More

    ದೇಶದ ಪ್ರಗತಿಗೆ ತಂತ್ರಜ್ಞರು ಬೆನ್ನೆಲುಬು

    ಹುಬ್ಬಳ್ಳಿ : ತಂತ್ರಜ್ಞರು ದೇಶದ ಆರ್ಥಿಕ ಪ್ರಗತಿಯ ಬೆನ್ನಲುಬು. ಎಲ್ಲ ವಿಭಾಗಗಳ ತಂತ್ರಜ್ಞರು ಸಮಾನ ಪ್ರಾಮುಖ್ಯತೆ ಹೊಂದಿರುತ್ತಾರೆ ಎಂದು ತಾರಿಹಾಳದ ಸರ್ಕಾರಿ ಪಾಲಿಟೆಕ್ನಿಕ್​ನ ಉಪನ್ಯಾಸಕ ವಿ.ಜಿ. ಹಿರೇಮಠ ಹೇಳಿದರು.

    ನಗರದ ಟಿಪು್ಪ ಷಹೀದ ಪಾಲಿಟೆಕ್ನಿಕ್​ನಲ್ಲಿ 2023-24 ನೇ ಸಾಲಿನ ಪ್ರಥಮ ಸೆಮಿಸ್ಟರ್​ನ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

    ವಿದ್ಯಾರ್ಥಿ ಜೀವನ ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ವಿದ್ಯಾರ್ಥಿ ಜೀವನದಲ್ಲಿ ಏನು ಬೇಕಾದರೂ ಸಾಧಿಸುವಂತಹ ವಯಸ್ಸು ಇರುತ್ತದೆ. ಇಂತಹ ಅಮೂಲ್ಯ ವಯಸ್ಸು ಮತ್ತು ಸಮಯವನ್ನು ಸಾಧನೆಗಾಗಿ ಸಧ್ಬಳಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರವೀಂದ್ರಸಿಂಗ್ ಅತ್ತೆರ ಮಾತನಾಡಿ, ಪ್ರಾರಂಭಿಕ ಹಂತದಲ್ಲಾಗುವ ಭಾಷಾ ಮಾಧ್ಯಮ ಹಾಗೂ ಇತರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಎದೆಗುಂದದೆ ಕಠಿಣ ಪರಿಶ್ರಮದಿಂದ ಮುಂದುವರೆದಲ್ಲಿ ಉತ್ತಮ ಫಲಿತಾಂಶ ಹೊಂದುವುದು ನಿಶ್ಚಿತ ಎಂದು ಹೇಳಿದರು.

    ಧಾರವಾಡದ ಕೆಎಚ್​ಕೆ ಪಾಲಿಟೆಕ್ನಿಕ್ ವಿಜ್ಞಾನ ವಿಭಾಗದ ಮುಖ್ಯಸ್ಥೆ ಅರ್ಚನಾ ಕೆ. ಅತಿಥಿಯಾಗಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರಾದ ಎಂ.ಎ. ಬಾಗಲಕೋಟ, ಎಂ.ಎಸ್. ಸೋಮನಕಟ್ಟಿ, ಮಸೂದ ಅಹ್ಮದ ಜುನೇದಿ, ಎ.ಎಸ್.ಎ. ಮುಲ್ಲಾ, ಎಂ.ಎಚ್. ಧಾರವಾಡ, ಬಾಳೇಶ ಹೆಗ್ಗಣ್ಣವರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

    ತಾಜಮುಲ್ಲಾ ಹುಸೇನ ಸ್ವಾಗತಿಸಿದರು. ಕಿರಣಕುಮಾರ ಮಂಟೂರ ನಿರೂಪಿಸಿದರು. ಬಾಳೇಶ ಹೆಗ್ಗಣ್ಣವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts