More

    ಕಳಪೆ ಸ್ಯಾನಿಟೈಜರ್ ಪೂರೈಕೆ ಆರೋಪ ಪ್ರಕರಣ : ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ಕ್ರಮ ರದ್ದು

    ಬೆಂಗಳೂರು: ಸಹಜ ನ್ಯಾಯ ತತ್ವಗಳನ್ನು ಪಾಲನೆ ಮಾಡದೆ ಯಾವುದೇ ಗುತ್ತಿಗೆ ವ್ಯಕ್ತಿ ಅಥವಾ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.

    ಕೋವಿಡ್ ಸಾಂಕ್ರಾಮಿಕದ ವೇಳೆ ಕಳಪೆ ಸ್ಯಾನಿಟೈಸರ್ ಪೂರೈಕೆ ಆರೋಪದಡಿ ಬೆಂಗಳೂರು ಮೂಲದ ಸುಜಲ್ ಫಾರ್ಮಾ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ ನಿಯಮಿತದ ಕ್ರಮವನ್ನು ನ್ಯಾಯಾಲಯ ರದ್ದುಪಡಿಸಿದೆ.

    ಪ್ರಕರಣ ಸಂಬಂಧ ಸುಜಲ್ ಫಾರ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ‘ಅರ್ಜಿದಾರರು ಪೂರೈಸಿದ್ದ ಸ್ಯಾನಿಟೈಸರ್ ಇಷ್ಟು ಹೊತ್ತಿಗೆ ಒಣಗಿ ಹೋಗಿರುತ್ತದೆ. ಹೀಗಾಗಿ ಪೀಠ ಮತ್ತೆ ಪ್ರತಿವಾದಿಗೆ ನಿರ್ಧಾರ ಕೈಗೊಳ್ಳಲು ಕಳುಹಿಸುವುದಿಲ್ಲ, ಬದಲಿಗೆ ನಿಗಮದ ಕ್ರಮ ರದ್ದುಪಡಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಗುವುದು’ ಎಂದು ಹೇಳಿತು.

    ಅರ್ಜಿದಾರರಿಗೆ ಎರಡು ನೋಟಿಸ್ ನೀಡಿದ್ದರೂ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಯಾವುದೇ ಇಂಗಿತ ವ್ಯಕ್ತಪಡಿಸಿಲ್ಲ. ನಿಯಮದಂತೆ ಶೋಕಾಸ್ ನೋಟಿಸ್ ನೀಡಬೇಕು. ಅದರಲ್ಲಿ ಏಕೆ ಕಪ್ಪುಪಟ್ಟಿಗೆ ಸೇರಿಸಬಾರದು ಅಥವಾ ಸೇರಿಸಲಾಗಿದೆ ಎನ್ನುವ ಕುರಿತು ಕಾರಣಗಳಸಹಿತ ವಿವರಿಸಬೇಕು.

    ನಂತರವೇ ಅಂತಿಮ ಆದೇಶ ಹೊರಡಿಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ನಿಯಮಗಳನ್ನು ಪಾಲನೆ ಮಾಡದಿರುವುದರಿಂದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಆದೇಶ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts