More

    ಶಿವಾರಾಧನೆಯಿಂದ ಪ್ರಗತಿ ನಿಶ್ಚಿತ

    ರಿಪ್ಪನ್‌ಪೇಟೆ: ಮಹಾಶಿವರಾತ್ರಿಯಂದು ಶಿವಾರಾಧನೆ ಹಾಗೂ ವಿಶೇಷ ಧಾರ್ಮಿಕ ವಿಧಿ-ವಿಧಾನಗಳಿಂದ ಪ್ರತಿಯೊಬ್ಬರೂ ಅಜ್ಞಾನ ತೊರೆದು ಉತ್ಕೃಷ್ಟ ಸುಜ್ಞಾನ ಪ್ರಾಪ್ತಿಯಾಗಲೆಂದು ಹೊಂಬುಜ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ತಿಳಿಸಿದರು. ಶನಿವಾರ ಶ್ರೀ ಬಿಲ್ಲೇಶ್ವರ ದೇವಸ್ಥಾನದಲ್ಲಿ ಆಶೀರ್ವಚನ ನೀಡಿ ಶಿವರಾತ್ರಿ ಮತ್ತು ಶಿವಾರಾಧನೆಯ ಮಹತ್ವ, ಭಾರತೀಯ ಸನಾತನ ಧರ್ಮದ ವೈಜ್ಞಾನಿಕ ತತ್ವಗಳ ಪ್ರತಿಪಾದನೆ ಮಾಡಿದರು. ರಾಷ್ಟ್ರ ಮತ್ತು ರಾಜ್ಯದಲ್ಲಿ ಪ್ರಕೃತಿ, ಕೃಷಿ ಆದಾಯ, ಶೈಕ್ಷಣಿಕ ಪ್ರಗತಿ ಮತ್ತು ಆರೋಗ್ಯದಾಯಕ ಸಮಾಜದ ಏಳಿಗೆಯ ಕುರಿತು ಅವಲೋಕನ ಮಾಡಿದರು. ಶ್ರೀಗಳು ಧರ್ಮ ಪ್ರಜ್ಞೆಯ ಮೂಲಕ ಶಿವಾರಾಧನೆಯಲ್ಲಿ ಪಾಲ್ಗೊಂಡು ಉತ್ತಮ ಸಂಸ್ಕಾರ-ಸಂಸ್ಕೃತಿ ಬೆಳೆಸಲು ಸಹಯೋಗ ನೀಡಬೇಕು ಎಂದು ಆಶೀರ್ವಚನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts