ಮಹಾರಾಷ್ಟ್ರ: ನಾಸಿಕ್ ಜಿಲ್ಲೆಯಲ್ಲಿರುವ ಕಾಲರಾಮ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಈ ವೇಳೆ ಅವರು ದೇವಸ್ಥಾನದ ಆವರಣವನ್ನು ಒರೆಸುತ್ತಿರುವುದು ಕಂಡುಬಂದಿತು. ಮೋದಿ ತಮ್ಮ ಕಾರ್ಯಕ್ರಮವೊಂದರಲ್ಲಿ ಇದನ್ನು ಪ್ರಸ್ತಾಪಿಸಿ, ದೇಶಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ದೇಶವಾಸಿಗಳಿಗೆ ಮನವಿ ಮಾಡಿದರು.
ಜನವರಿ 22 ರೊಳಗೆ ನಾವೆಲ್ಲರೂ ದೇಶದ ಯಾತ್ರಾ ಸ್ಥಳಗಳು ಮತ್ತು ದೇವಾಲಯಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಸ್ವಚ್ಛತಾ ಅಭಿಯಾನವನ್ನು ನಡೆಸಬೇಕು ಎಂದು ನಾನು ಕರೆ ನೀಡಿದ್ದೇನೆ ಎಂದು ಮೋದಿ ಹೇಳಿದರು. “ಇಂದು ನನಗೆ ಕಾಲರಾಮ ದೇವಸ್ಥಾನಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಭಾಗ್ಯ ನನಗೆ ಸಿಕ್ಕಿದೆ.
ದೇಶದ ಎಲ್ಲಾ ದೇವಾಲಯಗಳು ಮತ್ತು ಯಾತ್ರಾಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ಮತ್ತು ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾ ಶುಭ ಸಂದರ್ಭದಲ್ಲಿ ಶ್ರಮದಾನ ಮಾಡಲು ದೇಶವಾಸಿಗಳಿಗೆ ನನ್ನ ವಿನಂತಿಯನ್ನು ಪುನರುಚ್ಚರಿಸಲು ಬಯಸುತ್ತೇನೆ” ಎಂದು ಮೋದಿ ಹೇಳಿದರು.
ಮೋದಿಯವರು ಶ್ರೀ ಕಾಲರಾಮ ದೇವಸ್ಥಾನವನ್ನು ಒರೆಸುವ ವಿಡಿಯೋ ಔಟ್ ಆಗಿದ್ದು, ಇದರಲ್ಲಿ ಅವರೇ ದೇವಾಲಯದ ಒಂದು ಮೂಲೆಯನ್ನು ಬಕೆಟ್ಗೆ ನೀರು ತುಂಬಿಸಿ ಸ್ವಚ್ಛಗೊಳಿಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ನಾಸಿಕ್ನ ಶ್ರೀ ಕಾಲರಾಮ ದೇವಾಲಯಕ್ಕೆ ಪ್ರಧಾನಿ ಭೇಟಿ ನೀಡಿದರು. ದೈವಿಕ ಪರಿಸರದಲ್ಲಿ ಇರುವುದು ಅತ್ಯಂತ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ರಾಮಮಂದಿರದಲ್ಲಿ ಉದ್ಘಾಟನೆಗೆ 11 ದಿನಗಳ ಮೊದಲು ಪ್ರಧಾನಿ ಮೋದಿ ವಿಶೇಷ ಆಚರಣೆಯನ್ನು ಪ್ರಾರಂಭಿಸಿದ್ದಾರೆ. ಈ ಸಮಯದಲ್ಲಿ ಅವರು ಉಪವಾಸವಿರುತ್ತಾರೆ.
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಇಬ್ಬರು ಶಂಕರಾಚಾರ್ಯರ ಬೆಂಬಲ: ವಿಎಚ್ಪಿ