More

    ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

    ಶಿರಹಟ್ಟಿ: ತಾಲೂಕಿನ ಇಟಗಿ, ಸಾಸಲವಾಡ, ಕಲ್ಲಾಗನೂರ ಗ್ರಾಮಗಳ ಸಂಪರ್ಕ ರಸ್ತೆ ಹದಗೆಟ್ಟಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ ಕುರಿತು ಸರ್ಕಾರದಿಂದ 4 ಕೋ.ರೂ. ಅನುದಾನ ಮಂಜೂರಾಗಿದ್ದು, ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ವಿುಸಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

    ಜಿಪಂ ಇಲಾಖೆ ವತಿಯಿಂದ ಗ್ರಾಮೀಣ ರಸ್ತೆ ಮತ್ತು ಸೇತುವೆ ಕಾಮಗಾರಿ ಪುನರ್ ನಿರ್ಮಾಣ ಯೋಜನೆಯಡಿ ನಿರ್ವಿುಸುವ ಶಿರಹಟ್ಟಿ ತಾಲೂಕಿನ ಇಟಗಿಯಿಂದ, ಸಾಸಲವಾಡ, ಕಲ್ಲಾಗನೂರ ಗ್ರಾಮಗಳ ಮಧ್ಯದ ಸಿ.ಸಿ. ರಸ್ತೆ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಮಂಜುನಾಥ ಶಂಕಿನದಾಸರ, ಶಾಂತಪ್ಪ ಬಳ್ಳಾರಿ, ವಕೀಲ ಎಸ್.ಎಸ್. ಪಾಟೀಲ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಗ್ರಾಪಂ ಸದಸ್ಯೆ ಪ್ರೇಮಾ ಪಾಟೀಲ, ಶಿವಕುಮಾರ ಕೆಂಗೊಂಡ, ಪ್ರಕಾಶ ಬಳ್ಳಾರಿ, ಶಂಕರಗೌಡ ಪಾಟೀಲ, ಸುರೇಂದ್ರಸ್ವಾಮಿ ಕುಲಕರ್ಣಿ, ಕಲ್ಲಪ್ಪ ರಗಟಿ, ಪ್ರಭಯ್ಯ ನಂದಿಬೇವೂರಮಠ, ನಾಗರಾಜ ಹಲಗಿ, ಮಹೇಶ ಬಂಡಿ, ತೇಜನಗೌಡ ಪಾಟೀಲ, ಶರಣಪ್ಪ ಹಾಲಗಿ, ಗುತ್ತಿಗೆದಾರ ಬಿ.ವಿ. ಬಿಂಗಿ, ಜಿಪಂ ಎಎಇ ಶ್ರೀಧರ ತಳವಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts