ಬ್ರಹ್ಮದೇವನಮಡು: ಗೋಲಗೇರಿಯ ಸಮೂಹ ಸಂಪನ್ಮೂಲ ಕೇಂದ್ರ, ಗೊಲ್ಲಾಳೇಶ್ವರ ಸಂಯುಕ್ತ ಪಪೂ ಮಹಾವಿದ್ಯಾಲಯ ಸಹಯೋಗದೊಂದಿಗೆ ಇತ್ತೀಚೆಗೆ ನಡೆದ ಗೋಲಗೇರಿ ಕ್ಲಸ್ಟರ್ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕ ಅಲ್ಲಾಪುರದ ಎಚ್ಪಿಎಸ್ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆ ವಿದ್ಯಾರ್ಥಿ ಈರಣ್ಣ ರೇಬಿನಾಳ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಲಯಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾದರು. ಭೀಮಾಶಂಕರ ಮಾಡಗಿ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ದ್ವಿತೀಯ, ಶ್ರೇಯಾ ರೇಬಿನಾಳ ಭಾಷಣ ಮತ್ತು ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ, ಮಂಜುನಾಥ ಬಿರಾದಾರ ಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಶಿಕ್ಷಣ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಎನ್.ಪಾಟೀಲ, ಮುಖ್ಯಶಿಕ್ಷಕ ವೈ.ಡಿ.ಬಿದನೂರ, ಸಹಶಿಕ್ಷಕ ಬಿ.ಐ.ಬನ್ನೆ, ಬಿ.ಆರ್.ತುಂಬಗಿ, ಮಡಿವಾಳ ನಾಯ್ಕೋಡಿ ಇತರರಿದ್ದರು.