ಉತ್ತರಾಖಂಡ ಪಂಚಚುಲಿ ಹಿಮ ಪರ್ವತ ಶ್ರೇಣಿಯಲ್ಲಿರುವ ಟುಲಿಪ್ ಉದ್ಯಾನದ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ವೈರಲ್ ಆಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದ್ಯಾನವನದ ಮನಮೋಹಕ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಚಿತ್ರ ಟ್ವಿಟರ್ನಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ. ಕೆಲವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ ಲಂಡನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿಯ ಟೆಕ್ಕಿ; 50ದಿನಗಳ ಬಳಿಕ ಊರಿಗೆ ಬರುತ್ತಿದೆ ಮೃತದೇಹ
ಟುಲಿಪ್ ಉದ್ಯಾನ ಪಂಚಚುಲಿ ಶ್ರೇಣಿಗಳ ಹಿಮದ ಶಿಖರಗಳಿಂದ ಆವೃತ್ತವಾಗಿದೆ. ಟುಲಿಪ್ ಉದ್ಯಾನವನ ನನ್ನ ಕನಸಿನ ಯೋಜನೆ. ಮನ್ಸಿಯಾರಿ ಗ್ರಾಮದಲ್ಲಿ ನಿರ್ಮಾಣವಾಗಿರುವ ವಿಶ್ವದ ದೊಡ್ಡ ಟುಲಿಪ್ ಉದ್ಯಾನವನವಾಗಿದೆ. ಈ ಚಿತ್ರವನ್ನು ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ಈ ಉದ್ಯಾನವನ ಪ್ರವಾಸೋದ್ಯಮಕ್ಕೆ ನೆರವಾಗಲಿದೆ ಎಂದು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ಸಿಎಂ ಹಂಚಿಕೊಂಡಿರುವ ಪೋಟೋಗೆ ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹಾಲೆಂಡ್ನಲ್ಲಿರುವ ಟುಲಿಪ್ ಉದ್ಯಾನವನ ನೋಡಿದ್ದೇನೆ. ಆಗಲೇ ಭಾರತದಲ್ಲಿ ಇದನ್ನು ಏಕೆ ಮಾಡಬಾರದು ಎಂದು ಯೋಚಿಸಿದ್ದೆ. ನೀವು ಉದ್ಯಾನವನ ನಿರ್ಮಾಣ ಮಾಡಿದ್ದೀರಿ. ಲಾಕ್ಡೌನ್ ಮುಗಿದ ನಂತರ ಉದ್ಯಾನವನಕ್ಕೆ ಭೇಟಿ ನೀಡುತ್ತೇನೆ ಎಂದು ನೆಟ್ಟಿಗೊರಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ರೀತಿ ನೂರಾರು ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)