More

    ಮುದ್ರಣ ಕೆಲಸಗಾರರಿಗೆ ನೆರವು ನೀಡಿ

    ಸವದತ್ತಿ: ಲಾಕ್‌ಡೌನ್ ಹಾಗೂ ಕೋವಿಡ್-19ನಿಂದ ಸಂಕಷ್ಟದಲ್ಲಿರುವ ಸಣ್ಣ ಮತ್ತು ಅತೀ ಸಣ್ಣ ಮುದ್ರಣ ಕೆಲಸಗಾರರಿಗೆ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಬೆಳಗಾವಿ ಮುದ್ರಣ ಮಾಲೀಕರ ಸಂಘದ ತಾಲೂಕು ಘಟಕದಿಂದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

    ಪ್ರತಿ ವರ್ಷ ಮಾರ್ಚ್‌ನಿಂದ ಮೇ ತಿಂಗಳಲ್ಲಿ ನಡೆಯುತ್ತಿದ್ದ ಮದುವೆ, ಶುಭ ಸಮಾರಂಭ, ಸರ್ಕಾರಿ, ಅರೆ ಸರ್ಕಾರಿ ಕಾರ್ಯಕ್ರಮಗಳಿಂದ ಕೊಂಚ ಆದಾಯ ಪಡೆದು ಜೀವನ ನಡೆಸುತ್ತಿದ್ದೆವು. ಆದರೆ, ಲಾಕ್‌ಡೌನ್‌ನಿಂದಾಗಿ ಈ ವರ್ಷ ಎಲ್ಲ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಮುದ್ರಣ ಕಾರ್ಯ ನಂಬಿಕೊಂಡಿರುವ ಅನೇಕ ಕುಟುಂಬಗಳು ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಮುದ್ರಣಕಾರರಿಗೆ ಅಗತ್ಯ ನೆರವು ನೀಡಬೇಕು ಎಂದು ಪದಾಧಿಕಾರಿಗಳು ಮನವಿ ಮೂಲಕ ಕೋರಿದರು.

    ಬಿ.ಎಂ.ಶಿರಸಂಗಿ, ನೆಹರು ಕರೀಕಟ್ಟಿ, ಬಸಯ್ಯ ಗುಡ್ಡದಮಠ, ಈರಣ್ಣ ಗದಗ, ಮಲ್ಲೇಶ ರಾಜನಾಳ, ಬಸವರಾಜ ತುಳಜಣ್ಣವರ ಈರಣ್ಣ ಪತ್ತಾರ, ಯಲ್ಲಪ್ಪ ಪೂಜಾರ, ಸಂಗಮೇಶ ಹೊಳಿಮಠ ಸೇರಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts