More

    ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರೊಂದಿಗೆ ಫೋನ್​ ಇನ್​ ಕಾರ್ಯಕ್ರಮ; ಸಮಗ್ರ ವರದಿ ನಾಳಿನ ವಿಜಯವಾಣಿಯಲ್ಲಿ

    ಬೆಂಗಳೂರು: ಇಂದು ವಿಜಯವಾಣಿ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಅವರೊಂದಿಗೆ ಫೋನ್​ ಇನ್​ ಕಾರ್ಯಕ್ರಮ ನಡೆಯಿತು.

    ಸಾರ್ವಜನಿಕರು ಅನೇಕರು ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚು ಮಾದಕ ವಸ್ತುಗಳ ಸೇವನೆಗೆ ಅಡಿಕ್ಟ್ ಆಗುತ್ತಿರುವ ಬಗ್ಗೆ, ಟ್ರಾಫಿಕ್​ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟು ವಿಧಿಸಲಾಗುವ ದಂಡದ ವಿಚಾರವಾಗಿಯೇ ಹೆಚ್ಚಿನವರ ಪ್ರಶ್ನೆ ಇತ್ತು.

    ನಾಗರಿಕರ ಸಮಸ್ಯೆಗಳಿಗೆ ಖಡಕ್ ಅಧಿಕಾರಿ ಭಾಸ್ಕರ್​ ರಾವ್​ ಉತ್ತರಿಸಿದ್ದಾರೆ. ಹಾಗೇ ರಾಜ್ಯದಲ್ಲಿ ಇತ್ತೀಚೆಗೆ ಉಗ್ರರ ಹಾವಳಿ ಹೆಚ್ಚಾದ ಹಾಗೂ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರ ಸುರಕ್ಷತೆ, ಹೆಚ್ಚಾಗುತ್ತಿರುವ ಕಳ್ಳತನ ಪ್ರವೃತ್ತಿಯ ಬಗ್ಗೆಯೂ ಅವರೊಂದಿಗೆ ಚರ್ಚೆ ನಡೆಸಲಾಯಿತು.

    ಭಾಸ್ಕರ್​ ರಾವ್​ ಅವರ ಫೋನ್​ ಇನ್​ ಕಾರ್ಯಕ್ರಮದಲ್ಲಿ ಚರ್ಚೆಗೆ ಬಂದ ಎಲ್ಲ ವಿಷಯಗಳ ಸವಿವರ ವರದಿ ನಾಳಿನ (18-01-2020) ‘ವಿಜಯವಾಣಿ’ ಯಲ್ಲಿ ಪ್ರಕಟವಾಗಲಿದೆ. ತಪ್ಪದೆ ಓದಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts