ನವದೆಹಲಿ : ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಡಿಯೋ ಶೇರ್ ಮಾಡಿದ ಟ್ವೀಟ್ಗಳ ಬಗ್ಗೆ ಟ್ವಿಟರ್ ಕಂಪೆನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾದ ಬೆನ್ನಲ್ಲೇ, ಭಾರತದ ಟ್ವಿಟರ್ ಮುಖ್ಯಸ್ಥರಿಗೆ, ಉತ್ತರ ಪ್ರದೇಶ ಪೊಲೀಸರು ನೋಟೀಸು ಜಾರಿ ಮಾಡಿದ್ದಾರೆ. ನಿನ್ನೆ (ಜೂನ್ 17) ಕಳುಹಿಸಿರುವ ಈ ನೋಟೀಸ್ನಲ್ಲಿ, ಟ್ವಿಟರ್ ಇಂಡಿಯ ಎಂಡಿ ಮನೀಶ್ ಮಾಹೇಶ್ವರಿ ಅವರಿಗೆ 7 ದಿನಗಳೊಳಗೆ ಪೊಲೀಸ್ ಠಾಣೆಗೆ ಹಾಜರಾಗಿ, ಹೇಳಿಕೆ ನೀಡುವಂತೆ ಸೂಚಿಸಲಾಗಿದೆ.
“ಕೆಲವು ಜನರು ತಮ್ಮ ಟ್ವಿಟರ್ ಹ್ಯಾಂಡಲ್ಅನ್ನು ಬಳಸಿಕೊಂಡು ಸಮಾಜದಲ್ಲಿ ವೈಷಮ್ಯ ಮೂಡಿಸುವ ಮತ್ತು ವಿವಿಧ ಸಮುದಾಯಗಳ ನಡುವಿನ ಸೌಹಾರ್ದತೆ ಕೆಡಿಸುವಂತಹ ಸಂದೇಶಗಳನ್ನು ಕಳುಹಿಸಿದ್ದಾರೆ. ಅದನ್ನು ತಡೆಯಲು ಟ್ವಿಟರ್ ಕಂಪೆನಿ ಯಾವುದೇ ಕ್ರಮ ಕೈಗೊಳ್ಳದೆ, ಸಮಾಜವಿರೋಧಿ ಸಂದೇಶಗಳು ವೈರಲ್ ಆಗಲು ಅವಕಾಶ ನೀಡಿದೆ. ಈ ಬಗ್ಗೆ ದಾಖಲಾಗಿರುವ ಪ್ರಕರಣದ ವಿಚಾರಣೆಗಾಗಿ, ನಿಮ್ಮ ಹೇಳಿಕೆ ಅಗತ್ಯವಾಗಿರುತ್ತದೆ” ಎಂದು ಘಾಜಿಯಾಬಾದ್ನ ಲೋನಿ ಬಾರ್ಡರ್ ಠಾಣೆಯ ಪೊಲೀಸರು ನೋಟೀಸಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನ ಹಂಗಾಮಿ ಮೇಯರ್ ಅನ್ವರ್ಗೆ ಅದೃಷ್ಟದ ಮೇಲೋಂದು ಅದೃಷ್ಟ!
ಜೂನ್ 5 ರಂದು ಸೂಫಿ ಅಬ್ದುಲ್ ಸಮದ್ ಎಂಬ ವ್ಯಕ್ತಿಯ ಮೇಲೆ ಘಾಜಿಯಾಬಾದ್ನಲ್ಲಿ ಆರು ಜನರು ಹಲ್ಲೆ ಮಾಡಿದ ವಿಡಿಯೋ ಟ್ವಿಟರ್ನಲ್ಲಿ ಪೋಸ್ಟ್ ಆಗಿತ್ತು. ಈ ಬಗ್ಗೆ ಟ್ವೀಟ್, ರೀಟ್ವೀಟ್ಗಳು ನಡೆದ ಹಿನ್ನೆಲೆಯಲ್ಲಿ ಟ್ವಿಟರ್ ವಿರುದ್ಧ ಈಗಾಗಲೇ ಎಫ್.ಐ.ಆರ್. ದಾಖಲಾಗಿದೆ. ಈ ಕೇಸ್ನಲ್ಲಿ ಮೂವರು ಪತ್ರಕರ್ತರು ಮತ್ತು ಮೂವರು ಕಾಂಗ್ರೆಸ್ ನಾಯಕರನ್ನು ಕೂಡ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. (ಏಜೆನ್ಸೀಸ್)
ಕರೊನಾ ಕ್ವಾರಂಟೈನ್ ಉಲ್ಲಂಘಿಸಿದ ಭಾರತೀಯನಿಗೆ ಬಹ್ರೈನ್ನಲ್ಲಿ 3 ವರ್ಷ ಜೈಲು ಶಿಕ್ಷೆ! ಸಹಾಯಕ್ಕೆ ಮೊರೆ