More

    ನಾನು ಬೀದಿಬೀದಿ ಸುತ್ತುತ್ತಿದ್ದರೆ, ಅನುರಾಗ್​ ಮಜಾ ಮಾಡಿಕೊಂಡಿದ್ದಾನೆ … ಪಾಯಲ್​ ಆರೋಪ

    ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಅತ್ಯಾಚಾರದ ದೂರನ್ನು ಮುಂಬೈ ಪೊಲೀಸರಿಗೆ ನೀಡಿದ್ದ ನಟಿ ಪಾಯಲ್​ ಘೋಶ್​, ದೂರು ಕೊಟ್ಟು ಇಷ್ಟು ದಿನವಾದರೂ ಅನುರಾಗ್​ ಕಶ್ಯಪ್​ ಅವರನ್ನು ಯಾಕೆ ವಿಚಾರಣೆ ಮಾಡಿಲ್ಲ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಎಸ್​ಪಿಬಿ ಹಾಡಿದ ಕೊನೆಯ ಹಾಡು ಯಾವ ಹೀರೋಗೆ? ನೀವೇ ನೋಡಿ …

    ತನ್ನನ್ನು ಅನುರಾಗ್​ ಕಶ್ಯಪ್​ 2013ರಲ್ಲಿ ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್​, ಅನುರಾಗ್​ ವಿರುದ್ಧ ಇತ್ತೀಚೆಗೆ ವರ್ಸೋವಾ ಪೊಲೀಸ್​ ಸ್ಟೇಶನ್​ನಲ್ಲಿ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಡ್ರಗ್ಸ್​​ ಆಕ್ಟ್​ನಡಿ ಅನುರಾಗ್​ ಕಶ್ಯಪ್​ ವಿರುದ್ಧ ಪಾಯಲ್ ಇನ್ನೊಂದು ಕೇಸನ್ನು ದಾಖಲಿಸಿದ್ದರು. ಆದರೆ, ವರ್ಸೋವಾ ಪೊಲೀಸರು ಇನ್ನೂ ಅನುರಾಗ್​ ಅವರನ್ನು ಕರೆದು ವಿಚಾರಣೆ ಮಾಡಿಲ್ಲವಂತೆ.

    ಈ ಕುರಿತು ಮಾತನಾಡಿರುವ ಪಾಯಲ್​, ‘ಅನುರಾಗ್​ ವಿರುದ್ಧ ನಾನು ದೂರು ಕೊಟ್ಟು ಒಂದು ವಾರವಾಯಿತು. ಪೊಲೀಸರು ನನ್ನನ್ನು ಸಾಕಷ್ಟು ಬಾರಿ ಠಾಣೆಗೆ ಅಲೆದಾಡಿಸಿದ್ದಾರೆ. ಪರೀಕ್ಷೆಗೆಂದು ಆಸ್ಪತ್ರೆಗೇ ಮೂರು ದಿನ ಕರೆಸಿಕೊಂಡಿದ್ದಾರೆ. ಆದರೆ, ಆರೋಪಿ ಅನುರಾಗ್​ ಅವರನ್ನು ಒಮ್ಮೆಯೂ ಕರೆಸಿಲ್ಲ. ನಾನು ಬೀದಿಬೀದಿ ಸುತ್ತುತ್ತಿದ್ದರೆ, ಅನುರಾಗ್​ ಮಜವಾಗಿ ಓಡಾಡಿಕೊಂಡಿದ್ದಾನೆ’ ಎಂದು ಪಾಯಲ್​ ಹೇಳಿದ್ದಾರೆ.

    ಇದನ್ನೂ ಓದಿ: ಕಾರಾವಾನ್​ನಲ್ಲಿ ಕುಳಿತು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರಂತೆ ಸುಶಾಂತ್​

    ಇನ್ನು ಪಾಯಲ್​ ವಕೀಲರು ಸಹ ವರ್ಸೋವಾ ಪೊಲೀಸರ ಕಾರ್ಯವೈಖರಿಯ ಬಗ್ಗೆ ಗರಂ ಆಗಿ ಮಾತನಾಡಿದ್ದಾರೆ. ‘ದೂರು ಕೊಟ್ಟು ಇಷ್ಟು ದಿನವಾದರೂ ಅನುರಾಗ್​ ಕಶ್ಯಪ್​ ಅವರನ್ನು ಕರೆದು ಪೊಲೀಸರು ವಿಚಾರಣೆ ಮಾಡಿಲ್ಲ. ಆದರೆ, ಪಾಯಲ್​ ಅವರನ್ನು ಪ್ರತಿದಿನ ಕರೆದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಪಾಯಲ್​, ಅನುರಾಗ್​ ತಮ್ಮ ಮೇಲೆ ದಾಳಿ ನಡೆಸಿದ ಜಾಗವನ್ನು ತೋರಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗಳಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಪೊಲೀಸರು ಅನುರಾಗ್​ ಅವರನ್ನು ಒಂದೇ ಒಂದು ದಿನಕ್ಕೂ ಠಾಣೆಗೆ ಕರೆಸಿ ಏನಾಗಿದೆ ಎಂದು ಕೇಳಿಲ್ಲ’ ಎಂದು ಆರೋಪಿಸಿದ್ದಾರೆ.

    ಯಾರ ಲೈಫಲ್ಲಿ ಏರಿಳಿತ ಇರಲ್ಲ ಹೇಳಿ? ಮತ್ತೆ ಗಂಡನ ಜತೆಯಾದ ಪೂನಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts