More

    ಹೆಬ್ಬಾಳದ ಬಳಿ ವಾಲಿದ ಪಿಜಿ ಕಟ್ಟಡ; ಬಿಬಿಎಂಪಿ ಜಂಟಿ ಆಯುಕ್ತ, ನಗರ ಪೊಲೀಸ್ ಆಯುಕ್ತರಿಂದ ಸ್ಥಳ ಪರಿಶೀಲನೆ

    ಬೆಂಗಳೂರು: ಹೆಬ್ಬಾಳದ ಕೆಂಪಾಪುರದಲ್ಲಿ ನಾಲ್ಕಂತಸ್ತಿನ ಕಟ್ಟಡವೊಂದು ವಾಲಿದ್ದು, ಬಿಬಿಎಂಪಿ ಜಂಟಿ ಆಯುಕ್ತ ಅಶೋಕ ಹಾಗೂ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇದೊಂದು ಪಿಜಿ ಕಟ್ಟಡವಾಗಿದ್ದು ಇಂದು ಬೆಳಗ್ಗೆ 8.30ರ ವೇಳೆಗೆ ವಾಲಿಕೊಂಡಿದೆ. ಅಲ್ಲಿನ ಜನರ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಕಮಿಷನರ್​ ಭಾಸ್ಕರ್ ರಾವ್​ ತಿಳಿಸಿದ್ದಾರೆ.

    ಈ ಕಟ್ಟಡದ ಹಿಂಭಾಗದಲ್ಲಿ ಮನೆ ಕಟ್ಟಲು ಎಂಟು ಅಡಿ ಆಳದ ಹಳ್ಳ ತೆಗೆದಿರುವುದೇ ಕಟ್ಟಡ ವಾಲಲು ಕಾರಣ ಎನ್ನಲಾಗಿದೆ. ವಾಲಿರುವ ಕಟ್ಟಡದ ಹಾಗೂ ಪಕ್ಕದ ಮನೆಯಲ್ಲಿರುವ ಗ್ಯಾಸ್​ ಸಿಲೆಂಡರ್​ ಕನೆಕ್ಷನ್​ ತೆಗೆಯಲು ಸೂಚನೆ ನೀಡಲಾಗಿದೆ. ಹಾಗೇ ಸ್ಥಳದಲ್ಲಿ ಆಂಬುಲೆನ್ಸ್​, ವೈದ್ಯರು ಇರಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts