ಹುಬ್ಬಳ್ಳಿ: ನಾಳೆ ಪೆಟ್ರೋಲ್-ಡೀಸೆಲ್ ಬಂಕ್ಗಳ ಮುಷ್ಕರ ಇದೆ ಎಂದು ಭಾವಿಸಿದ ಜನರು ಬಂಕ್ಗಳಲ್ಲಿ ಸಾಲುಗಟ್ಟಿ ನಿಂತ ದೃಶ್ಯ ಸೋಮವಾರ ಬೆಳಗ್ಗೆಯಿಂದಲೇ ಕಂಡುಬಂದಿತ್ತು.
ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟವು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ (ಮೇ 31) ಡಿಪೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್-ಡೀಸೆಲ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎನ್ನಲಾಗಿದೆ.
ಪೆಟ್ರೋಲ್-ಡೀಸೆಲ್ ಸಗಟು ಖರೀದಿಸದೆ ಬಂಕ್ನವರು ಮುಷ್ಕರ ನಡೆಸುತ್ತಾರೆ. ಅದಾಗ್ಯೂ ಸಾಮಾನ್ಯವಾಗಿ ಬಂಕ್ಗಳಲ್ಲಿ ಎರಡರಿಂದ ಮೂರು ದಿನಗಳಿಗೆ ಆಗುವಷ್ಟು ದಾಸ್ತಾನು ಇರುತ್ತದೆ. ಹಾಗಾಗಿ ನಾಳಿನ ಒಂದು ದಿನದ ಮುಷ್ಕರದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಸ್ಟಾಕ್ ಇರದಿದ್ದರೆ ಅಥವಾ ಇರುವ ಸ್ಟಾಕ್ ಖಾಲಿಯಾದರೆ ಮಾತ್ರ ಪೆಟ್ರೋಲ್-ಡೀಸೆಲ್ ಲಭ್ಯತೆಯಲ್ಲಿ ವ್ಯತ್ಯಯ ಆಗಬಹುದು ಎಂದು ಬಂಕ್ ಮಾಲೀಕರು ಹೇಳಿದ್ದಾರೆ.
ಆದರೆ ಸಾರ್ವಜನಿಕರಲ್ಲಿ ಹಲವರು ಪೆಟ್ರೋಲ್-ಡೀಸೆಲ್ ಬಂಕ್ಗಳೇ ನಾಳೆ ಬಂದ್ ಇರಲಿವೆ ಎಂದು ಭಾವಿಸಿ ಪೆಟ್ರೋಲ್ ಬಂಕ್ಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಹುಬ್ಬಳ್ಳಿಯ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ನೂರಾರು ಜನರು ಬಂಕ್ಗಳ ಮುಂದೆ ಜಮಾಯಿಸಿದ್ದು ಕಂಡುಬಂದಿದೆ. ಕ್ಯಾನ್, ಬ್ಯಾರಲ್ಗಳನ್ನು ತಂದು ವಾಹನ ಸವಾರರು ಸಾಲುಗಟ್ಟಿ ನಿಂತಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕೃಷಿ ಚಟುವಟಿಕೆಗಳಿಗೆ ಯಂತ್ರಗಳನ್ನು ಬಳಸುವುದರಿಂದ ಹೆಚ್ಚಾಗಿ ರೈತರೇ ಬಂಕ್ಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದಿತ್ತು. (ದಿಗ್ವಿಜಯ ನ್ಯೂಸ್)
ನಾಳೆ ಪೆಟ್ರೋಲ್ ಬಂಕ್ ಮಾಲೀಕರ ಸ್ಟ್ರೈಕ್: ವಾಹನ ಸವಾರರಿಗೆ ಇಲ್ಲಿದೆ ಮಹತ್ವದ ವಿಷಯ…
ಪತನಗೊಂಡ ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ: ಅಧಿಕಾರಿಗಳಿಂದ ಸ್ಪಷ್ಟನೆ