರಿ, ಲಿಂಗರಾಜ ಮಾಸ್ತರ್, ಸುರೇಶ ಬಿರಾದಾರ, ರಮೇಶ ರೇವನೂರ, ರಮೇಶ ಸಿದ್ನಾಳ ಇತರರಿದ್ದರು.

    ರಿಲಯನ್ಸ್ ಪೆಟ್ರೋಲ್ ಬಂಕ್‌ನಿಂದ ವಿಜಯಪುರ ಕ್ರಾಸ್‌ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts