ಭದ್ರಾವತಿ: ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಪರವಾಗಿ ಪಕ್ಷದ ಮುಖಂಡರು ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಮತ ಯಾಚಿಸಿದರು. ಕರಪತ್ರ ನೀಡಿ ಮತಯಾಚನೆ ನಡೆಸಿದ ಅವರು ಡಾ. ಧನಂಜಯ ಸರ್ಜಿ ಗೆಲುವಿಗೆ ಸಹಕರಿಸುವಂತೆ ವಕೀಲರಲ್ಲಿ ಮನವಿ ಮಾಡಿದರು. ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಚುನಾವಣಾ ಸಂಚಾಲಕ ಕೆ.ಎನ್.ಶ್ರೀಹರ್ಷ, ಮುಖಂಡರಾದ ಮಂಗೋಟೆ ರುದ್ರೇಶ್, ತೀರ್ಥಯ್ಯ, ವಕೀಲರಾದ ಲೋಕೇಶ್ವರ ರಾವ್, ಶ್ರೀನಿವಾಸ್, ನವರತ್ನಮಾಲಾ, ಮಂಜುನಾಥ್, ರಾಕೇಶ್, ರಾಮಲಿಂಗಯ್ಯ, ಮೈಲಾರಪ್ಪ ಇದ್ದರು.
ನ್ಯಾಯಾಲಯ ಆವರಣದಲ್ಲಿ ಮತಯಾಚನೆ
ಭದ್ರಾವತಿ ನ್ಯಾಯಾಲಯದ ಆವರಣದಲ್ಲಿ ಡಾ. ಧನಂಜಯ ಸರ್ಜಿ ಪರ ಬಿಜೆಪಿ ಮುಖಂಡರು ವಕೀಲರಲ್ಲಿ ಮತ ಯಾಚಿಸಿದರು. ಮಂಗೋಟೆ ರುದ್ರೇಶ್, ಶ್ರೀನಿವಾಸ್, ನವರತ್ನಮಾಲಾ, ಮಂಜುನಾಥ್ ಇತರರಿದ್ದರು.