ಬಾಗಲಕೋಟೆ: ಆಂಧ್ರ ಪ್ರದೇಶದ ಚಿತ್ತೂರಿನ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೆಂಗಳೂರಿನ ಶಿವಾಜಿನಗರ ಠಾಣೆಯ ಪೊಲೀಸ್ ಕಾನ್ಸಟೇಬಲ್ ಅನಿಲ್ಲ ಮುಳಿಕ್ (26) ಮೂಲತಃ ಬಾಗಲಕೋಟೆಯವರಾಗಿದ್ದು, ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಅನಿಲ್ ಅವರು ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದವರು. ಕಳೆದ ಒಂದು ವಾರದ ಹಿಂದಷ್ಟೆ ಗ್ರಾಮಕ್ಕೆ ಬಂದಿದ್ದರು. ಕರ್ತವ್ಯದ ನಿಮಿತ್ತ ವಿಜಯಪುರಕ್ಕೆ ಬಂದಿದ್ದ ಅನೀಲ್, ಹತ್ತಿರದಲ್ಲೇ ಇದ್ದ ಚಿಕ್ಕಲಕಿ ಗ್ರಾಮಕ್ಕೆ ಬಂದು ತಂದೆ-ತಾಯಿ ಹಾಗೂ ಸಹೋದರನನ್ನು ಮಾತಾಡಿಸಿ ಹೋಗಿದ್ದರು.
2019ರ ಏಪ್ರಿಲ್ ತಿಂಗಳಲ್ಲಿ ಅನಿಲ್, ಪೊಲೀಸ್ ನೌಕರಿ ಸೇರಿದ್ದ. ಮೊದಲ ಪೋಸ್ಟಿಂಗ್ ಶಿವಾಜಿನಗರ ಠಾಣೆಗೆ ಹಾಜರಾಗಿದ್ದ. ಬಡಕುಟುಂಬದ ಅನಿಲ್, ಸರ್ಕಾರಿ ನೌಕರಿ ಸೇರಿದ್ದರಿಂದ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, ಈಗ ಅಪಘಾತದಲ್ಲಿ ಮೃತಪಟ್ಟಿರುವುದು ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಅನಿಲ್ ಮನೆಯಲ್ಲಿ ತಾಯಿ ಶಾಂತಾಬಾಯಿ ರೋಧನ ಮುಗಿಲು ಮುಟ್ಟಿದೆ. ತಂದೆ ದಾಜೀಬಾ ದಿಕ್ಕು ತೋಚದೇ ಕುಳಿತಿದ್ದಾರೆ. ಅನಿಲ್ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಗ್ರಾಮದ ನೂರಾರು ಜನರು ಅನಿಲ್ ಮನೆ ಕಡೆಗೆ ಸೇರಿದ್ದು, ಕಂಬನಿಗರಿಯುತ್ತಿದ್ದಾರೆ. ಅಲ್ಲದೆ, ಅನಿಲ್ ಮನೆಗೆ ಬೆಳಗ್ಗೆ ಸಾವಳಗಿ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)
ಶಿವಾಜಿ ನಗರ ಪೊಲೀಸ್ ಸಿಬ್ಬಂದಿ ದುರಂತ ಸಾವು: ಅಪಘಾತದ ಭೀಕರತೆ ಬಿಚ್ಚಿಟ್ಟ ಆಂಧ್ರದ ಪೊಲೀಸ್ ಅಧಿಕಾರಿ
ರೈಲ್ವೆ ಕ್ರಾಸಿಂಗ್ ವೇಳೆ ಎಕ್ಸ್ಪ್ರೆಸ್ ರೈಲು ಡಿಕ್ಕಿ: ತಾಯಿಯ ಕಣ್ಣೆದುರಲ್ಲೇ ಮಗಳ ಸಾವು, ಭಯಾನಕ ವಿಡಿಯೋ ಸೆರೆ
ಬಿಜೆಪಿ ನಾಯಕನ ಫಾರ್ಮ್ಹೌಸ್ ಈಗ ವೇಶ್ಯಾಗೃಹ! 73 ಮಂದಿ ಅರೆಸ್ಟ್- ಆರು ಮಂದಿ ಬಾಲಕಿಯರ ರಕ್ಷಣೆ