More

    ಯುವಕರನ್ನು ಕ್ರಿಯಾಶೀಲ ನಾಗರಿಕರನ್ನಾಗಿ ರೂಪಿಸಿ

    ಸೋಮವಾರಪೇಟೆ: ಸಮಾಜದಲ್ಲಿ ಯುವಕರನ್ನು ಕ್ರಿಯಾಶೀಲ ನಾಗರಿಕರನ್ನಾಗಿ ರೂಪಿಸುವುದೆ ಜೇಸಿಐ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಶಾಶ್ವತ ಜನಪರ ಯೋಜನೆಗಳನ್ನು ಮಾಡುವ ಮೂಲಕ ಸಮಾಜ ಸೇವಾ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿದೆ ಎಂದು ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜೆ.ಎಫ್.ಎಸ್ ರಮೇಶ್ ದಾಡಿಗಲ್ ಹೇಳಿದರು.


    ಪಟ್ಟಣದ ಮಹಿಳಾ ಸಮಾಜದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಥಳೀಯ ಜೇಸಿಐ ಸಂಸ್ಥೆಗಳ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು. ಜೇಸಿಐ ವಿಶ್ವದ ಅತಿ ದೊಡ್ಡ ಯುವ ಸಮೂಹವನ್ನೊಳಗೊಂಡ ವ್ಯಕ್ತಿತ್ವ ವಿಕಸನ ಕ್ರಿಯಾಶೀಲ ಸಂಸ್ಥೆಯಾಗಿದೆ. ಯುವ ಜನತೆಯಲ್ಲಿ ಗುಣಾತ್ಮಕ ಬದಲಾವಣೆ ಮಾಡುವುದು, ಜೀವನಾಭಿವೃದ್ಧಿ ಅವಕಾಶಗಳನ್ನು ಒದಗಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ. ಸಂಸ್ಥೆಯು ಸದಸ್ಯರಿಗೆ ಆಕಸ್ಮಿಕ ಮರಣ ವಿಮಾ ಸೌಲಭ್ಯ ಕಲ್ಪಿಸಿದೆ ಎಂದರು.


    ಜೇಸಿಐ ಕುಶಾಲನಗರ ನಿಸರ್ಗ ಮತ್ತು ಸುಂಟಿಕೊಪ್ಪ ಘಟಕಗಳು ಭಾಗವಹಿಸಿದ್ದವು. ಸ್ಥಳೀಯ ಘಟಕಗಳಲ್ಲಿ ಮೂರು ತಿಂಗಳಲ್ಲಿ ನಡೆದ ಕಾರ್ಯಕ್ರಮಗಳ ವರದಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರಿಗೆ ನೀಡಿದರು. ನಂತರ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕಕ್ಕೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ರಾಷ್ಟ್ರೀಯ ಉಪಾಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.


    ವಲಯ 14ರ ಅಧ್ಯಕ್ಷೆ ಆಶಾ ಜೈನ್, ಜೆಎಸಿ ಅಲ್ಯೂಮಿನಿಯಂ ಕ್ಲಬ್‌ನ ವಲಯ ಅಧ್ಯಕ್ಷ ರಂಗಸ್ವಾಮಿ, ನ್ಯಾಷನಲ್ ಕೋ-ಆರ್ಡಿನೇಟರ್ ನೆಲ್ಸನ್ ಡಿಸೋಜಾ, ವಲಯ 14ರ ನಿರ್ದೇಶಕ ಪ್ರಜ್ವಲ್ ಎಸ್.ಜೈನ್, ಸೋಮವಾರಪೇಟೆ ಘಟಕ ಅಧ್ಯಕ್ಷ ಎಸ್. ಆರ್. ವಸಂತ್, ಸುಂಟಿಕೊಪ್ಪ ಘಟಕದ ಅಧ್ಯಕ್ಷ ಸಂಪತ್ ಕುಮಾರ್, ಕುಶಾಲನಗರ ಘಟಕದ ಅಧ್ಯಕ್ಷ ಜಗದೀಶ್, ಟೂರ್ ಕೋ-ಆರ್ಡಿನೇಟರ್ ಪ್ರಶಾಂತ್, ಕಾರ್ಯದರ್ಶಿ ಜಗದಾಂಬ ಗುರುಪ್ರಸಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts