More

    ಶಿವಗಂಗಾದಲ್ಲಿ ಪೋಟೊಗ್ರಾಫರ್ ಕೊಲೆ,ಅಕ್ಕ,ಭಾವನ ಸೆರೆ

    ಶಿವಗಂಗಾದಲ್ಲಿ ಪೋಟೊಗ್ರಾಫರ್ ಕೊಲೆ,ಅಕ್ಕ,ಭಾವನ ಸೆರೆ

    ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಶಿವಗಂಗಾ ಗ್ರಾಮದ ಛಾಯಾಗ್ರಾಹಕ ಬಸವರಾಜನನ್ನು ಹತ್ಯೆಗೈದಿರುವ ಆರೋಪದಡಿ ಆತನ ಭಾವ ಹಾಗೂ ಅಕ್ಕನನ್ನು ಪೊಲೀಸರು ಬಂಧಿಸಿದ್ದಾರೆ.

    ಬಸವರಾಜನನ್ನು(35)ಜ.14ರಂದು ಬೆಳಗಿನ ಜಾವ ಆತ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಆತನ ಅಕ್ಕ ರಾಧಮ್ಮ ನೀಡಿದ್ದ ದೂರ ನ್ನು ಚಿತ್ರಹಳ್ಳಿಗೇಟ್ ಪೊಲೀಸರು ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದಾಗ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಬಸವ ರಾಜನನ್ನು ಹತ್ಯೆಗೈದ ಆರೋಪದಡಿ ಆತನ ಭಾವ ಹಿರಿಯೂರು ತಾಲೂಕು ಪಿಲಾಲಿ ಗ್ರಾಮದ ತಿಮ್ಮರಾಜು ಹಾಗೂ ರಾಧಮ್ಮಳನ್ನು ಸೋಮವಾರ ಸಂಜೆ ಶಿವಗಂಗಾದಲ್ಲಿ ಬಂಧಿಸಲಾಗಿದೆ ಎಂದು ಎಸ್‌ಪಿ ಕೆ.ಪರಶುರಾಮ್ ತಿಳಿಸಿದ್ದಾರೆ.

    ಕೋವಿಡ್ ಮೊದಲ ಲಾಕ್‌ಡೌನ್ ಸಮಯದಲ್ಲಿ ಹೆಂಡತಿ ದಿವ್ಯಾ ಹೆರಿಗೆಗೆಂದು ತವರಿಗೆ ಹೋಗಿದ್ದಾಗ,ತನ್ನ ಅಕ್ಕ ರಾಧಮ್ಮ ಮತ್ತು ಆಕೆಯ ಮಕ್ಕಳನ್ನು ಶಿವಗಂಗಾಕ್ಕೆ ಕರೆಸಿಕೊಂಡಿದ್ದ ಬಸವರಾಜ, ತನ್ನ ಸ್ಟುಡಿಯೊದಲ್ಲಿ ಅವರಿಗೆ ವಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದ. ಅಂದಿ ನಿಂದ ರಾಧಮ್ಮ ಮತ್ತು ಮಕ್ಕಳು ಶಿವಗಂಗಾದಲ್ಲಿದ್ದರು. ಭಾವ ತಿಮ್ಮರಾಜುವಿಗೆ ಸಾಲವನ್ನೂ ಕೊಟ್ಟಿದ್ದ.

    ತಿಮ್ಮರಾಜು,ಹೆಂಡತಿ ಮಕ್ಕಳನ್ನು ಮರಳಿ ಮನೆಗೆ ಕಳಿಸು ಎಂದು ಬಸವರಾಜನಿಗೆ ಕೇಳಿದಾಗ, 2 ವರ್ಷ ನಿನ್ನ ಹೆಂಡತಿ,ಮಕ್ಕಳನ್ನು ಸಾಕಿ ದ್ದೇನೆ. ಅದರ ಖರ್ಚು ಹಾಗೂ ಸಾಲ,ಸಾಲದ ಬಡ್ಡಿ ಸೇರಿ 5 ಲಕ್ಷ ರೂ.ಕೊಡದಿದ್ದರೆ,ನಿನ್ನ ಹೆಂಡತಿ ಮಕ್ಕಳನ್ನು ಕಳುಹಿಸುವುದಿಲ್ಲ.ಊರಿಗೆ ಬಂದರೆ ಸಾಯಿಸುತ್ತೇನೆಂದು ತಿಮ್ಮರಾಜುವಿಗೆ ಬಸವರಾಜ ಬೆದರಿಸಿದ್ದ.

    ಈತ ಬದುಕಿದ್ದರೆ ನಮಗೆ ನೆಮ್ಮದಿ ಇಲ್ಲವೆಂದು ಗಂಡ,ಹೆಂಡತಿ ಆತನ ಕೊಲೆಗೆ ಸಂಚು ರೂಪಿಸಿದ್ದರು. ನಿದ್ರೆಯಲ್ಲಿದ್ದ ಬಸವರಾಜನನ್ನು ತಿಮ್ಮರಾಜು ಮಚ್ಚಿನಿಂದ ಹಲವು ಬಾರಿ ಕಡಿದು ಕೊಲೆ ಮಾಡಿದ್ದಾನೆ. ಪತಿ ಕೃತ್ಯಕ್ಕೆ ಸಾಥ್ ನೀಡಿದ್ದ ರಾಧಮ್ಮ,ರಕ್ತದ ಕಲೆಗಳಿದ್ದ ತಿಮ್ಮರಾಜು ಬಟ್ಟೆ ಹಾಗೂ ಹಾಗೂ ಬಸವರಾಜನ ಮೊಬೈಲ್ ಪೋನ್‌ನನ್ನು ಸುಟ್ಟು ಹಾಕಿದ್ದಾಳೆ. ಆರೋಪಿತರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಎಸ್‌ಪಿ ತಿಳಿಸಿದ್ದಾರೆ.

    ಪ್ರಕರಣವನ್ನ ತ್ವರಿತವಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ,ಹೊಳಲ್ಕೆರೆ ಸಿಪಿಐ ಕೆ.ಎನ್.ರವೀಶ್,ಚಿತ್ರಹಳ್ಳಿಗೇಟ್ ಪಿಎಸ್‌ಐ ಆಶಾ, ಸಿಬ್ಬಂದಿ ಜಿ.ನಾಗರಾಜು, ರುದ್ರೇಶ, ಸನಾವುಲ್ಲಾ,ಆರ್.ಡಿ.ರಮೇಶ ಎನ್.ತಿಮ್ಮಣ್ಣ,ಕೆ.ಜೆ.ಲೊಕೇಶ್,ವೀರೇಶ,ತಿಮ್ಮೇಶ,ಶಿವಣ್ಣ,ಬಿ.ಜಿ. ರವಿ ಕುಮಾರ,ಗಿರೀಶ,ಸಂತೋಷ,ಮಮತಾ,ಪುಷ್ಪಾ,ಸವಿತಾ ಅವರ ಕಾರ‌್ಯವನ್ನು ಎಸ್‌ಪಿ ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts