ಬೆಂಗಳೂರು: ಇಂದು ವಿಜಯವಾಣಿ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರೊಂದಿಗೆ ಫೋನ್ ಇನ್ ಕಾರ್ಯಕ್ರಮ ನಡೆಯಿತು.
ಸಾರ್ವಜನಿಕರು ಅನೇಕರು ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚು ಮಾದಕ ವಸ್ತುಗಳ ಸೇವನೆಗೆ ಅಡಿಕ್ಟ್ ಆಗುತ್ತಿರುವ ಬಗ್ಗೆ, ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟು ವಿಧಿಸಲಾಗುವ ದಂಡದ ವಿಚಾರವಾಗಿಯೇ ಹೆಚ್ಚಿನವರ ಪ್ರಶ್ನೆ ಇತ್ತು.
ನಾಗರಿಕರ ಸಮಸ್ಯೆಗಳಿಗೆ ಖಡಕ್ ಅಧಿಕಾರಿ ಭಾಸ್ಕರ್ ರಾವ್ ಉತ್ತರಿಸಿದ್ದಾರೆ. ಹಾಗೇ ರಾಜ್ಯದಲ್ಲಿ ಇತ್ತೀಚೆಗೆ ಉಗ್ರರ ಹಾವಳಿ ಹೆಚ್ಚಾದ ಹಾಗೂ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರ ಸುರಕ್ಷತೆ, ಹೆಚ್ಚಾಗುತ್ತಿರುವ ಕಳ್ಳತನ ಪ್ರವೃತ್ತಿಯ ಬಗ್ಗೆಯೂ ಅವರೊಂದಿಗೆ ಚರ್ಚೆ ನಡೆಸಲಾಯಿತು.
ಭಾಸ್ಕರ್ ರಾವ್ ಅವರ ಫೋನ್ ಇನ್ ಕಾರ್ಯಕ್ರಮದಲ್ಲಿ ಚರ್ಚೆಗೆ ಬಂದ ಎಲ್ಲ ವಿಷಯಗಳ ಸವಿವರ ವರದಿ ನಾಳಿನ (18-01-2020) ‘ವಿಜಯವಾಣಿ’ ಯಲ್ಲಿ ಪ್ರಕಟವಾಗಲಿದೆ. ತಪ್ಪದೆ ಓದಿ.