More

    ಶುರುವಾಗುವ ಮೊದಲೇ ‘ಪಾದರಾಯ’ನಿಗೆ ಎದುರಾದ ಸಂಕಷ್ಟ!

    ಬೆಂಗಳೂರು: ಚಕ್ರವರ್ತಿ ಚಂದ್ರಚೂಡ್​ ನಿರ್ದೇಶನದ ‘ಪಾದರಾಯ’ ಚಿತ್ರದಲ್ಲಿ ನಾಗಶೇಖರ್​ ನಾಯಕನಾಗಿ ನಟಿಸಬೇಕಿತ್ತು. ಈಗ ಈ ಚಿತ್ರ ಪ್ರಾರಂಭವಾಗುವುದೇ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಪಕ್ಷ ಆದರೂ ಅದರಲ್ಲಿ ನಾಗಶೇಖರ್​ ಇರುವುದಿಲ್ಲ. ಇನ್ನು, ಜಾಕ್​ ಮಂಜು ಅವರು ಈಗಾಗಲೇ ಚಿತ್ರತಂಡದಿಂದ ಹೊರನಡೆದಿದ್ದಾರೆ. ಚಿತ್ರ ಪ್ರಾರಂಭವಾದರೂ, ಅದು ಚಕ್ರವರ್ತಿ ಚಂದ್ರಚೂಡ್​ ವಿವೇಚನೆಗೆ ಬಿಟ್ಟ ತಂಡದೊಂದಿಗೆ ಪ್ರಾರಂಭವಾಗುವ ಸಾಧ್ಯತೆ ಇದೆ. ಇಷ್ಟಕ್ಕೂ ಆಗಿದ್ದೇನು? ಎಂಬ ಪ್ರಶ್ನೆ ಬರಬಹುದು.

    ಇದನ್ನೂ ಓದಿ: ಕೆಸಿಸಿಗೆ ಸುರೇಶ್​ ರೈನಾ ಫಿದಾ: ಟ್ರೋಫಿ ಗೆಲುವಿನ ಬಳಿಕ ಕಿಚ್ಚನಿಗೆ ಧನ್ಯವಾದ ತಿಳಿಸಿದ ರೈನಾ

    ಈ ವಿಷಯವಾಗಿ ಚಂದ್ರಚೂಡ್​ ಒಂದು ಸುಧೀರ್ಘ ಪತ್ರ ಬರೆದಿದ್ದಾರೆ. ಅದರಲ್ಲಿ ಚಿತ್ರ ಘೋಷಣೆಯಾದ ಮೇಲೆ ಏನೆಲ್ಲಾ ಆಯಿತು ಎಂಬುದನ್ನು ವಿವರಿಸಿದ್ದಾರೆ. ಅವರು ಹೇಳುವಂತೆ ಚಿತ್ರದ ಘೋಷಣೆಯಾದರೂ, ಯಾವುದೇ ಒಪ್ಪಂದಗಳಾರಲಿಲ್ಲವಂತೆ. ಅಷ್ಟೇ ಅಲ್ಲ, ಯಾರಿಗೂ ಮುಂಗಡವನ್ನೂ ನೀಡಿರಲಿಲ್ಲವಂತೆ. ಎರಡೂವರೆ ತಿಂಗಳ ಹಿಂದೆಯೇ ನಿರ್ಮಾಪಕರಾದ ಜಾಕ್ ಮಂಜು, ತಾನು ಈ ಚಿತ್ರ ನಿರ್ಮಿಸುತ್ತಿಲ್ಲ ಎಂದು ಮೌಖಿಕವಾಗಿ ಚಂದ್ರಚೂಡ್​ ಮತ್ತು ನಾಗಶೇಖರ್​ ಅವರಿಗೂ ಸ್ಪಷ್ಟಪಡಿಸಿದ್ದರಂತೆ.

    ಈ ನಡುವೆ ನಿರ್ಮಾಪಕ – ನಿರ್ದೇಶಕರಾದ ಆರ್ ಚಂದ್ರು ಚಿತ್ರ ನಿರ್ಮಿಸುವುದಾಗಿ ಮೌಖಿಕವಾಗಿ ಹೇಳಿದರೂ, ಅವರೂ ಯಾವುದೇ ಒಪ್ಪಂದ ಮಾಡಿಕೊಳ್ಳಲಿಲ್ಲವಂತೆ. ಈ ನಡುವೆ ಸಿನಿಮಾಗೆ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು,ನಾಗಶೇಖರ್ ಅವರಿಗೆ ವ್ಯಯಕ್ತಿಕವಾಗಿ 2.40 ಲಕ್ಷ ಹಣ ಕೊಟ್ಟಿರುವ ದಾಖಲೆ ಹಿಡಿದುಕೊಂಡು ಬಂದು ತಾವೇ ಈ ಚಿತ್ರದ ನಿರ್ಮಾಪಕ ಎಂದು ಸುದ್ದಿ ಹಬ್ಬಿಸಿದರಂತೆ. ಅಷ್ಟೇ ಅಲ್ಲದೇ, ನಾಗಶೇಖರ್ ಅವರು ಆಡಿಯೋ ರೈಟ್ಸ್ ಮಾರಾಟ ಮಾಡಿದ್ದಾರೆ ಎಂದು ಹೇಳಿದರಂತೆ. ‘ಈ ಕಥೆ ಮತ್ತು ಸಿನಿಮಾದ ಹಕ್ಕು ಸಂಪೂರ್ಣ ನನ್ನದೇ ಆಗಿರುತ್ತದೆ. ಯಾರಾದರೂ ಈ ವಿಷಯದಲ್ಲಿ ಯಾರಿಗೇ ಹಣಕೊಟ್ಟಿದ್ದರೂ ನಾನು ಹೊಣೆಯಲ್ಲ’ ಎಂದು ಚಕ್ರವರ್ತಿ ಚಂದ್ರಚೂಡ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಬಿಡುಗಡೆಗೆ ಮೇರಿ ರೆಡಿ: ಮನೋಜ್ ನಡಲುಮನೆ ನಿರ್ದೇಶನದ ಥ್ರಿಲ್ಲರ್ ಡ್ರಾಮಾ

    ‘ನಾನು ಮುಂದಿನ ದಿನಗಳಲ್ಲಿ ‘ಪಾದರಾಯ’ ಎಂದು ನಾಮಕರಣ ಮಾಡಿದ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ, ಅದರಲ್ಲಿ ನಾನೇ ನಟಿಸುತ್ತೇನೆ ಅಥವಾ ನನ್ನ ವಿವೇಚನೆಗೆ ತಕ್ಕಂತಹ ತಂಡದೊಂದಿಗೆ ಮಾಡಬಹುದು. ಈ ಕುರಿತಾಗಿ ಯಾರೂ ಯಾವುದೇ ಹಣಕಾಸಿನ ವ್ಯವಹಾರಗಳನ್ನು ಮಾಡಿ ತೊಂದರೆಗೀಡಾಗಬಾರದು ಮತ್ತು ಈ ಬಗೆಯ ಪ್ರಯತ್ನಗಳು ನಡೆದರೆ ನನ್ನ ಗಮನಕ್ಕೆ ತರಲು ವಿನಂತಿಸುತ್ತೇನೆ’ ಎಂದು ಚಕ್ರವರ್ತಿ ಚಂದ್ರಚೂಡ್​ ಮನವಿ ಮಾಡಿಕೊಂಡಿದ್ದಾರೆ.

    ಕೆಸಿಸಿ ಪಂದ್ಯದ ವೇಳೆ ‘ಹೊಯ್ಸಳ’ ಚಿತ್ರದ ಮಾಸ್​ ಹಾಡು ಬಿಡುಗಡೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts