ಮಧ್ಯಪ್ರದೇಶ: ಇಂದು ಭಾರತೀಯ ಸೇನೆಗೆ ಬಹಳ ವಿಶೇಷವಾದ ದಿನವಾಗಿದ್ದು, 76ನೇ ಸೇನಾ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಲಕ್ನೋದಲ್ಲಿ ಕಾರ್ಯಕ್ರಮ ಆಯೋಜಿಸಲಿದೆ. ದೆಹಲಿಯ ಹೊರಗೆ ಎರಡನೇ ಬಾರಿಗೆ ಸೇನಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಈ ಸಮಯದಲ್ಲಿ, ಸೂರ್ಯ ಕ್ರೀಡಾ ಸಂಕೀರ್ಣದಲ್ಲಿ ಪರೇಡ್ ನಂತರ ಶೌರ್ಯ ಸಂಧ್ಯಾವನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ವಿವಿಧ ರೀತಿಯ ಸಮರ ಕಲೆಗಳನ್ನು ಒಳಗೊಂಡಿರುತ್ತದೆ. ಸುಖೋಯ್ ಮತ್ತು ಕಿರಣ್ ವಿಮಾನಗಳ ಫ್ಲೈಪಾಸ್ಟ್ ಮತ್ತು ಹಲವಾರು ಮಿಲಿಟರಿ ಪ್ರದರ್ಶನಗಳಿರಲಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತೀಯ ಸೇನೆಯ ಸೈನಿಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ದಿನಕ್ಕೆ ಐತಿಹಾಸಿಕ ಮಹತ್ವವಿದೆ.
PHOTO | President Droupadi Murmu extends wishes to Indian Army on the occasion of 76th Army Day. pic.twitter.com/BJR1WKzfrV
— Press Trust of India (@PTI_News) January 15, 2024
ಈ ದಿನದ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ, ಪ್ರತಿ ವರ್ಷ ಸೇನಾ ದಿನವನ್ನು ಆಚರಿಸಲಾಗುತ್ತದೆ. 1949 ರಲ್ಲಿ ಈ ದಿನದಂದು, ಫೀಲ್ಡ್ ಮಾರ್ಷಲ್ ಕೆಎಂ ಕಾರಿಯಪ್ಪ ಅವರು ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಕಮಾಂಡ್ ಅನ್ನು ಪಡೆದರು. ಫ್ರಾನ್ಸಿಸ್ ಬುಚರ್ ಭಾರತದ ಕೊನೆಯ ಬ್ರಿಟಿಷ್ ಸೇನಾ ಮುಖ್ಯಸ್ಥರಾಗಿದ್ದರು. ಕಾರಿಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್-ಇನ್-ಚೀಫ್.
ಶುಭ ಹಾರೈಸಿದ ಸೇನಾ ಮುಖ್ಯಸ್ಥರು
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಸೋಮವಾರ 76 ನೇ ಸೇನಾ ದಿನದ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದರು. ಸೈನಿಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮನೋಜ್ ಪಾಂಡೆ ಅವರು ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸಿದರು.
“2024 ರ ಸೇನಾ ದಿನದ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದ ಮನೋಜ್ ಪಾಂಡೆ, ರಾಷ್ಟ್ರ ಮತ್ತು ಸೇನೆಯ ಸೇವೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ನಮ್ಮ ಒಡನಾಡಿಗಳನ್ನು ನಾವು ಪ್ರಾಮಾಣಿಕವಾಗಿ ಸ್ಮರಿಸುತ್ತೇವೆ ಮತ್ತು ಗೌರವ ಸಲ್ಲಿಸುತ್ತೇವೆ. ಅವರ ಅತ್ಯುನ್ನತ ತ್ಯಾಗ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ” ಎಂದರು.